ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?

ಜ್ಯೋತಿಷ್ಯದಲ್ಲಿ ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?
ಶೃಂಗಾಟಕ, ವಜ್ರ ಮತ್ತು ಹಲಯೋಗದ ಪ್ರಕಾರ ನಿಮ್ಮ ಭವಿಷ್ಯ
Edited By: Rakesh Nayak Manchi

Updated on: Aug 15, 2023 | 8:19 PM

ಜ್ಯೋತಿಷ್ಯದಲ್ಲಿ (Astrology) ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ ಯೋಗ:

ಲಗ್ನ, ನವಮ ಮತ್ತು ಪಂಚಮಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶೃಂಗಾಟಕ ಯೋಗ. ಈ ಯೋಗದ ಜೊತೆ ಜನಿಸಿದವನು ಬಹಳ ಕಾಲ ಸುಖದ ಜೀವನವನ್ನು ನಡೆಸುವನು ಅಥವಾ ಜೀವನದ ಕೊನೆಯ ಭಾಗದಲ್ಲಿ ಹೆಚ್ಚು ಸುಖವನ್ನು ಅನುಭವಿಸುವನು ಎಂದೂ ಹೇಳುವರು.

ಹಲ ಯೋಗ:

ಲಗ್ನದಿಂದ 2, 6, 10 ಸ್ಥಾನ, 3, 7, 11 ಸ್ಥಾನ, 4, 8, 12 ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಹಲ ಯೋಗ ಎನ್ನುವರು. ಜನಿಸುವಾಗ ಈ ಯೋಗವಿದ್ದರೆ ಅವನು ಕೃಷಿಯಲ್ಲಿ ಆಸಕ್ತಿಯನ್ನು ಹೊಂದುವನು. ಕೃಷಿಯಲ್ಲಿ ತೊಡಗುವನು.

ಹಲ ಎಂದರೆ ನೇಗಿಲು ಎಂದರ್ಥ. ಈ ಯೋಗವೂ ಅದಕ್ಕೆ ಪೂರಕವಾಗಿ ಇರುವುದು. ಕೃಷಿ ಕಾರ್ಯಗಳಿಗೆ ಪೂರವಾಗಿ ಇರುವುದರಿಂದ ಇದನ್ನು ಹಲ ಯೋಗ ಎಂದೂ ಕರೆಯುವರು.

ಇದನ್ನೂ ಓದಿ: ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ವಜ್ರ ಯೋಗ:

ಲಗ್ನದಿಂದ ಸಪ್ತಮದವರೆಗೆ ಎಲ್ಲ ಶುಭಗ್ರಹರು ಅಂದರೆ ಪೂರ್ಣಚಂದ್ರ, ಶುಭಗ್ರಹಯುತನಾದ ಬುಧ, ಗುರು, ಶುಕ್ರ ಹಾಗೂ ಸಪ್ತಮದಿಂದ ದ್ವಾದಶದವರೆಗೆ ಪಾಪಗ್ರಹರೂ ಇದ್ದರೆ ಅಂದರೆ ಸೂರ್ಯ, ಅಮಾವಾಸ್ಯೆಯ ಚಂದ್ರ, ಕುಜ, ಪಾಪದ ಜೊತೆಗಿರುವ ಬುಧ, ಶನಿ, ರಾಹು ಹಾಗೂ ಕೇತು ಇದ್ದರೆ ವಜ್ರ ಯೋಗ.

ಈ ಯೋಗದಲ್ಲಿ ಜನಿಸಿದವನು ಬಾಲ್ಯ ಮತ್ತು ವೃದ್ಧಾವಸ್ಥೆಯಲ್ಲಿ ಭೋಗದಿಂದ ಹೆಚ್ಚು ಸುಖಿಯಾಗಿ ಇರುವರು. ಧೈರ್ಯದಿಂದ ಕೂಡಿದವನು ಅವನಾಗುವನು. ಎಲ್ಲ‌ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವನು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us