AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ

ತಿನಿಸುಗಳ ದರ ಏರಿಸಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಹೊಟೆಲ್​ಗಳು ಕರಿದ ತಿಂಡಿಗಳನ್ನು ತಯಾರಿಸುವುದನ್ನೇ ಕಡಿಮೆ ಮಾಡುತ್ತಿವೆ. ಕೆಲ ಹೊಟೆಲ್​ಗಳು ಬೆಲೆ ಹೆಚ್ಚಳ ಮಾಡಿವೆ.

ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ
ಅಡುಗೆ ಎಣ್ಣೆ ಮತ್ತು ಜಿಲೇಬಿ ತಯಾರಿಕೆ (ಪ್ರಾತಿನಿಧಿಕ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Mar 17, 2022 | 7:54 AM

Share

ಬೆಂಗಳೂರು: ಉಕ್ರೇನ್ ಮೇಲೆ ರಷ್ಯಾ ಸೇನೆ (Russia Ukraine Conflict) ನಡೆಸಿರುವ ಭೀಕರ ದಾಳಿಯಿಂದ ಅಡುಗೆಗೆ ಬಳಸುವ ಸೂರ್ಯಕಾಂತಿ ಎಣ್ಣೆಗೆ ವಿಶ್ವದಾದ್ಯಂತ ಸಂಕಷ್ಟ ಬಂದಿದೆ. ಭಾರತದಲ್ಲಿಯೂ ಅಡುಗೆಎಣ್ಣೆ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಕೊರೊನಾ ಸಂಕಷ್ಟದಿಂದ ಆಗಿದ್ದ ನಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಹೊಟೆಲ್​ ಉದ್ಯಮಕ್ಕೆ ಈ ಹೊಡೆತ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗೆಂದು ತಿನಿಸುಗಳ ದರ ಏರಿಸಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಹೊಟೆಲ್​ಗಳು ಕರಿದ ತಿಂಡಿಗಳನ್ನು ತಯಾರಿಸುವುದನ್ನೇ ಕಡಿಮೆ ಮಾಡುತ್ತಿವೆ. ಕೆಲ ಹೊಟೆಲ್​ಗಳು ಬೆಲೆ ಹೆಚ್ಚಳ ಮಾಡಿವೆ.

ಖಾದ್ಯತೈಲ ಸಂಗ್ರಹಕ್ಕೂ ರಾಜ್ಯ ಸರ್ಕಾರ ಮಿತಿ ಹೇರಿದೆ. ಹೀಗಾಗಿ ಬೇಕಿರುವಷ್ಟು ಪ್ರಮಾಣದಲ್ಲಿ ಅಡುಗೆಎಣ್ಣೆ ಸಂಗ್ರಹಿಸಲೂ ಹೊಟೆಲ್​ಗಳಿಗೆ ಸಾಧ್ಯವಾಗುತ್ತಿಲ್ಲ. ಬಹುತೇಕ ಹೊಟೆಲ್​ಗಳು ಕರಿದ ತಿಂಡಿಗಳಿಗೆ ಬದಲಾಗಿ, ಹುರಿದ ತಿಂಡಿಗಳನ್ನು ಗ್ರಾಹಕರಿಗೆ ಕೊಡಲು ಮುಂದಾಗಿವೆ. ಖಾದ್ಯತೈಲ ಬೆಲೆ ಏರಿಕೆಯಿಂದ ಹೊಟೆಲ್ ಉದ್ಯಮದ ಮೇಲೆ ಆಗಿರುವ ಪರಿಣಾಮ ಕುರಿತು ಚರ್ಚಿಸಲು ಶೀಘ್ರದಲ್ಲಿಯೇ ಸಭೆ ನಡೆಸಲು ಬೃಹತ್ ಬೆಂಗಳೂರು ಹೊಟೆಲ್ ಉದ್ಯಮಿಗಳ ಸಂಘ (Bruhat Bengaluru Hoteliers Association – BBHA) ಮುಂದಾಗಿದೆ. ಸಂಘದ ಪ್ರತಿನಿಧಿಗಳು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬೆಲೆ ಏರಿಕೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದರು.

‘ತಿನಿಸುಗಳ ದರ ಏರಿಸುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ವರ್ಗಾಯಿಸುವುದ ಸುಲಭ. ಆದರೆ ಗ್ರಾಹಕರ ಆರ್ಥಿಕ ಪರಿಸ್ಥಿತಿಯನ್ನೂ ನಾವು ಗಮನಿಸಬೇಕಿದೆ. ಹೀಗಾಗಿ ಕರಿದ ಅಥವಾ ಹೆಚ್ಚು ಎಣ್ಣೆ ಬಳಕೆಯಾಗುವ ವಸ್ತುಗಳಿಗೆ ಬದಲಾಗಿ ಇತರ ಸುಲಭ ಮಾರ್ಗಗಳನ್ನು ಅನುಸರಿಸಲು ಮುಂದಾಗಿದ್ದೇವೆ. ಕೆಲ ಹೊಟೆಲ್​ಗಳಿಗೆ ಅಗತ್ಯ ಪ್ರಮಾಣದಲ್ಲಿ ಖಾದ್ಯತೈಲ ಖರೀದಿಸಲೂ ಸಾಧ್ಯವಾಗುತ್ತಿಲ್ಲ ಎನ್ನುವ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ವರದಿ ಮಾಡಿವೆ.

ಬೆಲೆಯಲ್ಲಿ ಸಮತೂಕ ಕಾಯ್ದುಕೊಳ್ಳಲು ಹೊಟೆಲ್​ಗಳು ಊಟದ ಜೊತೆಗೆ ಕೊಡುತ್ತಿದ್ದ ವಸ್ತುಗಳಲ್ಲಿ ವ್ಯತ್ಯಯ ಮಾಡುವ ವಿಧಾನ ಕಂಡುಕೊಂಡಿವೆ. ‘ಪೂರಿಗೆ ಬದಲು ಚಪಾತಿ ಅಥವಾ ದೋಸೆ ಕೊಡುವುದು, ಹಪ್ಪಳ ಅಥವಾ ಬಜ್ಜಿ ಬದಲು ಹೆಚ್ಚುವರಿಯಾಗಿ ಅನ್ನದ ಇತರ ತಿಂಡಿ ಕೊಡುವ ಬಗ್ಗೆ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಹೊಟೆಲ್ ಮತ್ತು ರೆಸ್ಟೊರೆಂಟ್ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್.

ಹೊಟೆಲ್​ಗಳಲ್ಲಿ ಮಾತ್ರವಲ್ಲ, ಎಷ್ಟೋ ಮನೆಗಳಲ್ಲಿಯೂ ಎಣ್ಣೆ ಬಳಕೆ ಕಡಿಮೆಯಾಗಿದೆ. ‘ಆಂಬೊಡೆ, ಪಕೋಡದಂಥ ತಿಂಡಿಗಳನ್ನು ಮೊದಲು ವಾರಕ್ಕೆ ಮೂರು ದಿನವಾದರೂ ಮಾಡುತ್ತಿದ್ದೆವು. ಈಗ ಭಾನುವಾರಕ್ಕೆ ಸೀಮಿತಗೊಳಿಸಿಕೊಂಡಿದ್ದೇವೆ. ಅದರ ಬದಲು ಬೇರೆ ಕುರುಕಲು ತಿಂಡಿಗಳನ್ನು ಮಕ್ಕಳಿಗೆ ಮಾಡಿಕೊಡುತ್ತೇನೆ’ ಎನ್ನುತ್ತಾರೆ ದೊಡ್ಡಬಳ್ಳಾಪುರದ ಗೃಹಿಣಿ ಅಶ್ವಿನಿ.

ಇದನ್ನೂ ಓದಿ: Edible Oil: ವ್ಯಾಪಾರಿಗಳು ಖಾದ್ಯ ತೈಲದ ಬೆಲೆ ಏರಿಸಲು ರಷ್ಯಾ- ಉಕ್ರೇನ್​ ಯುದ್ಧವೇ ಅಸ್ತ್ರ

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ: ಮಾರಾಟಗಾರರ ಮೇಲೆ ಕೃತಕ ಅಭಾವ ಸೃಷ್ಟಿ ಆರೋಪ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ