AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದು ನಿಲ್ಲಿಸಿದ್ದ ಮುದ್ರಣಾಲಯಗಳಿಗೆ ಜೀವ ತುಂಬಿದ ಗ್ರಾಮ ಪಂಚಾಯತಿ ಚುನಾವಣೆ

ಗ್ರಾಮ ಪಂಚಾಯತ್ ಚುನಾವಣೆಯಿಂದ ಮುದ್ರಣಾಲಯಕ್ಕೆ ಜೀವ ಬಂದಿದೆ. ಗದಗ ಜಿಲ್ಲೆಯ ಏಳು ತಾಲ್ಲೂಕು ಸೇರಿದಂತೆ ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಸಹ ಗದಗ ಜಿಲ್ಲೆಗೆ ಬಂದು ಕರಪತ್ರಗಳನ್ನು ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇಲ್ಲದೆ ಕುಳಿತಿದ್ದ ಮುದ್ರಣಾಲಯಗಳು ಈಗ ರಾತ್ರಿ ಹಗಲು ಎನ್ನದೆ ಕೆಲಸ ನಿರ್ವಹಣೆ ಮಾಡುತ್ತಿವೆ.

ಸದ್ದು ನಿಲ್ಲಿಸಿದ್ದ ಮುದ್ರಣಾಲಯಗಳಿಗೆ ಜೀವ ತುಂಬಿದ ಗ್ರಾಮ ಪಂಚಾಯತಿ ಚುನಾವಣೆ
ಮುದ್ರಣ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ
Skanda
| Updated By: ಪೃಥ್ವಿಶಂಕರ|

Updated on:Dec 26, 2020 | 7:24 AM

Share

ಗದಗ: ಗದಗ-ಬೆಟಗೇರಿ ಅವಳಿ ನಗರಗಳು ಮುದ್ರಣ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿವೆ. ಹೆಜ್ಜೆ ಹೆಜ್ಜೆಗೂ ಮುದ್ರಣಾಲಯಗಳು ಗೋಚರಿಸುತ್ತವೆ. ಆದರೆ, ಈ ಬಾರಿ ಮಹಾಮಾರಿ ಕೊರೊನಾದಿಂದ ಮುದ್ರಣಾಲಯಗಳ ಸ್ಥಿತಿ ಹಿಂದೆಂದಿಗಿಂತಲೂ ಅಯೋಮಯವಾಗಿತ್ತು. ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿದ ಮುದ್ರಣಾಲಯಗಳು ಸಪ್ಪಗಾಗಿದ್ದವು.

ಕೊರೊನಾದಿಂದ ತಣ್ಣಗಾಗಿದ್ದ ಮುದ್ರಣಾಲಯಗಳಿಗೆ ಗ್ರಾಮ ಪಂಚಾಯತಿ ಎಲೆಕ್ಷನ್​ ಜೀವಕಳೆ ತಂದುಕೊಟ್ಟಿದೆ. ಲೋಕಲ್ ದಂಗಲ್ ಆರಂಭವಾದ ನಂತರ ಮುದ್ರಣಾಲಯಗಳು ಆರ್ಥಿಕವಾಗಿ ಚೇತರಿಕೆ ಕಂಡಿವೆ. ಮುದ್ರಣ ಕಾಶಿ ಗದಗ ಜಿಲ್ಲೆಯ ಮುದ್ರಣಾಲಯಗಳು ಮತ್ತೆ ಪುಟಿದೆದ್ದಿವೆ. ಲೋಕಲ್ ಫೈಟ್​ನಿಂದಾಗಿ ಒಟ್ಟು ಒಂದು ಕೋಟಿ ವಹಿವಾಟು ನಡೆದಿದೆ ಎಂದು ಮುದ್ರಣಾಲಯದ ಮಾಲೀಕರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಗದಗದಲ್ಲಿ ಮುದ್ರಣಗೊಳ್ಳುವ ಪಠ್ಯಪುಸ್ತಕ, ಗ್ರಂಥ, ಕ್ಯಾಲೆಂಡರ್ ಮುಂತಾದವುಗಳು ದೇಶ, ವಿದೇಶದಲ್ಲಿ ಸರಬರಾಜಾಗುತ್ತವೆ. ವರ್ಷದ 12 ತಿಂಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುದ್ರಣಾಲಯಗಳು ಈ ಬಾರಿ ಲಾಕ್​ಡೌನ್​ನಿಂದ ಸಂಪೂರ್ಣ ಸ್ತಬ್ಧವಾಗಿದ್ದವು. ಲಾಕ್​ಡೌನ್​ ತೆರವುಗೊಂಡ ನಂತರ ಕೂಡಾ ಹೆಚ್ಚಿನ ಬೇಡಿಕೆ ಬಂದಿರಲಿಲ್ಲ.

ಶಾಲೆ, ಕಾಲೇಜು ಆರಂಭವಾಗದೇ ಇರುವುದು ಸಹ ಹೊಡೆತಕ್ಕೆ ಕಾರಣ ಶಾಲೆ-ಕಾಲೇಜುಗಳು ಇನ್ನೂ ಆರಂಭವಾಗದೇ ಇರುವುದು ಮುದ್ರಣಾಲಯಗಳಿಗೆ ದೊಡ್ಡ ಹೊಡೆತ ನೀಡಿದ್ದವು. ಅಂತೂ ಈಗ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಆರಂಭವಾಗಿರೋದರಿಂದ ಮುದ್ರಣಾಲಯಗಳು ಚೇತರಿಕೆ ಕಂಡಿವೆ. ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮುದ್ರಣಕ್ಕೂ ಅನುಕೂಲವಾಗಿದೆ ಎಂದು ಮುದ್ರಣಾಲಯಗಳ ಮಾಲೀಕರು ಅಭಿಪ್ರಾಯಪಡುತ್ತಿದ್ದಾರೆ.

ಲೋಕಲ್ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು ಪ್ರಚಾರಕ್ಕೆ ಕರಪತ್ರಗಳನ್ನು ಪ್ರಿಂಟ್​ ಹಾಕಿಸಲು ಬರ್ತಾ ಇದ್ದಾರೆ. ಇದರಿಂದಾಗಿ ಆರ್ಥಿಕ ಚೇತರಿಕೆ ಕಾಣುತ್ತಿದ್ದೇವೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುಮಾರು‌ 150 ಕ್ಕೂ ಹೆಚ್ಚು ಮುದ್ರಣಾಲಯಗಳಿದ್ದು, ಒಂದು ಕೋಟಿ ವಹಿವಾಟು ನಡೆದಿದೆ ಅಂತಾರೆ ಮುದ್ರಣಾಲಯದ ಅಧ್ಯಕ್ಷ ವಿನತಕುಮಾರ್ ಜಗತಾಪ್​ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಿಂದ ಮುದ್ರಣಾಲಯಕ್ಕೆ ಜೀವ ಬಂದಿದೆ. ಗದಗ ಜಿಲ್ಲೆಯ ಏಳು ತಾಲ್ಲೂಕು ಸೇರಿದಂತೆ ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಸಹ ಗದಗ ಜಿಲ್ಲೆಗೆ ಬಂದು ಕರಪತ್ರಗಳನ್ನು ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇಲ್ಲದೆ ಕುಳಿತಿದ್ದ ಮುದ್ರಣಾಲಯಗಳು ಈಗ ರಾತ್ರಿ ಹಗಲು ಎನ್ನದೆ ಕೆಲಸ ನಿರ್ವಹಣೆ ಮಾಡುತ್ತಿವೆ. ಈಗೀಗ ಮದುವೆ, ಮುಂಜಿ ಕಾರ್ಯಗಳಿಗೆ ಆಮಂತ್ರಣ ಮಾಡಿಸಲು ಜನರು ಬರುತ್ತಿದ್ದಾರೆ. ಆದರೂ ಚುನಾವಣೆ ಬಂದಿರೋದರಿಂದ ಆರ್ಥಿಕವಾಗಿ ನಮಗೆ ಬಹಳ ಲಾಭ ಆಗಿದೆ ಎಂದು ವೆಂಕಟೇಶ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕರೊನಾ ಹಾವಳಿಯಿಂದ ದಿವಾಳಿಯಾಗಿದ್ದ, ಮುದ್ರಣಾಲಯಗಳು ಅಂತೂ ಇಂತೂ ಆರ್ಥಿಕವಾಗಿ ಚೇತರಿಕೆ ಕಂಡಿವೆ. ಒಟ್ಟಿನಲ್ಲಿ ಲೋಕಲ್ ಅಖಾಡದಿಂದ ಈ ಉದ್ಯಮ ಚೇತರಿಕೆ ಕಂಡಿದೆ. ಸದ್ದಡಗಿದ್ದ ಮುದ್ರಣಾಲಯಗಳಲ್ಲಿ ಮತ್ತೆ ಸದ್ದು ಮೂಡುವ ಮೂಲಕ ಮರುಜೀವ ಬಂದಂತಾಗಿದೆ.

ಕೊರೊನಾ ಸಂಕಷ್ಟದ ನಡುವೆ ಚಿಗುರಿಕೊಂಡ ಸ್ಥಳೀಯ ಉದ್ಯಮಗಳಿವು!

Published On - 7:23 am, Sat, 26 December 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!