ಸದ್ದು ನಿಲ್ಲಿಸಿದ್ದ ಮುದ್ರಣಾಲಯಗಳಿಗೆ ಜೀವ ತುಂಬಿದ ಗ್ರಾಮ ಪಂಚಾಯತಿ ಚುನಾವಣೆ

ಗ್ರಾಮ ಪಂಚಾಯತ್ ಚುನಾವಣೆಯಿಂದ ಮುದ್ರಣಾಲಯಕ್ಕೆ ಜೀವ ಬಂದಿದೆ. ಗದಗ ಜಿಲ್ಲೆಯ ಏಳು ತಾಲ್ಲೂಕು ಸೇರಿದಂತೆ ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಸಹ ಗದಗ ಜಿಲ್ಲೆಗೆ ಬಂದು ಕರಪತ್ರಗಳನ್ನು ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇಲ್ಲದೆ ಕುಳಿತಿದ್ದ ಮುದ್ರಣಾಲಯಗಳು ಈಗ ರಾತ್ರಿ ಹಗಲು ಎನ್ನದೆ ಕೆಲಸ ನಿರ್ವಹಣೆ ಮಾಡುತ್ತಿವೆ.

ಸದ್ದು ನಿಲ್ಲಿಸಿದ್ದ ಮುದ್ರಣಾಲಯಗಳಿಗೆ ಜೀವ ತುಂಬಿದ ಗ್ರಾಮ ಪಂಚಾಯತಿ ಚುನಾವಣೆ
ಮುದ್ರಣ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ
Follow us
| Updated By: ಪೃಥ್ವಿಶಂಕರ

Updated on:Dec 26, 2020 | 7:24 AM

ಗದಗ: ಗದಗ-ಬೆಟಗೇರಿ ಅವಳಿ ನಗರಗಳು ಮುದ್ರಣ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿವೆ. ಹೆಜ್ಜೆ ಹೆಜ್ಜೆಗೂ ಮುದ್ರಣಾಲಯಗಳು ಗೋಚರಿಸುತ್ತವೆ. ಆದರೆ, ಈ ಬಾರಿ ಮಹಾಮಾರಿ ಕೊರೊನಾದಿಂದ ಮುದ್ರಣಾಲಯಗಳ ಸ್ಥಿತಿ ಹಿಂದೆಂದಿಗಿಂತಲೂ ಅಯೋಮಯವಾಗಿತ್ತು. ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿದ ಮುದ್ರಣಾಲಯಗಳು ಸಪ್ಪಗಾಗಿದ್ದವು.

ಕೊರೊನಾದಿಂದ ತಣ್ಣಗಾಗಿದ್ದ ಮುದ್ರಣಾಲಯಗಳಿಗೆ ಗ್ರಾಮ ಪಂಚಾಯತಿ ಎಲೆಕ್ಷನ್​ ಜೀವಕಳೆ ತಂದುಕೊಟ್ಟಿದೆ. ಲೋಕಲ್ ದಂಗಲ್ ಆರಂಭವಾದ ನಂತರ ಮುದ್ರಣಾಲಯಗಳು ಆರ್ಥಿಕವಾಗಿ ಚೇತರಿಕೆ ಕಂಡಿವೆ. ಮುದ್ರಣ ಕಾಶಿ ಗದಗ ಜಿಲ್ಲೆಯ ಮುದ್ರಣಾಲಯಗಳು ಮತ್ತೆ ಪುಟಿದೆದ್ದಿವೆ. ಲೋಕಲ್ ಫೈಟ್​ನಿಂದಾಗಿ ಒಟ್ಟು ಒಂದು ಕೋಟಿ ವಹಿವಾಟು ನಡೆದಿದೆ ಎಂದು ಮುದ್ರಣಾಲಯದ ಮಾಲೀಕರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಗದಗದಲ್ಲಿ ಮುದ್ರಣಗೊಳ್ಳುವ ಪಠ್ಯಪುಸ್ತಕ, ಗ್ರಂಥ, ಕ್ಯಾಲೆಂಡರ್ ಮುಂತಾದವುಗಳು ದೇಶ, ವಿದೇಶದಲ್ಲಿ ಸರಬರಾಜಾಗುತ್ತವೆ. ವರ್ಷದ 12 ತಿಂಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುದ್ರಣಾಲಯಗಳು ಈ ಬಾರಿ ಲಾಕ್​ಡೌನ್​ನಿಂದ ಸಂಪೂರ್ಣ ಸ್ತಬ್ಧವಾಗಿದ್ದವು. ಲಾಕ್​ಡೌನ್​ ತೆರವುಗೊಂಡ ನಂತರ ಕೂಡಾ ಹೆಚ್ಚಿನ ಬೇಡಿಕೆ ಬಂದಿರಲಿಲ್ಲ.

ಶಾಲೆ, ಕಾಲೇಜು ಆರಂಭವಾಗದೇ ಇರುವುದು ಸಹ ಹೊಡೆತಕ್ಕೆ ಕಾರಣ ಶಾಲೆ-ಕಾಲೇಜುಗಳು ಇನ್ನೂ ಆರಂಭವಾಗದೇ ಇರುವುದು ಮುದ್ರಣಾಲಯಗಳಿಗೆ ದೊಡ್ಡ ಹೊಡೆತ ನೀಡಿದ್ದವು. ಅಂತೂ ಈಗ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಆರಂಭವಾಗಿರೋದರಿಂದ ಮುದ್ರಣಾಲಯಗಳು ಚೇತರಿಕೆ ಕಂಡಿವೆ. ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮುದ್ರಣಕ್ಕೂ ಅನುಕೂಲವಾಗಿದೆ ಎಂದು ಮುದ್ರಣಾಲಯಗಳ ಮಾಲೀಕರು ಅಭಿಪ್ರಾಯಪಡುತ್ತಿದ್ದಾರೆ.

ಲೋಕಲ್ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು ಪ್ರಚಾರಕ್ಕೆ ಕರಪತ್ರಗಳನ್ನು ಪ್ರಿಂಟ್​ ಹಾಕಿಸಲು ಬರ್ತಾ ಇದ್ದಾರೆ. ಇದರಿಂದಾಗಿ ಆರ್ಥಿಕ ಚೇತರಿಕೆ ಕಾಣುತ್ತಿದ್ದೇವೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುಮಾರು‌ 150 ಕ್ಕೂ ಹೆಚ್ಚು ಮುದ್ರಣಾಲಯಗಳಿದ್ದು, ಒಂದು ಕೋಟಿ ವಹಿವಾಟು ನಡೆದಿದೆ ಅಂತಾರೆ ಮುದ್ರಣಾಲಯದ ಅಧ್ಯಕ್ಷ ವಿನತಕುಮಾರ್ ಜಗತಾಪ್​ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಿಂದ ಮುದ್ರಣಾಲಯಕ್ಕೆ ಜೀವ ಬಂದಿದೆ. ಗದಗ ಜಿಲ್ಲೆಯ ಏಳು ತಾಲ್ಲೂಕು ಸೇರಿದಂತೆ ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಸಹ ಗದಗ ಜಿಲ್ಲೆಗೆ ಬಂದು ಕರಪತ್ರಗಳನ್ನು ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇಲ್ಲದೆ ಕುಳಿತಿದ್ದ ಮುದ್ರಣಾಲಯಗಳು ಈಗ ರಾತ್ರಿ ಹಗಲು ಎನ್ನದೆ ಕೆಲಸ ನಿರ್ವಹಣೆ ಮಾಡುತ್ತಿವೆ. ಈಗೀಗ ಮದುವೆ, ಮುಂಜಿ ಕಾರ್ಯಗಳಿಗೆ ಆಮಂತ್ರಣ ಮಾಡಿಸಲು ಜನರು ಬರುತ್ತಿದ್ದಾರೆ. ಆದರೂ ಚುನಾವಣೆ ಬಂದಿರೋದರಿಂದ ಆರ್ಥಿಕವಾಗಿ ನಮಗೆ ಬಹಳ ಲಾಭ ಆಗಿದೆ ಎಂದು ವೆಂಕಟೇಶ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕರೊನಾ ಹಾವಳಿಯಿಂದ ದಿವಾಳಿಯಾಗಿದ್ದ, ಮುದ್ರಣಾಲಯಗಳು ಅಂತೂ ಇಂತೂ ಆರ್ಥಿಕವಾಗಿ ಚೇತರಿಕೆ ಕಂಡಿವೆ. ಒಟ್ಟಿನಲ್ಲಿ ಲೋಕಲ್ ಅಖಾಡದಿಂದ ಈ ಉದ್ಯಮ ಚೇತರಿಕೆ ಕಂಡಿದೆ. ಸದ್ದಡಗಿದ್ದ ಮುದ್ರಣಾಲಯಗಳಲ್ಲಿ ಮತ್ತೆ ಸದ್ದು ಮೂಡುವ ಮೂಲಕ ಮರುಜೀವ ಬಂದಂತಾಗಿದೆ.

ಕೊರೊನಾ ಸಂಕಷ್ಟದ ನಡುವೆ ಚಿಗುರಿಕೊಂಡ ಸ್ಥಳೀಯ ಉದ್ಯಮಗಳಿವು!

Published On - 7:23 am, Sat, 26 December 20

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ