ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್​ಗೆ 5 ಎಕರೆ ಜಮೀನು: ಇದು ಅಧಿಕಾರ ದುರುಪಯೋಗಲ್ಲವೇ ಲಹರ್‌ ಸಿಂಗ್ ಪ್ರಶ್ನೆ

|

Updated on: Aug 25, 2024 | 8:50 PM

ಮಾರ್ಚ್ 2024 ರಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಹಂಚಿಕೆಗೆ ಹೇಗೆ ಒಪ್ಪಿಗೆ ನೀಡಿದರು? ಕೆಐಎಡಿಬಿ ಭೂಮಿಗೆ ಅರ್ಹರಾಗಲು ಖರ್ಗೆ ಕುಟುಂಬವು ಯಾವಾಗ ಏರೋಸ್ಪೇಸ್ ಉದ್ಯಮಿಗಳಾದರು? ಈ ಅಕ್ರಮ ಹಂಚಿಕೆಯ ವಿಷಯ ಆರ್‌ಟಿಐ ಕಾರ್ಯಕರ್ತನ ಮೂಲಕ ರಾಜ್ಯಪಾಲರ ಕಚೇರಿಗೂ ತಲುಪಿದೆ ಎಂದು ಹೇಳಿದ್ದಾರೆ.

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್​ಗೆ 5 ಎಕರೆ ಜಮೀನು: ಇದು ಅಧಿಕಾರ ದುರುಪಯೋಗಲ್ಲವೇ ಲಹರ್‌ ಸಿಂಗ್ ಪ್ರಶ್ನೆ
Follow us on

ಬೆಂಗಳೂರು, ಆಗಸ್ಟ್​ 25: ರಾಜ್ಯ ರಾಜಕೀಯದಲ್ಲಿ ಮುಡಾ ಸೈಟ್ ಸದ್ದು ಮಾಡುತ್ತಿರುವ ಹೊತ್ತಲ್ಲೇ, ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಮಾರಾಟ ಮಾಡಲು ತೆಗೆದುಕೊಂಡಿರುವ ನಿರ್ಧಾರ ಗುದ್ದಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಇದೀಗ ಬಿಜೆಪಿ ಸಂಸದ ಲಹರ್‌ ಸಿಂಗ್ (Lahar Singh)​ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕೆಐಎಡಿಬಿ ಭೂಮಿ ಪಡೆಯಲು ಖರ್ಗೆ ಕುಟುಂಬ ಯಾವಾಗ ಏರೋಸ್ಪೇಸ್ ಉದ್ಯಮಿಗಳಾಗಿದ್ದು? ಮಾರ್ಚ್ 2024ರಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಈ ಹಂಚಿಕೆಗೆ ಒಪ್ಪಿಗೆ ನೀಡಿದ್ದು ಹೇಗೆ? ಇದು ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ಸ್ವಹಿತಾಸಕ್ತಿ ಸಂಘರ್ಷವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ಗೆ (ಸಿದ್ಧಾರ್ಥ ವಿಹಾರ ಟ್ರಸ್ಟ್) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 05 ಎಕರೆ ಭೂಮಿಯನ್ನು (ಒಟ್ಟು 45.94 ಎಕರೆ) ಮಂಜೂರು ಮಾಡಿರುವುದು ದಾಖಲೆಗಳ ಆಧಾರದಲ್ಲಿ ಸುದ್ದಿ ವರದಿ ಬೆಳಕಿಗೆ ಬಂದಿದೆ. ಬೆಂಗಳೂರು ಸಮೀಪದ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಎಸ್‌ಸಿ ಕೋಟಾದಡಿಯಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿದೆ.

ಲಹರ್‌ ಸಿಂಗ್ ಟ್ವೀಟ್ 

ಕುತೂಹಲಕಾರಿ ವಿಷಯವೆಂದರೆ ಸ್ವತಃ ಖರ್ಗೆ ಅವರು, ಅವರ ಪತ್ನಿ, ಶ್ರೀಮತಿ ರಾಧಾಬಾಯಿ ಖರ್ಗೆ, ಅವರ ಅಳಿಯ ಮತ್ತು ಗುಲ್ಬರ್ಗ ಸಂಸದ ರಾಧಾಕೃಷ್ಣ, ಕರ್ನಾಟಕ ಸರ್ಕಾರದ ಮತ್ತೊಬ್ಬ ಪುತ್ರ ಮತ್ತು ಸಚಿವ  ಪ್ರಿಯಾಂಕ್ ಮತ್ತೊಬ್ಬ ಮಗ ರಾಹುಲ್ ಖರ್ಗೆ ಮತ್ತು ಇತರರು ಟ್ರಸ್ಟಿಗಳಾಗಿದ್ದಾರೆ. ಇದು ಅಧಿಕಾರದ ದುರುಪಯೋಗ, ಸ್ವಜನಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷದ ಬಗ್ಗೆಯೇ?

ಇದನ್ನೂ ಓದಿ: ಈ ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನದಂತೆ ಜಿಂದಾಲ್​ಗೆ ಭೂಮಿ ನೀಡಲಾಗಿದೆ: ಎಂಬಿ ಪಾಟೀಲ್ ಸ್ಪಷ್ಟನೆ

ಮಾರ್ಚ್ 2024 ರಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಹಂಚಿಕೆಗೆ ಹೇಗೆ ಒಪ್ಪಿಗೆ ನೀಡಿದರು? ಕೆಐಎಡಿಬಿ ಭೂಮಿಗೆ ಅರ್ಹರಾಗಲು ಖರ್ಗೆ ಕುಟುಂಬವು ಯಾವಾಗ ಏರೋಸ್ಪೇಸ್ ಉದ್ಯಮಿಗಳಾದರು? ಈ ಅಕ್ರಮ ಹಂಚಿಕೆಯ ವಿಷಯ ಆರ್‌ಟಿಐ ಕಾರ್ಯಕರ್ತನ ಮೂಲಕ ರಾಜ್ಯಪಾಲರ ಕಚೇರಿಗೂ ತಲುಪಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ: ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ

ಮೈಸೂರಿನ ವಿವಾದಿತ ಮುಡಾ ನಿವೇಶನಗಳನ್ನು ಸಿದ್ದರಾಮಯ್ಯನವರು ಬಿಟ್ಟುಕೊಡುವಂತೆ ಖರ್ಗೆ ಕುಟುಂಬ ಅಂತಿಮವಾಗಿ ಈ ಭೂಮಿಯನ್ನು ಬಿಟ್ಟುಕೊಡಬೇಕೇ? ಈ ಹಂಚಿಕೆಯನ್ನು ತನಿಖೆ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.