Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಚ್ಕೊಳ್ಳಲಿಲ್ಲಾ ಅಂದ್ರೆ ಕಚ್ಕೊಳ್ಳೋದು ಗ್ಯಾರಂಟಿ ಅಂತಿದ್ದಾರೆ ಇವರೆಲ್ಲ..; ಯಾಕೆ ಮುಚ್ಕೊಳ್ಳಬೇಕು? ಏನು ಚುಚ್ಚಿಸಿಕೊಳ್ಳಬೇಕು? ತಿಳಿಯಲು ವಿಡಿಯೋ ನೋಡಿ..!

ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್​ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್​ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ.

ಮುಚ್ಕೊಳ್ಳಲಿಲ್ಲಾ ಅಂದ್ರೆ ಕಚ್ಕೊಳ್ಳೋದು ಗ್ಯಾರಂಟಿ ಅಂತಿದ್ದಾರೆ ಇವರೆಲ್ಲ..; ಯಾಕೆ ಮುಚ್ಕೊಳ್ಳಬೇಕು? ಏನು ಚುಚ್ಚಿಸಿಕೊಳ್ಳಬೇಕು? ತಿಳಿಯಲು ವಿಡಿಯೋ ನೋಡಿ..!
ಡಾ.ವಿವೇಕ್​ ಪಾಡೇಗಲ್​
Follow us
TV9 Web
| Updated By: Lakshmi Hegde

Updated on:Jun 22, 2021 | 12:02 PM

‘ಮುಖ ಮುಚ್ಕೊಂಡು ಬಾ..ಮುಖ ಮುಚ್ಕೊಂಡು ಹೋಗೋಲ್ಲೆ..’ ಹೀಗೊಂದು ವಿಡಿಯೋ ಸಾಂಗ್​ ಇದೀಗ ಸಖತ್​ ವೈರಲ್​ ಆಗುತ್ತಿದೆ. ನಿರ್ವಾಣ ಫಿಲ್ಮ್ಸ್​​ ಕ್ರಿಯೇಶನ್​​ನ ಈ ವಿಡಿಯೋ ಸಾಂಗ್​​ನಲ್ಲಿ ನಟ ಸಾಯಿಕುಮಾರ್​, ಅಯ್ಯೋ ಶ್ರದ್ಧಾ, ಅದ್ವಿತಿ ಶೆಟ್ಟಿ, ಅಶ್ವಿಥಿ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ಹಾಗಂತ ಇದು ಸಿನಿಮಾಕ್ಕೆ ಸಂಬಂಧಪಟ್ಟ ಹಾಡಂತೂ ಖಂಡಿತ ಅಲ್ಲ. ಬದಲಿಗೆ ಕೊರೊನಾ ವಿರುದ್ಧ ಮಾಸ್ಕ್​ ಉಪಯೋಗವನ್ನು ಸಾರುವ ಒಂದು ಪ್ರಯತ್ನ. ಇದು ಬೆಂಗಳೂರು ಫೋರ್ಟೀಸ್ ಆಸ್ಪತ್ರೆಯ ಎದೆ ರೋಗ ವಿಭಾಗದ ನಿರ್ದೇಶಕ ಡಾ. ವಿವೇಕ್​ ಪಾಡೇಗಲ್​ ಅವರ ಪರಿಕಲ್ಪನೆ..ಯೋಜನೆ.

ಕೊರೊನಾ ಮೊದಲ ಅಲೆ ತುಸು ಕಡಿಮೆಯಾಗುತ್ತಿದ್ದಂತೆ ಜನರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಎರಡನೇ ಅಲೆ ಜೋರಾಗಿಯೇ ಅಬ್ಬರಿಸಿತು. ಲಾಕ್​ಡೌನ್​, ಕರ್ಫ್ಯೂ ನಿಯಮಗಳು ಸ್ವಲ್ಪವೇ ಸಡಿಲವಾದರೂ ಸಾಕು ಜನರು ಒಮ್ಮೆಲೇ, ಕೊರೊನಾ ಸೋಂಕು ಹೋರಟೇಹೋಯ್ತೇನೋ ಎಂಬಂತೆ ರಸ್ತೆಗೆ ಇಳಿಯುತ್ತಾರೆ. ಪಾರ್ಟಿ, ಟ್ರಿಪ್​ ಅನ್ಕೊಂಡು ಹೊರಟೇ ಬಿಡ್ತಾರೆ. ಮಾಸ್ಕ್​, ಸ್ಯಾನಿಟೈಸರ್​, ಸಾಮಾಜಿಕ, ದೈಹಿಕ ಅಂತರದಂತಹ ಮುನ್ನೆಚ್ಚರಿಕಾ ನಿಯಮಗಳನ್ನು ಮರೆಯುತ್ತಾರೆ. ಆದರೆ ಅದು ತೀರ ಅಪಾಯಕಾರಿ ಎಂಬುದು ಡಾ. ವಿವೇಕ್​ ಪಾಡೇಗಲ್​ ಸೇರಿ ಅದೆಷ್ಟೋ ವೈದ್ಯರ ಅಭಿಪ್ರಾಯ ಮತ್ತು ಎಚ್ಚರಿಕೆ. ಕೊವಿಡ್​ 19 ಎರಡನೇ ಅಲೆಯಲ್ಲಂತೂ ಅದೆಷ್ಟು ಸಮಸ್ಯೆಗಳು ಎದುರಾದವು. ಆಕ್ಸಿಜನ್​ ಅಭಾವ, ಬೆಡ್​ಗಳ ಕೊರತೆಯಿಂದ ಸಾವಿನ ಸಂಖ್ಯೆಯೂ ಹೆಚ್ಚಾಯಿತು. ಇದನ್ನೆಲ್ಲ ನೋಡಿದ ಡಾ. ವಿವೇಕ್​ ಪಾಡೇಗಲ್​ ಹೇಗಾದರೂ ಸರಿ ಜನರಲ್ಲಿ ಕೊರೊನಾ ನಿಯಂತ್ರಣದ ಅರಿವು ಮೂಡಿಸಬೇಕು. ಅದರಲ್ಲೂ ಮುಖ್ಯವಾಗಿ ಮಾಸ್ಕ್​​ನ ಮಹತ್ವವನ್ನು ತಿಳಿಸಬೇಕು ಎಂದು ಯೋಚಿಸಿ ಇಂಥದ್ದೊಂದು ಯೋಜನೆಗೆ ಮುಂದಾದರು. ವೈದ್ಯಕೀಯ ಕ್ಷೇತ್ರದ ತಜ್ಞರು ಸೂಚಿಸಿದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದರೆ, ಅದರಲ್ಲೂ ಮಾಸ್ಕ್​ ತಪ್ಪದೆ ಧರಿಸಿದರೆ ಕೊವಿಡ್​ 19 ಪ್ರಸರಣವನ್ನು ಶೇ.70ರಷ್ಟು ತಪ್ಪಿಸಬಹುದು. ಅದೇ ಕಾರಣಕ್ಕೆ ಈಗ ಮಾಸ್ಕ್​ನ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲು ‘ಏಯ್​ ಸಿಗೋಣ ಗುರು’ ಎಂಬ ಒಂದು ಅರ್ಥ ಪೂರ್ಣ ವಿಡಿಯೋ ಸಾಂಗ್​​ನ್ನು ಹೊರತರಲಾಗಿದೆ. ವ್ಯಾಕ್ಸಿನ್​ ಪಡೆಯಿರಿ ಎಂದೂ ಇದರಲ್ಲಿ ಹೇಳಲಾಗಿದೆ.

ಕೊರೊನಾ ನಿಯಂತ್ರಣದ ಬಗ್ಗೆ ಜನರಲ್ಲಿ ಹೇಗಾದರೂ ಅರಿವು ಮೂಡಿಸಬೇಕು ಎಂದು ಡಾ. ವಿವೇಕ್​ ಹಲವು ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಸಫಲತೆ ಕಾಣಲಿಲ್ಲ. ಕೊನೆಗೆ ಹೀಗೊಂದು ಪರಿಕಲ್ಪನೆ ಇಟ್ಟುಕೊಂಡು, ಹಲವು ಗೊಂದಲಗಳೊಂದಿಗೆ Nirvana Films ನ ನಿರ್ಮಾಪಕಿ ಸ್ನೇಹಾ ಐಪ್​ ವರ್ಮಾರನ್ನು ಭೇಟಿಯಾದರು. ಅವರೂ ಸಹ ತುಂಬ ಖುಷಿಯಿಂದ ಒಪ್ಪಿಕೊಂಡರು. ನಂತರ ಸಾಹಿತ್ಯವನ್ನು ಸ್ಕ್ರಿಪ್ಟ್​ರೂಂನ ರಾಜೇಶ್​ ರಾಮಸ್ವಾಮಿ(ರಾಮ್​ಸಾಮ್​) ಬರೆದರು. ದೀಪಕ್​ ಅಲೆಕ್ಸಾಂಡರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೇ, ಇವರಿಬ್ಬರೂ ಸೇರಿ ಹಾಡನ್ನು ಸಖತ್​ ಆಗಿ ಹಾಡಿದ್ದಾರೆ. ರ್ಯಾಪರ್ ಸುಮುಖ್​ ಸಾಥ್​ ನೀಡಿದ್ದಾರೆ. ಇಡೀ ನಿರ್ವಾಣ ತಂಡದ ಶ್ರಮ ಇದರಲ್ಲಿ ಎದ್ದು ಕಾಣುತ್ತದೆ. ಇನ್ನು ವಿಡಿಯೋದಲ್ಲಿರುವ ಕಲಾವಿದರೆಲ್ಲ ಉಚಿತವಾಗಿಯೇ ಅಭಿನಯಿಸಿದ್ದಾರೆ. ನೀವು ಈ ಹಾಡಿನಲ್ಲಿ ತಮಾಷೆಯುಕ್ತ ಪದಪ್ರಯೋಗವನ್ನು ನೋಡಬಹುದು. ಆದರೆ ತುಂಬ ಅರ್ಥಪೂರ್ಣವಾಗಿ, ಅರಿವು ಮೂಡಿಸುವಂತಿದೆ.

ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್​ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್​ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ. ವಿಡಿಯೋ ವೈರಲ್ ಆಗಬೇಕು..ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಈ ವಿಡಿಯೋವನ್ನೊಮ್ಮೆ ನೀವೂ ನೋಡ್ಕೊಂಡು ಬಿಡಿ..

Published On - 12:00 pm, Tue, 22 June 21

Daily horoscope: ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily horoscope: ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ