AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಚ್ಕೊಳ್ಳಲಿಲ್ಲಾ ಅಂದ್ರೆ ಕಚ್ಕೊಳ್ಳೋದು ಗ್ಯಾರಂಟಿ ಅಂತಿದ್ದಾರೆ ಇವರೆಲ್ಲ..; ಯಾಕೆ ಮುಚ್ಕೊಳ್ಳಬೇಕು? ಏನು ಚುಚ್ಚಿಸಿಕೊಳ್ಳಬೇಕು? ತಿಳಿಯಲು ವಿಡಿಯೋ ನೋಡಿ..!

ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್​ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್​ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ.

ಮುಚ್ಕೊಳ್ಳಲಿಲ್ಲಾ ಅಂದ್ರೆ ಕಚ್ಕೊಳ್ಳೋದು ಗ್ಯಾರಂಟಿ ಅಂತಿದ್ದಾರೆ ಇವರೆಲ್ಲ..; ಯಾಕೆ ಮುಚ್ಕೊಳ್ಳಬೇಕು? ಏನು ಚುಚ್ಚಿಸಿಕೊಳ್ಳಬೇಕು? ತಿಳಿಯಲು ವಿಡಿಯೋ ನೋಡಿ..!
ಡಾ.ವಿವೇಕ್​ ಪಾಡೇಗಲ್​
TV9 Web
| Edited By: |

Updated on:Jun 22, 2021 | 12:02 PM

Share

‘ಮುಖ ಮುಚ್ಕೊಂಡು ಬಾ..ಮುಖ ಮುಚ್ಕೊಂಡು ಹೋಗೋಲ್ಲೆ..’ ಹೀಗೊಂದು ವಿಡಿಯೋ ಸಾಂಗ್​ ಇದೀಗ ಸಖತ್​ ವೈರಲ್​ ಆಗುತ್ತಿದೆ. ನಿರ್ವಾಣ ಫಿಲ್ಮ್ಸ್​​ ಕ್ರಿಯೇಶನ್​​ನ ಈ ವಿಡಿಯೋ ಸಾಂಗ್​​ನಲ್ಲಿ ನಟ ಸಾಯಿಕುಮಾರ್​, ಅಯ್ಯೋ ಶ್ರದ್ಧಾ, ಅದ್ವಿತಿ ಶೆಟ್ಟಿ, ಅಶ್ವಿಥಿ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ಹಾಗಂತ ಇದು ಸಿನಿಮಾಕ್ಕೆ ಸಂಬಂಧಪಟ್ಟ ಹಾಡಂತೂ ಖಂಡಿತ ಅಲ್ಲ. ಬದಲಿಗೆ ಕೊರೊನಾ ವಿರುದ್ಧ ಮಾಸ್ಕ್​ ಉಪಯೋಗವನ್ನು ಸಾರುವ ಒಂದು ಪ್ರಯತ್ನ. ಇದು ಬೆಂಗಳೂರು ಫೋರ್ಟೀಸ್ ಆಸ್ಪತ್ರೆಯ ಎದೆ ರೋಗ ವಿಭಾಗದ ನಿರ್ದೇಶಕ ಡಾ. ವಿವೇಕ್​ ಪಾಡೇಗಲ್​ ಅವರ ಪರಿಕಲ್ಪನೆ..ಯೋಜನೆ.

ಕೊರೊನಾ ಮೊದಲ ಅಲೆ ತುಸು ಕಡಿಮೆಯಾಗುತ್ತಿದ್ದಂತೆ ಜನರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಎರಡನೇ ಅಲೆ ಜೋರಾಗಿಯೇ ಅಬ್ಬರಿಸಿತು. ಲಾಕ್​ಡೌನ್​, ಕರ್ಫ್ಯೂ ನಿಯಮಗಳು ಸ್ವಲ್ಪವೇ ಸಡಿಲವಾದರೂ ಸಾಕು ಜನರು ಒಮ್ಮೆಲೇ, ಕೊರೊನಾ ಸೋಂಕು ಹೋರಟೇಹೋಯ್ತೇನೋ ಎಂಬಂತೆ ರಸ್ತೆಗೆ ಇಳಿಯುತ್ತಾರೆ. ಪಾರ್ಟಿ, ಟ್ರಿಪ್​ ಅನ್ಕೊಂಡು ಹೊರಟೇ ಬಿಡ್ತಾರೆ. ಮಾಸ್ಕ್​, ಸ್ಯಾನಿಟೈಸರ್​, ಸಾಮಾಜಿಕ, ದೈಹಿಕ ಅಂತರದಂತಹ ಮುನ್ನೆಚ್ಚರಿಕಾ ನಿಯಮಗಳನ್ನು ಮರೆಯುತ್ತಾರೆ. ಆದರೆ ಅದು ತೀರ ಅಪಾಯಕಾರಿ ಎಂಬುದು ಡಾ. ವಿವೇಕ್​ ಪಾಡೇಗಲ್​ ಸೇರಿ ಅದೆಷ್ಟೋ ವೈದ್ಯರ ಅಭಿಪ್ರಾಯ ಮತ್ತು ಎಚ್ಚರಿಕೆ. ಕೊವಿಡ್​ 19 ಎರಡನೇ ಅಲೆಯಲ್ಲಂತೂ ಅದೆಷ್ಟು ಸಮಸ್ಯೆಗಳು ಎದುರಾದವು. ಆಕ್ಸಿಜನ್​ ಅಭಾವ, ಬೆಡ್​ಗಳ ಕೊರತೆಯಿಂದ ಸಾವಿನ ಸಂಖ್ಯೆಯೂ ಹೆಚ್ಚಾಯಿತು. ಇದನ್ನೆಲ್ಲ ನೋಡಿದ ಡಾ. ವಿವೇಕ್​ ಪಾಡೇಗಲ್​ ಹೇಗಾದರೂ ಸರಿ ಜನರಲ್ಲಿ ಕೊರೊನಾ ನಿಯಂತ್ರಣದ ಅರಿವು ಮೂಡಿಸಬೇಕು. ಅದರಲ್ಲೂ ಮುಖ್ಯವಾಗಿ ಮಾಸ್ಕ್​​ನ ಮಹತ್ವವನ್ನು ತಿಳಿಸಬೇಕು ಎಂದು ಯೋಚಿಸಿ ಇಂಥದ್ದೊಂದು ಯೋಜನೆಗೆ ಮುಂದಾದರು. ವೈದ್ಯಕೀಯ ಕ್ಷೇತ್ರದ ತಜ್ಞರು ಸೂಚಿಸಿದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದರೆ, ಅದರಲ್ಲೂ ಮಾಸ್ಕ್​ ತಪ್ಪದೆ ಧರಿಸಿದರೆ ಕೊವಿಡ್​ 19 ಪ್ರಸರಣವನ್ನು ಶೇ.70ರಷ್ಟು ತಪ್ಪಿಸಬಹುದು. ಅದೇ ಕಾರಣಕ್ಕೆ ಈಗ ಮಾಸ್ಕ್​ನ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲು ‘ಏಯ್​ ಸಿಗೋಣ ಗುರು’ ಎಂಬ ಒಂದು ಅರ್ಥ ಪೂರ್ಣ ವಿಡಿಯೋ ಸಾಂಗ್​​ನ್ನು ಹೊರತರಲಾಗಿದೆ. ವ್ಯಾಕ್ಸಿನ್​ ಪಡೆಯಿರಿ ಎಂದೂ ಇದರಲ್ಲಿ ಹೇಳಲಾಗಿದೆ.

ಕೊರೊನಾ ನಿಯಂತ್ರಣದ ಬಗ್ಗೆ ಜನರಲ್ಲಿ ಹೇಗಾದರೂ ಅರಿವು ಮೂಡಿಸಬೇಕು ಎಂದು ಡಾ. ವಿವೇಕ್​ ಹಲವು ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಸಫಲತೆ ಕಾಣಲಿಲ್ಲ. ಕೊನೆಗೆ ಹೀಗೊಂದು ಪರಿಕಲ್ಪನೆ ಇಟ್ಟುಕೊಂಡು, ಹಲವು ಗೊಂದಲಗಳೊಂದಿಗೆ Nirvana Films ನ ನಿರ್ಮಾಪಕಿ ಸ್ನೇಹಾ ಐಪ್​ ವರ್ಮಾರನ್ನು ಭೇಟಿಯಾದರು. ಅವರೂ ಸಹ ತುಂಬ ಖುಷಿಯಿಂದ ಒಪ್ಪಿಕೊಂಡರು. ನಂತರ ಸಾಹಿತ್ಯವನ್ನು ಸ್ಕ್ರಿಪ್ಟ್​ರೂಂನ ರಾಜೇಶ್​ ರಾಮಸ್ವಾಮಿ(ರಾಮ್​ಸಾಮ್​) ಬರೆದರು. ದೀಪಕ್​ ಅಲೆಕ್ಸಾಂಡರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೇ, ಇವರಿಬ್ಬರೂ ಸೇರಿ ಹಾಡನ್ನು ಸಖತ್​ ಆಗಿ ಹಾಡಿದ್ದಾರೆ. ರ್ಯಾಪರ್ ಸುಮುಖ್​ ಸಾಥ್​ ನೀಡಿದ್ದಾರೆ. ಇಡೀ ನಿರ್ವಾಣ ತಂಡದ ಶ್ರಮ ಇದರಲ್ಲಿ ಎದ್ದು ಕಾಣುತ್ತದೆ. ಇನ್ನು ವಿಡಿಯೋದಲ್ಲಿರುವ ಕಲಾವಿದರೆಲ್ಲ ಉಚಿತವಾಗಿಯೇ ಅಭಿನಯಿಸಿದ್ದಾರೆ. ನೀವು ಈ ಹಾಡಿನಲ್ಲಿ ತಮಾಷೆಯುಕ್ತ ಪದಪ್ರಯೋಗವನ್ನು ನೋಡಬಹುದು. ಆದರೆ ತುಂಬ ಅರ್ಥಪೂರ್ಣವಾಗಿ, ಅರಿವು ಮೂಡಿಸುವಂತಿದೆ.

ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್​ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್​ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ. ವಿಡಿಯೋ ವೈರಲ್ ಆಗಬೇಕು..ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಈ ವಿಡಿಯೋವನ್ನೊಮ್ಮೆ ನೀವೂ ನೋಡ್ಕೊಂಡು ಬಿಡಿ..

Published On - 12:00 pm, Tue, 22 June 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು