ಮಹಿಳೆ ಸೇರಿ ಇಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿಸಲಗ: ಹಾಸನದಲ್ಲಿ ಮುಂದುವರೆದ ಕಾಡಾನೆಗಳ ಪುಂಡಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 13, 2024 | 5:24 PM

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಒಂದೆಡೆ ಕಾಡಾನೆಗಳು ಗುಂಪು ಗುಂಪಾಗಿ ಅಲೆಯುತ್ತಾ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದರೆ, ಮತ್ತೊಂದೆಡೆ ಒಂಟಿಸಲಗ ಪುಂಡಾಟ ಮೆರೆಯುತ್ತಿವೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಮಹಿಳೆ ಸೇರಿ ಇಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ, ಹುಲೆಮಕ್ಕಿ ಗ್ರಾಮದಲ್ಲಿ ನಡೆದಿದೆ.

ಮಹಿಳೆ ಸೇರಿ ಇಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿಸಲಗ: ಹಾಸನದಲ್ಲಿ ಮುಂದುವರೆದ ಕಾಡಾನೆಗಳ ಪುಂಡಾಟ
ಗಾಯಾಳುಗಳಿಗೆ ಚಿಕಿತ್ಸೆ
Follow us on

ಹಾಸನ, ಏಪ್ರಿಲ್ 13: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ (wild elephant) ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ, ಹುಲೆಮಕ್ಕಿ ಗ್ರಾಮದಲ್ಲಿ ನಡೆದಿದೆ. ಮಹಿಳೆ ಸೇರಿ ಇಬ್ಬರನ್ನು ಸೊಂಡಿಲಿನಿಂದ ಕಾಡಾನೆ ಎತ್ತಿ ಬಿಸಾಡಿದೆ. ಮೂಡಿಗೆರೆ ಭಾಗದಿಂದ ಬಂದಿರುವ 2 ಕಾಡಾನೆಗಳಿಂದ ಪುಂಡಾಟ ಮಾಡಲಾಗುತ್ತಿದೆ. ಹಮೀದ್ ಎಂಬುವರ ತೋಟದಲ್ಲಿ 15 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪಕ್ಕದ ಮಾದೇಗೌಡರ ಕಾಫಿ ತೋಟಕ್ಕೆ ನುಗ್ಗಿದ ಒಂಟಿಸಲಗ ಈ ವೇಳೆ ಏಕಾಏಕಿ ಕಾರ್ಮಿಕರ ಮೇಲೆ ದಾಳಿ ಮಾಡಿದೆ.

ಗಣೇಶ್‌ ಎಂಬುವರನ್ನು ಸೊಂಡಿಲಿನಿಂದ ಎಸೆದು ತುಳಿದಿದೆ. ಸದ್ಯ ಮಹಿಳೆ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರ್​ಎಫ್​ಓ ಶಿಲ್ಪಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಒಂಟಿಸಲಗ ಪುಂಡಾಟ: ಜನರಿಗೆ ಜೀವ ಭಯ

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಒಂದೆಡೆ ಕಾಡಾನೆಗಳು ಗುಂಪು ಗುಂಪಾಗಿ ಅಲೆಯುತ್ತಾ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದರೆ, ಮತ್ತೊಂದೆಡೆ ಒಂಟಿಸಲಗ ಪುಂಡಾಟ ಮೆರೆಯುತ್ತಿವೆ. ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಸಮೀಪ ಕರಡಿ ಹೆಸರಿನ ಕಾಡಾನೆ ಜನರ ಮೇಲೆ ಅಟ್ಯಾಕ್ ಮಾಡಿತ್ತು. ಅದೃಷ್ಟವಶಾತ್ ಇಬ್ಬರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಮಾರ್ಚ್ 4ರಂದು ಇದೇ ಆನೆ ಕೆಸಗುಲಿ ಗ್ರಾಮದಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೃದ್ದನ ಮೇಲೆ ಎರಗಿತ್ತು.

ಇದನ್ನೂ ಓದಿ: Elephant Attack: ಕಾರ್ಮಿಕನ ಮೇಲೆ ಕಾಡಾನೆ ದಾಳಿ, ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆನೆ ಬರುತ್ತಿರುವುದನ್ನು ಕಂಡು ಹೇಗೋ ಓಡಿ ಕಾರಿನಡಿ ಅಡಗಿ ಬಡಕೂಲಿ ಕಾರ್ಮಿಕ ಜೀವ ಉಳಿಸಿಕೊಂಡಿದ್ದ. ನಿತ್ಯವೂ ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ಊರಲ್ಲಿ ಇದೇ ರೀತಿಯಾಗಿ ದಾಳಿ ಮಾಡುತ್ತಿವೆ.

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ, ಬೇಲೂರು ಬಳಿಯ ಗ್ರಾಮವೊಂದಕ್ಕೆ ಒಂಟಿಸಲಗ ಪ್ರವೇಶ, ಆತಂಕದಲ್ಲಿ ಗ್ರಾಮಸ್ಥರು

ಹಾಡು ಹಗಲಿನಲ್ಲಿ ಊರು ಮನೆ ಕೇರಿ ಎಂದು ಲೆಕ್ಕಿಸದೆ ಜನರ ಮೇಲೆರಗುತ್ತಿರುವ ಪುಂಡಾನೆಗಳು ಜನರ ಜೀವಕ್ಕೆ ಸಂಚಕಾರ ತರುತ್ತಿದ್ದು ಸಮಸ್ಯೆಗೆ ಕಡಿವಾಣ ಹಾಕಬೇಕಿದ್ದ ಅರಣ್ಯ ಇಲಾಖೆ ಮಾತ್ರ ಕೈ ಕಟ್ಟಿ ಕುಳಿತಿದ್ದರೆ ಜನರು ಜೀವ ಕೈಯಲ್ಲಿ ಹಿಡಿದು ಓಡಾವಂತಾಗಿದೆ.

ಈ ಭಾಗದಲ್ಲಿ ಕಾಡಾನೆ ಮಾನವ ಸಂಘರ್ಷ ತಾರಕಕ್ಕೇರಿದೆ. ಒಂಟಿಸಲಗ ನಾಡನ್ನೆ ಕಾಡು ಮಾಡಿಕೊಂಡು ಅಲೆಯುತ್ತಿವೆ. ಮತ್ತೊಂದು ಅನಾಹುತ ಆಗುವ ಮೊದಲು ಸರ್ಕಾರ ಅರಣ್ಯ ಇಲಾಖೆ ಅಗತ್ಯ ಕ್ರಮ ವಹಿಸಿ ಜನರ ಆತಂಕ ದೂರಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:10 pm, Sat, 13 April 24