AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಸಂಚಾರಿ ವಿಜಯ್​ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ ಸ್ಪಷ್ಟನೆ

ಕಡೂರು ತಾಲ್ಲೂಕು ಚವಳೂರಿನಲ್ಲಿ ಸಿಂಗಟಗೇರೆ ಹೋಬಳಿ ಸಿದ್ದರಾಮನಳ್ಳಿಯಲ್ಲಿ ನನ್ನ ಜನನವಾಗಿದ್ದು, ರಂಗಾಪುರ ಗ್ರಾಮದಲ್ಲಿ ವಿಜಯ್ ಹುಟ್ಟಿದ್ದ. ಆದರೆ ನಾವು ಬೆಳೆದಿದ್ದೆಲ್ಲ ಪಂಚನಹಳ್ಳಿ ಗ್ರಾಮದಲ್ಲಿ. ಹೀಗಾಗಿ ಪಂಚನಹಳ್ಳಿಯೇ ನಮ್ಮ ಊರು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿದೆ.

ನಟ ಸಂಚಾರಿ ವಿಜಯ್​ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ  ಸ್ಪಷ್ಟನೆ
2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಿನಿಮಾ ಸಂಚಾರಿ ವಿಜಯ್​ ಅವರ ಮೊದಲ ಸಿನಿಮಾ. ರಮೇಶ್​ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್​, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್​ ಕೂಡ ಕಾಣಿಸಿಕೊಂಡಿದ್ದರು.
TV9 Web
| Edited By: ಆಯೇಷಾ ಬಾನು|

Updated on: Jun 23, 2021 | 9:45 AM

Share

ಸಂಚಾರಿ ವಿಜಯ್ ನಿಧನರಾದ ಬಳಿಕ ಅವರ ವೈಯಕ್ತಿಕ ಜೀವನದ ಕುರಿತು ಹಲವು ವಿಷಯಗಳು ಕೇಳಿಬಂದಿದ್ದವು. ಚಿತ್ರರಂಗದಲ್ಲಿನ ಅವರ ಗೆಳೆಯರು ಎಂದು ಹೇಳಿಕೊಂಡ ಕೆಲವರು ‘ಸಂಚಾರಿ ವಿಜಯ್ ಜಾತಿ ನಿಂದನೆಯಿಂದ ಬಳಲಿದ್ದರು’  ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಈ ವಿವಾದದ ಬಗ್ಗೆ ಸ್ವತಃ ಸಂಚಾರಿ ವಿಜಯ್ ಅಣ್ಣ ವಿರೂಪಾಕ್ಷ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಕಡೂರು ತಾಲ್ಲೂಕು ಚವಳೂರಿನಲ್ಲಿ ಸಿಂಗಟಗೇರೆ ಹೋಬಳಿ ಸಿದ್ದರಾಮನಳ್ಳಿಯಲ್ಲಿ ನನ್ನ ಜನನವಾಗಿದ್ದು, ರಂಗಾಪುರ ಗ್ರಾಮದಲ್ಲಿ ವಿಜಯ್ ಹುಟ್ಟಿದ್ದ. ಆದರೆ ನಾವು ಬೆಳೆದಿದ್ದೆಲ್ಲ ಪಂಚನಹಳ್ಳಿ ಗ್ರಾಮದಲ್ಲಿ. ಹೀಗಾಗಿ ಪಂಚನಹಳ್ಳಿಯೇ ನಮ್ಮ ಊರು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿದೆ. ಪಂಚನಹಳ್ಳಿನೇ ನಮ್ಮ ಹುಟ್ಟೂರು ಅನ್ನೋ ಭಾವನೆ ಇದೆ. ಪಂಚನಹಳ್ಳಿಯಲ್ಲಿ ನಮಗೆ ಯಾರೂ ಯಾವುದೇ ಜಾತಿ ಭೇದ ಮಾಡಿರಲಿಲ್ಲ. ಇಡೀ ಊರವರು ನಮ್ಮನ್ನು ಮನೆ‌ಮಕ್ಕಳಂಗೆ ಕಾಪಾಡಿದ್ದರು. ತಮ್ಮನಿಗೆ (ಸಂಚಾರಿ ವಿಜಯ್​​ಗೆ) ಪ್ರಶಸ್ತಿ ಬಂದಾಗ ಎಲ್ಲರೂ ಹರಸಿದ್ದರು. ಊರೆಲ್ಲ ಸಿಹಿಯೂಟ ಹಂಚಿ ಸಂಭ್ರಮಿಸಿದ್ದರು. ಅಂದಿನ ಈ ಘಟನೆಗಳ ಕುರಿತು ಯಾವುದೇ ಬರಹಗಳನ್ನೂ ಎಲ್ಲೂ ದಾಖಲಿಸಿರಲಿಲ್ಲ ಎಂದು ಸಂಚಾರಿ ವಿಜಯ್ ಸಹೋದರ ವಿರೂಪಾಕ್ಷ ಸುಳ್ಳುಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿಷಯಗಳು ಸತ್ಯಕ್ಕೆ ದೂರವಾದದ್ದು. ನಮ್ಮನ್ನು ಯಾರೂ ಜಾತಿಬೇಧದಿಂದ ಕಾಣಲಿಲ್ಲ. ಪಂಚನಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ನಮ್ಮ ತಾಯಿಯೆ ಹೆರಿಗೆ ಮಾಡಿಸಿದ್ದಾರೆ. ಅಲ್ಲಿ ಯಾವ ಜಾತಿಬೇಧವೂ ಇರಲಿಲ್ಲ. ಆದರೆ ಸದ್ಯ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ದಯವಿಟ್ಟು ಪಂಚನಹಳ್ಳಿ ಗ್ರಾಮಸ್ಥರು ಈ ಸುದ್ದಿಗಳಿಗೆ ಕಿವಿಗೊಡಬೇಡಿ. ನಾನು ಅಥವಾ ಸಂಚಾರಿ ವಿಜಯ್ ಸ್ವತಃ ಈ ಆರೋಪ ಮಾಡಿಲ್ಲ. ಹೀಗಾಗಿ, ಗ್ರಾಮಸ್ಥರು ಈ ಸುದ್ದಿಗೆ ಕಿವಿಗೊಡಬೇಡಿ. ಅಲ್ಲದೇ ಸಂಚಾರಿ ವಿಜಯ್​ಗೆ ಬಾಡಿಗೆ ಕಟ್ಟಲೂ ಹಣ ಇರಲಿಲ್ಲ ಎಂಬುದೂ ಸುಳ್ಳು ಸುದ್ದಿ ಎಂದು ಸಂಚಾರಿ ವಿಜಯ್ ಅಣ್ಣ ವಿರುಪಾಕ್ಷ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ​ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ

ಸಂಚಾರಿ ವಿಜಯ್​ಗೆ ಮತ್ತೊಂದು ಮುಖ ಇತ್ತು, ಅದನ್ನು ನಾನು ಕಂಡಿದ್ದೇನೆ; ನೀನಾಸಂ ಸತೀಶ್​

(Alleged allegation of caste discrimination against actor Sanchari Vijay Brother Virupaksha clarified)

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು