AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಟ್ ಆಫ್ ಲಿವಿಂಗ್ ಪಾರಂಪರಿಕ ಶಾಲೆಯಿಂದ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಪ್ರಶಸ್ತಿ ಪ್ರದಾನ

ದಿ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಯ 22ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇನ್ನು ಇದೇ ವೇಳೆ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಎಂಬ ಗೌರವಾನ್ವಿತ ಪದವಿ ಪ್ರದಾನ ಮಾಡಲಾಯಿತು. ಅಲ್ಲದೇ ವಿವಿಧ ಬ್ಯಾಚ್‌ಗಳ ವಿದ್ಯಾರ್ಥಿಗಳು ಹಲವು ವೈದಿಕ ಸಂಪ್ರದಾಯಗಳ ಕುರಿತು ವಿವರವಾದ ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಿದ್ದು, ಅವುಗಳ ವಿವರ ಇಲ್ಲಿದೆ.

ಆರ್ಟ್ ಆಫ್ ಲಿವಿಂಗ್ ಪಾರಂಪರಿಕ ಶಾಲೆಯಿಂದ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಪ್ರಶಸ್ತಿ ಪ್ರದಾನ
Art Of Living
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Mar 06, 2025 | 11:03 PM

Share

ಬೆಂಗಳೂರು, (ಮಾರ್ಚ್​ 06): ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಯ 22ನೇ ವಾರ್ಷಿಕೋತ್ಸವವನ್ನು ದಿ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ವೇದಾಧ್ಯಯನದ ಪ್ರಮುಖ ಸಂಸ್ಥೆಗಳಲ್ಲೊಂದಾದ ಈ ಪಾಠಶಾಲೆಯ ವಾರ್ಷಿಕ ಕಾರ್ಯಕ್ರಮವು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರ ದಿವ್ಯ ಆಶೀರ್ವಾದದೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ವಿದ್ವತ್ಪೂರ್ಣ ಸಮ್ಮೇಳನ, ಭವ್ಯ ಪ್ರದರ್ಶನ ಹಾಗೂ ಬಹು-ನಿರೀಕ್ಷಿತ ಪದವೀಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ರತ್ನಗಿರಿಯ ಶ್ರೀ ಬಾಲಮುರುಗನ್ ದೇವಸ್ಥಾನದ ಶ್ರೀ ಬಾಲಮುರುಗನ್ ಆದಿಮಾಯಿ ಸ್ವಾಮಿಗಳು ಮುಖ್ಯ ಅತಿಥಿಯಾಗಿ ಪದವೀಪ್ರದಾನ ಭಾಷಣವನ್ನು ನೀಡಿದರು.

ಇನ್ನು ಇದೇ ವೇಳೆ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಎಂಬ ಗೌರವಾನ್ವಿತ ಪದವಿ ಪ್ರದಾನ ಮಾಡಲಾಯಿತು. ಅವರು ವೇದ ಆಗಮ ಶಾಸ್ತ್ರಗಳಲ್ಲಿ ಎಂಟು ವರ್ಷಗಳ ಕಠಿಣ, ಸಮಗ್ರ ವಸತಿ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಪದವೀಧರರಲ್ಲಿ ಹಲವರು ದೇಶ-ವಿದೇಶಗಳ ಗೌರವಾನ್ವಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದು, ಭವ್ಯ ವೇದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಈ ಅದ್ಭುತ ಕ್ಷಣಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಒಂದು ವಿಶಿಷ್ಟ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಂದಿರ ವಾಸ್ತುಶಿಲ್ಪ, ವೈದಿಕ ಸಂಪ್ರದಾಯಗಳು ಹಾಗೂ ಪವಿತ್ರ ರೇಖಾಗಣಿತದ ಆಕರ್ಷಕ ನೋಟ ಸಿಗುವಂತೆ ಮಾಡಲಾಗಿತ್ತು.

ವಿವಿಧ ಬ್ಯಾಚ್‌ಗಳ ವಿದ್ಯಾರ್ಥಿಗಳು ಹಲವು ವೈದಿಕ ಸಂಪ್ರದಾಯಗಳ ಕುರಿತು ವಿವರವಾದ ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಿದರು.  ಅವು ಈ ಕೆಳಗಿನಂತಿವೆ.

  • ಉತ್ತಮ ಪಕ್ಷ ಯಾಗಶಾಲೆ – ಸಂಕೀರ್ಣವಾದ ವೈದಿಕ ಹವನಗಳಲ್ಲಿ ಬಳಸುವ ಪ್ರಗತಿಶೀಲ ಅಗ್ನಿಕುಂಡ ವಿನ್ಯಾಸ.
  • ಸಹಸ್ರ ಲಿಂಗಂ – ಒಂದೇ ದೇವಸ್ಥಾನದಲ್ಲಿ ಸಾವಿರ ಶಿವಲಿಂಗಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವುದು. ಇದು ಅನಂತ ವಿಶ್ವ ಶಕ್ತಿಯನ್ನು ಸಾಕಾರಗೊಳಿಸುವುದು.
  •  ಶ್ರೀ ಚಕ್ರಂ – ಪವಿತ್ರ ರೇಖಾಗಣಿತದ ಮೂಲಕ ದೈವೀ ಶಕ್ತಿಯ ಪ್ರತೀಕವಾಗಿರುವ, ತಾಂತ್ರಿಕ ಸಂಕೇತ.
  •  ಶಂಖಾಭಿಷೇಕ ಮಂಡಲಂ – ಸಂಕೀರ್ಣವಾದ ಮಂಡಲ ಮಾದರಿಗಳಲ್ಲಿ, ಪವಿತ್ರ ಶಂಖಗಳ ಮೂಲಕ ಜಲ ಅರ್ಪಣೆ ಮಾಡುವ ವಿಶಿಷ್ಟ ವೈದಿಕ ಆಚರಣೆ.
  •  ಅತಿರುದ್ರ ಯಾಗಶಾಲೆ – ಭಗವಾನ್ ರುದ್ರನ ಆರಾಧನೆಗಾಗಿ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುವ, ಅತ್ಯಂತ ಅಪರೂಪವಾದ ವೈದಿಕ ಹವನ ಪ್ರಕ್ರಿಯೆ.
  •  ಪಂಚಾಸನ ಪಂಚಮಾವರಣಂ – ಐದು ಆಸನಗಳ ತಾಂತ್ರಿಕ ವಿಧಿಗಳು ಮತ್ತು ಅವುಗಳ ರಕ್ಷಣಾತ್ಮಕ ಆವರಣಗಳ ಸಂಕೀರ್ಣ ಚಿತ್ರಣ.
  •  ಪಂಚರಾತ್ರಾಗಮ ಪಂಚಾಗ್ನಿ ಯಾಗಶಾಲೆ – ಪಂಚರಾತ್ರ ಪರಂಪರೆಯ ಐದು ಪವಿತ್ರ ಅಗ್ನಿಗಳನ್ನು ಪ್ರತಿಬಿಂಬಿಸುವ, ಪ್ರಗತಿಶೀಲ ಅನುಷ್ಠಾನ ಕೊಠಡಿ.
  •  ಪಂಚಗವ್ಯ ಕ್ರಮಂ ಮತ್ತು ಪಂಚಾಮೃತ ಕ್ರಮಂ – ಶುದ್ಧೀಕರಣ ಹಾಗೂ ದೈವ ಅರ್ಪಣೆಗಳಿಗಾಗಿ, ಪವಿತ್ರ ಗೋವುಗಳಿಂದ ಪಡೆದ ಪದಾರ್ಥಗಳಿಂದ ಮಾಡುವ ತಯಾರಿಕೆಯ ವಿವರವಾದ ಪ್ರಸ್ತುತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ