AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಗೆಲುವಿನ ಸರದಾರ ಜಯಸಿಂಹ ಟಗರು 5 ಲಕ್ಷಕ್ಕೆ ಮಾರಾಟ!

ಆ ಟಗರಿನ ಹೆಸರು ಜಯಸಿಂಹ, ಅದು ಕಣಕ್ಕೆ ಇಳಿದರೆ ಎದುರಾಳಿಗೆ ನಡುಕ ಹುಟ್ತಿತ್ತು. ಜಯಸಿಂಹ ಕಾದಾಟಕ್ಕೆ ಇಳಿದ್ರೆ ಗೆಲವು ಕಟ್ಟಿಟ್ಟ ಬುತ್ತಿ. ಜಯಸಿಂಹ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೇ ಪರ ಜಿಲ್ಲೆಯಲ್ಲೂ ಹೆಸರು ಮಾಡಿದ್ದಾನೆ. ಇಂತಹ ಟಗರು ಬರೊಬ್ಬರಿ ಐದು ಲಕ್ಷಕ್ಕೆ ಮಾರಾಟವಾಗಿದೆ.

ಬಾಗಲಕೋಟೆ: ಗೆಲುವಿನ ಸರದಾರ ಜಯಸಿಂಹ ಟಗರು 5 ಲಕ್ಷಕ್ಕೆ ಮಾರಾಟ!
ಜಯಸಿಂಹ ಟಗರು
TV9 Web
| Edited By: |

Updated on:Oct 21, 2024 | 12:10 PM

Share

ಬಾಗಲಕೋಟೆ, ಅಕ್ಟೋಬರ್​ 21: ಗುಳೇದಗುಡ್ಡ (Guledgudda) ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಜಯಸಿಂಹ ಎಂಬ ಟಗರು (Tagaru) ಬರೋಬ್ಬರಿ ಐದು ಲಕ್ಷ ರೂ.ಗೆ ಮಾರಾಟವಾಗಿದೆ. ಐದು ಲಕ್ಷಕ್ಕೆ‌ ಮಾರಾಟವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಾಳಗಕ್ಕೆ ಬಳಸುವ ಟಗರು ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದು ಸಾಮಾನ್ಯ. ಆದರೆ ಐದು ಲಕ್ಷಕ್ಕೆ ಮಾರಾಟವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ತೆಗ್ಗಿ ಗ್ರಾಮದ ಬಸವರಾಜ ಎಂಬುವರು ಮೂಲತಃ ಟಗರು ಸಾಕಾಣಿಕೆದಾರರು. ಎರಡು ವರ್ಷದ ಹಿಂದೆ ಈ ಜಯಸಿಂಹ ಎಂಬ ಟಗರನ್ನು 90 ಸಾವಿರ ರೂ ಕೊಟ್ಟು ಖರೀದಿ ಮಾಡಿದ್ದರು. ಇದೀಗ, ಈ ಟಗರನ್ನು ಧಾರವಾಡ ಮೂಲದ ಆರ್​ಎಕ್ಸ್​​ವೈ ಎಂಬ ಟಗರು ಪ್ರೀಯ ಗ್ರೂಪ್​ನವರು ಬರೋಬ್ಬರಿ 5 ಲಕ್ಷದ 1 ಸಾವಿರ ರೂ ಕೊಟ್ಟು ಖರೀದಿಸಿದ್ದಾರೆ.

ಈ ಜಯಸಿಂಹ ಟಗರಿನ ಸಾಧನೆಯ ಬಗ್ಗೆ ಹೇಳುವದಾದರೇ, ಜಯಸಿಂಹ ಯಾವುದೇ ಟಗರಿನ ಕಾಳಗದಲ್ಲಿ ಸೋಲನ್ನು ಕಾಣದೇ ಇರುವ ಧೀರ. ಇದರಿಂದ ಮಾಲೀಕ ಬಸವರಾಜ ಇದಕ್ಕೆ ಪ್ರೀತಿಯಿಂದ ಜಯಸಿಂಹ ಎಂಬ ಹೆಸರು ಇಟ್ಟಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು

ಜಯಶಾಲಿ ಜಯಸಿಂಹ ಇಲ್ಲಿಯವರೆಗೂ 50ಕೂ ಹೆಚ್ಚು ಟಗರಿನ ಬಡಿದಾಟದಲ್ಲಿ ಬಹುಮಾನವನ್ನು ಪಡೆದಿದೆ. 6 ಲಕ್ಷಕ್ಕೂ ಅಧಿಕ ಹಣ, ಬೈಕ್ ಹಾಗೂ ಇನ್ನಿತರ ಬಹುಮಾನಗಳನ್ನು ಮಾಲೀಕ ಬಸವರಾಜನಿಗೆ ತಂದು ಕೊಟ್ಟಿದೆ. ಜಿಲ್ಲೆಯಲ್ಲದೆ ಪರ ಜಿಲ್ಲೆಯಲ್ಲಿ ಜಯಸಿಂಹನ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಜಯಸಿಂಹನನ್ನು ಕೊಳ್ಳಲಿಕ್ಕೆ ಟಗರು ಪ್ರಿಯರು ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗಳಿದಿದ್ದರು.

ಆದರೆ, ಧಾರವಾಡ ಮೂಲದ ಆರ್​ಎಕ್ಸ್​ವೈ ಎಂಬ ಗ್ರೂಪ್​ನವರು ಈ ಜಯಸಿಂಹ ಟಗರನ್ನು ಬರೋಬ್ಬರಿ ಐದು ಲಕ್ಷ ರೂ ಕೊಟ್ಟು ತಮ್ಮದಾಗಿಸಿಕೊಂಡಿದ್ದಾರೆ. ಜಯಸಿಂಹ ಇಷ್ಟು ದುಡ್ಡಿಗೆ ಮಾರಾಟವಾಗಿದ್ದನ್ನು ಕಂಡು ಟಗರು ಪ್ರಿಯರು ಬಲೆ ಮೈಲಾರಿ ಎನ್ನುತ್ತಿದ್ದಾರೆ.

ಟಗರು ಕಾಳಗದ ಕ್ರೇಜ್ ಇಷ್ಟೊಂದು ಬೃಹತ್ ಮೊತ್ತಕ್ಕೆ ಟಗರು ‌ಮಾರಾಟವಾಗಲು ಕಾರಣವಾಗಿದೆ. ಟಗರು ಕಾಳಗ ಪ್ರೀಯರ ಟಗರು ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Mon, 21 October 24

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ