ಬಾಗಲಕೋಟೆ: ಗೆಲುವಿನ ಸರದಾರ ಜಯಸಿಂಹ ಟಗರು 5 ಲಕ್ಷಕ್ಕೆ ಮಾರಾಟ!

ಆ ಟಗರಿನ ಹೆಸರು ಜಯಸಿಂಹ, ಅದು ಕಣಕ್ಕೆ ಇಳಿದರೆ ಎದುರಾಳಿಗೆ ನಡುಕ ಹುಟ್ತಿತ್ತು. ಜಯಸಿಂಹ ಕಾದಾಟಕ್ಕೆ ಇಳಿದ್ರೆ ಗೆಲವು ಕಟ್ಟಿಟ್ಟ ಬುತ್ತಿ. ಜಯಸಿಂಹ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೇ ಪರ ಜಿಲ್ಲೆಯಲ್ಲೂ ಹೆಸರು ಮಾಡಿದ್ದಾನೆ. ಇಂತಹ ಟಗರು ಬರೊಬ್ಬರಿ ಐದು ಲಕ್ಷಕ್ಕೆ ಮಾರಾಟವಾಗಿದೆ.

ಬಾಗಲಕೋಟೆ: ಗೆಲುವಿನ ಸರದಾರ ಜಯಸಿಂಹ ಟಗರು 5 ಲಕ್ಷಕ್ಕೆ ಮಾರಾಟ!
ಜಯಸಿಂಹ ಟಗರು
Follow us
| Updated By: ವಿವೇಕ ಬಿರಾದಾರ

Updated on:Oct 21, 2024 | 12:10 PM

ಬಾಗಲಕೋಟೆ, ಅಕ್ಟೋಬರ್​ 21: ಗುಳೇದಗುಡ್ಡ (Guledgudda) ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಜಯಸಿಂಹ ಎಂಬ ಟಗರು (Tagaru) ಬರೋಬ್ಬರಿ ಐದು ಲಕ್ಷ ರೂ.ಗೆ ಮಾರಾಟವಾಗಿದೆ. ಐದು ಲಕ್ಷಕ್ಕೆ‌ ಮಾರಾಟವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಾಳಗಕ್ಕೆ ಬಳಸುವ ಟಗರು ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದು ಸಾಮಾನ್ಯ. ಆದರೆ ಐದು ಲಕ್ಷಕ್ಕೆ ಮಾರಾಟವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ತೆಗ್ಗಿ ಗ್ರಾಮದ ಬಸವರಾಜ ಎಂಬುವರು ಮೂಲತಃ ಟಗರು ಸಾಕಾಣಿಕೆದಾರರು. ಎರಡು ವರ್ಷದ ಹಿಂದೆ ಈ ಜಯಸಿಂಹ ಎಂಬ ಟಗರನ್ನು 90 ಸಾವಿರ ರೂ ಕೊಟ್ಟು ಖರೀದಿ ಮಾಡಿದ್ದರು. ಇದೀಗ, ಈ ಟಗರನ್ನು ಧಾರವಾಡ ಮೂಲದ ಆರ್​ಎಕ್ಸ್​​ವೈ ಎಂಬ ಟಗರು ಪ್ರೀಯ ಗ್ರೂಪ್​ನವರು ಬರೋಬ್ಬರಿ 5 ಲಕ್ಷದ 1 ಸಾವಿರ ರೂ ಕೊಟ್ಟು ಖರೀದಿಸಿದ್ದಾರೆ.

ಈ ಜಯಸಿಂಹ ಟಗರಿನ ಸಾಧನೆಯ ಬಗ್ಗೆ ಹೇಳುವದಾದರೇ, ಜಯಸಿಂಹ ಯಾವುದೇ ಟಗರಿನ ಕಾಳಗದಲ್ಲಿ ಸೋಲನ್ನು ಕಾಣದೇ ಇರುವ ಧೀರ. ಇದರಿಂದ ಮಾಲೀಕ ಬಸವರಾಜ ಇದಕ್ಕೆ ಪ್ರೀತಿಯಿಂದ ಜಯಸಿಂಹ ಎಂಬ ಹೆಸರು ಇಟ್ಟಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು

ಜಯಶಾಲಿ ಜಯಸಿಂಹ ಇಲ್ಲಿಯವರೆಗೂ 50ಕೂ ಹೆಚ್ಚು ಟಗರಿನ ಬಡಿದಾಟದಲ್ಲಿ ಬಹುಮಾನವನ್ನು ಪಡೆದಿದೆ. 6 ಲಕ್ಷಕ್ಕೂ ಅಧಿಕ ಹಣ, ಬೈಕ್ ಹಾಗೂ ಇನ್ನಿತರ ಬಹುಮಾನಗಳನ್ನು ಮಾಲೀಕ ಬಸವರಾಜನಿಗೆ ತಂದು ಕೊಟ್ಟಿದೆ. ಜಿಲ್ಲೆಯಲ್ಲದೆ ಪರ ಜಿಲ್ಲೆಯಲ್ಲಿ ಜಯಸಿಂಹನ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಜಯಸಿಂಹನನ್ನು ಕೊಳ್ಳಲಿಕ್ಕೆ ಟಗರು ಪ್ರಿಯರು ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗಳಿದಿದ್ದರು.

ಆದರೆ, ಧಾರವಾಡ ಮೂಲದ ಆರ್​ಎಕ್ಸ್​ವೈ ಎಂಬ ಗ್ರೂಪ್​ನವರು ಈ ಜಯಸಿಂಹ ಟಗರನ್ನು ಬರೋಬ್ಬರಿ ಐದು ಲಕ್ಷ ರೂ ಕೊಟ್ಟು ತಮ್ಮದಾಗಿಸಿಕೊಂಡಿದ್ದಾರೆ. ಜಯಸಿಂಹ ಇಷ್ಟು ದುಡ್ಡಿಗೆ ಮಾರಾಟವಾಗಿದ್ದನ್ನು ಕಂಡು ಟಗರು ಪ್ರಿಯರು ಬಲೆ ಮೈಲಾರಿ ಎನ್ನುತ್ತಿದ್ದಾರೆ.

ಟಗರು ಕಾಳಗದ ಕ್ರೇಜ್ ಇಷ್ಟೊಂದು ಬೃಹತ್ ಮೊತ್ತಕ್ಕೆ ಟಗರು ‌ಮಾರಾಟವಾಗಲು ಕಾರಣವಾಗಿದೆ. ಟಗರು ಕಾಳಗ ಪ್ರೀಯರ ಟಗರು ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Mon, 21 October 24

ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರ ಪರದಾಟ
Daily Devotional: ರತ್ನ ಧಾರಣೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ರತ್ನ ಧಾರಣೆಯ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
Nithya Bhavishya: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ