Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣ​​: ರಾಹುಲ್ ಗಾಂಧಿ ಮಾತಿಗೂ ಬೆಲೆ ಕೊಡದ ಸಿದ್ದರಾಮಯ್ಯ ಸರ್ಕಾರ!

Bellary Jeans Park: ಪಂಚ ಯೋಜನೆಗಳಿಗೆ ಗ್ಯಾರಂಟಿ ಹಣ ಜೋಡಿಸುವಲ್ಲೆ ಸರ್ಕಾರ ಹೆಣಗುತ್ತಿರುವಾಗ 5000 ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್​​ ನಿರ್ಮಾಣ ಮಾಡುತ್ತಾ ಅನ್ನೋದೇ ಡೌಟ್ ಅಂತಿದ್ದಾರೆ ಬಳ್ಳಾರಿ ಜನ. ಈ ಮಧ್ಯೆ, ಮತ್ತೆ ಅಪರಲ್ ಪಾರ್ಕ್ ಅಜೆಂಡ ಹಿಡಿದು... ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವ ತಂತ್ರವನ್ನ ಕಾಂಗ್ರೆಸ್ ರೂಪಿಸಿದೆ. ಆದರೆ ಪದೆ ಪದೇ ಬಳ್ಳಾರಿ ಜನ್ರು ಇಂತಹ ಟೊಳ್ಳು ಭರವಸೆಗೆ ಮಣೆ ಹಾಕಲ್ಲ ಅಂತಾ ಜನರು ಪಿಸುಮಾತಿನಲ್ಲಿ ಹೇಳ್ತಿದಾರೆ.

Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಸಾಧು ಶ್ರೀನಾಥ್​

Updated on:Feb 23, 2024 | 11:03 AM

ಬಳ್ಳಾರಿ ಅಂದಾಕ್ಷಣ ನೆನಪಾಗೋದೇ ಅಲ್ಲಿನ ಜೀನ್ಸ್ ಉದ್ಯಮ (Bellary Jeans Park), ಆ ಉದ್ಯಮಕ್ಕೆ ಉತ್ತೇಜನ ನೀಡಬೇಕು ಅಂತ ಅಲ್ಲಿನ ಜನ್ರು ಹಲವು ವರ್ಷಗಳಿಂದ ಸರ್ಕಾರಗಳಿಗೆ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಆದ್ರೆ ಕೇವಲ ಭರವಸೆಗಳ ಮೇಲೆ ಭರವಸೆಗಳು ಅಭಿವೃದ್ಧಿ ಹೊಂದುತ್ತಿವೆಯೇ ಹೊರತು ವಾಸ್ತವದಲ್ಲಿ ಯಾವುದೂ ಪ್ರಗತಿಯಾಗಿಲ್ಲ. ಅದಕ್ಕೆ ಪೂರಕವಾಗುವಂತೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು (Rahul Gandhi) ಜೀನ್ಸ್ ಅಪರಲ್ ಪಾರ್ಕ್​​ ನಿರ್ಮಾಣ ಮಾಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದರು. ಅದು ಕೂಡ ಭರವಸೆಯಾಗಿ ಉಳಿಯುವ ಲಕ್ಷಣ ಎದ್ದು ಕಾಣುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ (Siddaramaiah).

ಹೌದು, ಬಳ್ಳಾರಿ ಅಂದಾಕ್ಷಣ ನೆನಪಿಗೆ ಬರುವುದು ಅಕ್ರಮ ಗಣಿಗಾರಿಕೆ ಮತ್ತೊಂದು ಜೀನ್ಸ್ ಉದ್ಯಮ. ಬಳ್ಳಾರಿಯಲ್ಲಿ ತಯಾರಾಗುವ ಜೀನ್ಸ್‌ಗೆ ಬೇರೆ – ಬೇರೆ ದೇಶಗಳಲ್ಲೂ ಒಳ್ಳೆ ಮಾರ್ಕೆಟ್ ಇದೆ. ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಬಹು ದೊಡ್ಡ ಉದ್ಯಮ ಅಂದ್ರೆ ಅದು ಜೀನ್ಸ್ ಉದ್ಯಮ..

ಈ ಉದ್ಯಮಕ್ಕೆ ಸರ್ಕಾರಗಳಿಂದ ಸರಿಯಾದ ಉತ್ತೇಜನ ಸಿಗುತ್ತಿಲ್ಲ.. ಹೀಗಾಗಿ ವರ್ಷದಿಂದ ವರ್ಷಕ್ಕೆ ಜೀನ್ಸ್ ಉದ್ಯಮ ಸೊರಗುತ್ತಿದೆ.. ಇದನ್ನ ಮನಗಂಡ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬಳ್ಳಾರಿಯಲ್ಲಿ 5,000 ಕೋಟಿ ರೂ ವೆಚ್ಚದಲ್ಲಿ ಜೀನ್ಸ್ ಅಫೆರಲ್ ಪಾರ್ಕ್​​ ಮಾಡುತ್ತೇವೆ, ಲಕ್ಷಾಂತರ ಜನ್ರಿಗೆ ಉದ್ಯೋಗ ನೀಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದರು.. ಇದು ಕಾಂಗ್ರೆಸ್‌ನ ಗ್ಯಾರಂಟಿ ಅಂತಲೂ ಘಂಟಾಘೋಷವಾಗಿ ಹೇಳಿದ್ರು.. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣವೇ ಅಫೆರಲ್ ಪಾರ್ಕ್​​ ನಿರ್ಮಾಣ ಮಾಡುತ್ತೇವೆ ಅಂದವರು ಮೊದಲ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಇದನ್ನ ಕೈ ಬಿಟ್ರು.. ನಂತರ ಇದನ್ನ ಗಮನಿಸಿದ ಸ್ವತಃ ರಾಹುಲ್ ಗಾಂಧಿ ಸರ್ಕಾರಕ್ಕೆ ಪತ್ರ ಬರೆದು ಬಳ್ಳಾರಿಯಲ್ಲಿ ಅಫೆರಲ್ ಪಾರ್ಕ್​​ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ರು.

ಇದನ್ನೂಓದಿ: ಧಾರವಾಡದಲ್ಲಿ ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಒಂದು ಪೈಸೆ ಕೂಲಿಯನ್ನೂ ನೀಡಿಲ್ಲ! 6.51 ಕೋಟಿ ಬಾಕಿ ಉಳಿಸಿಕೊಂಡಿದೆ!

ಅಂದ್ಹಾಗೆ ರಾಹುಲ್ ಗಾಂಧಿ ಪತ್ರ ಬರೆದ ಬಳಿಕ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು ಮೊನ್ನೆಯ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಅಪರಲ್ ಪಾರ್ಕ ನಿರ್ಮಾಣ ಮಾಡುತ್ತೇವೆ ಅಂತಾ ಪ್ರಸ್ತಾಪ ಮಾಡಿದ್ರು… ಆದರೆ, ಇಂತಿಷ್ಟು ಹಣ ನೀಡಲಾಗುತ್ತೆ ಅಂತಾ ಬಜೆಟ್‌ನಲ್ಲಿ ಹೇಳಿಲ್ಲ, ಅಪರಲ್ ಪಾರ್ಕ್​​ ‌ಗೆ ಜಾಗ ಗುರುತು ಮಾಡಿಲ್ಲ. ಕೇವಲ ಪ್ರಸ್ತಾಪ ಮಾಡಿದ್ದಾರೆ.

ಜೊತೆಗೆ ಪಂಚ ಗ್ಯಾರಂಟಿ ಹಣ ಜೋಡಿಸುವಲ್ಲೆ ಸರ್ಕಾರ ಹೆಣಗುತ್ತಿರುವಾಗ ಐದು ಸಾವಿರ ಕೋಟಿ ರೂ ವೆಚ್ಚದಲ್ಲಿ ಜೀನ್ಸ್ ಪಾರ್ಕ ನಿರ್ಮಾಣ ಮಾಡುತ್ತಾ ಅನ್ನೋದೇ ಡೌಟ್ ಅಂತ ಬಳ್ಳಾರಿ ಜನರು ಹೇಳುತ್ತಿದ್ದಾರೆ.. ಇನ್ನು ಅಪರಲ್ ಪಾರ್ಕ್​​ ನಿರ್ಮಾಣದ ಅಜೆಂಡ ಹಿಡಿದು… ಮುಂದಿನ ಲೋಕಸಭಾ ಚುನಾವಣೆಯನ್ನ ಗೆಲ್ಲುವ ತಂತ್ರವನ್ನ ಕಾಂಗ್ರೆಸ್ ರೂಪಿಸಿದೆ.. ಹೀಗಾಗಿ ಪದೇ ಪದೇ ಬಳ್ಳಾರಿ ಜನ್ರು ಇಂತಹ ಟೊಳ್ಳು ಭರವಸೆಗೆ ಮಣೆ ಹಾಕಲ್ಲ. ಕಾಂಗ್ರೆಸ್ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು ಅಂತಾ ಜನ್ರು ಒತ್ತಾಯ ಮಾಡಿದ್ದಾರೆ.

ಒಟ್ಟಿನಲ್ಲಿ ಜೀನ್ಸ್ ಉದ್ಯಮದಲ್ಲಿ ಪ್ರಖ್ಯಾತಿ ಪಡೆದಿರುವ ಬಳ್ಳಾರಿಗೆ .. ಒಂದು ಅಪರಲ್ ಪಾಕ್೯ ಬಹಳ ಅವಶ್ಯಕತೆ ಇದೆ.. ಸರ್ಕಾರ ಕೇವಲ ಟೊಳ್ಳು ಭರವಸೆ ನೀಡದೆ.. ಕೊಟ್ಟ ಭರವಸೆ ಈಡೇರಿಸಬೇಕು ಜೊತೆಗೆ ಜೀನ್ಸ್ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕು ಎನ್ನುವುದು ಬಳ್ಳಾರಿ ಜನ್ರ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 23 February 24

Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ