AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರ್ಸಿಂಗ್​ ಮಾಡಲು ಬಿಹಾರದಿಂದ ಬಂದಿದ್ದ, ಓದಿನಲ್ಲೂ ಮುಂದಿದ್ದ ಆದರೆ ಪ್ರೇಮಪಾಶಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ

ಆತ ಬಿಹಾರದಿಂದ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದ, ಆದ್ರೆ ತನ್ನೂರಿನ ಯುವತಿಯೊಂದಿಗೆ ಪ್ರೇಮದಾಟದಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿ ನರ್ಸಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಬೇಕಿದ್ದ ಯುವಕ ಹದಿಹರೆಯದ ವಯಸ್ಸಿನಲ್ಲಿ ಪ್ರೇಮದ ಮೋಹಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ.

ನರ್ಸಿಂಗ್​ ಮಾಡಲು ಬಿಹಾರದಿಂದ ಬಂದಿದ್ದ, ಓದಿನಲ್ಲೂ ಮುಂದಿದ್ದ ಆದರೆ ಪ್ರೇಮಪಾಶಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ
ಬಿಹಾರದಿಂದ ಶಿಕ್ಷಣಕ್ಕಾಗಿ ಬಂದಿದ್ದ, ಪ್ರೇಮಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​|

Updated on: Mar 21, 2024 | 9:53 AM

Share

ಆತ ದೂರದ ಬಿಹಾರದಿಂದ (Bihar) ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದ, ಓದೋದ್ರಲ್ಲೂ ಮುಂದೆ ಇದ್ದ, ಓದ್ಕೊಂಡು ಇದ್ದೀನಿ, ನಾನಾಯ್ತು ನನ್ನ ಪಾಡಾಯ್ತು ಅಂತಿದ್ರೆ ಎಲ್ಲವೂ ಸರಿಯಾಗಿ ಇರೋದು, ಆದ್ರೆ ತನ್ನೂರಿನ ಯುವತಿಯೊಂದಿಗೆ ಪ್ರೇಮದಾಟದಲ್ಲಿ ಮುಳುಗಿದ್ದ ಆತ ಕೊನೆಗೆ ಪ್ರೀತಿಯ ವಿಚಾರದಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವಗಾರದ ಬಳಿ ಪೋಷಕರ ಗೋಳಾಟ,ಸಹಪಾಠಿಗಳ ದಿವ್ಯ ಮೌನ. ಮೇಲಿನ ಫೋಟೋದಲ್ಲಿರುವ ಈತ 19 ವರ್ಷದ ಸೋನುಕುಮಾರ್‌.

ಬಿಹಾರ ಮೂಲದ ಸೋನು ಕುಮಾರ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ನಗರದ ಸನ್ ಫ್ಲವರ್ ಕಾಲೇಜೊಂದರಲ್ಲಿ ಬಿಎಸ್ಸಿ ನರ್ಸಿಂಗ್‌ ವ್ಯಾಸಂಗ (Nursing) ಮಾಡುತ್ತಿದ್ದ. 2 ನೇ ವರ್ಷದ ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದ ಸೋನುಕುಮಾರ್‌ ಓದಿನಲ್ಲೂ ಮುಂದೆ ಇದ್ದ, ಪ್ರೇಮದ ವಿಚಾರದಲ್ಲಿ ಬೇಸತ್ತಿದ್ದ ಸೋನು ತಾನು ವಾಸವಿದ್ದ ಹಾಸ್ಟೆಲ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಿಹಾರ ಮೂಲದ ಅಂದರೆ ತನ್ನೂರಿನ ಯುವತಿಯೊಂದಿಗೆ ಪ್ರೀತಿಯಲ್ಲಿ (Love) ಮುಳುಗಿದ್ದ ಯುವಕ ಪ್ರೇಮ ಪಾಷದ ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಹೌದು ಮೃತ ಸೋನುಕುಮಾರ್‌ ಹಲವು ದಿನಗಳಿಂದ ಪ್ರೀತಿಯಲ್ಲಿ ಮುಳುಗಿಹೋಗಿದ್ದ, ತರಗತಿಗಳು ಮುಗಿಯುತ್ತಿದ್ದಂತೆ ಪ್ರೇಯಸಿ ಜೊತೆ ಸದಾಕಾಲ ಫೋನ್‌ನಲ್ಲಿ ಬ್ಯುಸಿ ಇರುತ್ತಿದ್ದನಂತೆ.

Also Read: ಪ್ರೀತಿ ಪ್ರೇಮ ಪ್ರಣಯ ಎಂದು ಕಾಲೇಜಿಗೆ ಚಕ್ಕರ್ ಹಾಕಿ ಹುಡುಗಿ ಹಿಂದೆ ಸುತ್ತಾಡ್ತಿದ್ದ, ಕೇರಳಕ್ಕೆ ಹೋದವನು ಹೆಣವಾಗಿ ಬಂದ

ಇತ್ತೀಚೆಗೆ ಆತ ಪ್ರೀತಿಸುತ್ತಿದ್ದ ಯುವತಿಯೊಡನೆ ಯಾವಾಗಲೂ ಜಗಳ ಆಡುತ್ತಿದ್ದನಂತೆ. ಮೊನ್ನೆ ಮಂಗಳವಾರ ರಾತ್ರಿಯೂ ಸಹ ತನ್ನ ಪ್ರೇಯಸಿಯೊಂದಿಗೆ ಜೋರಾಗಿ ಜಗಳ ಆಡುತ್ತಿದ್ದನಂತೆ. ಸ್ನೇಹಿತರೆಲ್ಲ ಅದನ್ನ ನೋಡಿ ಸಮಾಧಾನ ಮಾಡಿದ್ದರಂತೆ. ಬಳಿಕ ಇಡೀ ರಾತ್ರಿ ಜಗಳ ಆಡಿ ಮನನೊಂದು ಬೇಸರದಲ್ಲಿ ಇದನಂತೆ.

ಬೆಳಿಗ್ಗೆ ಎಂದಿನಂತೆ ಎಲ್ಲರೂ ಕಾಲೇಜಿಗೆ ತೆರಳಿದ್ರಂತೆ. ಅದ್ರೆ ಈತ ನನಗೆ ಹೊಟ್ಟೆನೋವು ಇದೆ, ಇವತ್ತು ನಾನು ಕಾಲೇಜಿಗೆ ಬರಲ್ಲವೆಂದು ಹಾಸ್ಟೆಲ್ ನಲ್ಲೇ ಇದ್ದನಂತೆ. ಮಧ್ಯಾಹ್ನ ಊಟಕ್ಕೆ ಬಂದಾಗ ಹಾಸ್ಟೆಲ್ ರೂಂ ನಿಂದ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದನಂತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ