ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭರ್ಜರಿ ಬೇಟೆ: 30 ಕೋಟಿ ರೂ. ಮೌಲ್ಯದ ಕೊಕೇನ್ ಪತ್ತೆ

ಬೆಂಗಳೂರು, ( ಜುಲೈ 14): ವಿದೇಶದಿಂದ ಅಕ್ರಮವಾಗಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕೊಕೇನ್​ ಸಾಗಿಸುತ್ತಿದ್ದ ಸ್ಮಗ್ಲರ್​ನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೀನ್ಯಾ ಮೂಲದ ಒದಿಹಾಂಬೋ ಮಾರ್ಗನ್ ಬೈರನ್​ ಎನ್ನುವ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ಲಗೇಜ್ ಬ್ಯಾಗ್ ಪರಿಶೀಲನೆ ವೇಳೆ ಅಕ್ರಮವಾಗಿ ತಂದಿದ್ದ ಮೂರು ಕೆ.ಜಿ. ಕೊಕೇನ್ ಪತ್ತೆಯಾಗಿದೆ. ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಇದಾಗಿದೆ. ಈ ಸ್ಮಗ್ಲರ್ ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6ಇ1302 ವಿಮಾನದಲ್ಲಿ […]

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭರ್ಜರಿ ಬೇಟೆ: 30 ಕೋಟಿ ರೂ. ಮೌಲ್ಯದ ಕೊಕೇನ್ ಪತ್ತೆ
ಬೆಂಗಳೂರು ವಿಮಾನ ನಿಲ್ದಾಣ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jul 14, 2024 | 4:01 PM

ಬೆಂಗಳೂರು, ( ಜುಲೈ 14): ವಿದೇಶದಿಂದ ಅಕ್ರಮವಾಗಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕೊಕೇನ್​ ಸಾಗಿಸುತ್ತಿದ್ದ ಸ್ಮಗ್ಲರ್​ನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೀನ್ಯಾ ಮೂಲದ ಒದಿಹಾಂಬೋ ಮಾರ್ಗನ್ ಬೈರನ್​ ಎನ್ನುವ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ಲಗೇಜ್ ಬ್ಯಾಗ್ ಪರಿಶೀಲನೆ ವೇಳೆ ಅಕ್ರಮವಾಗಿ ತಂದಿದ್ದ ಮೂರು ಕೆ.ಜಿ. ಕೊಕೇನ್ ಪತ್ತೆಯಾಗಿದೆ. ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಇದಾಗಿದೆ.

ಈ ಸ್ಮಗ್ಲರ್ ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6ಇ1302 ವಿಮಾನದಲ್ಲಿ ಬಂದಿದ್ದ. ಲಗೇಜ್ ಬ್ಯಾಗ್ ಚೆಕಿಂಗ್ ವೇಳೆ ಡಿ.ಆರ್.ಐ ತಂಡದ ಕಾರ್ಯಚರಣೆಯ ವೇಳೆ ಈ ಬಾರೀ ಮೌಲ್ಯದ ಕೊಕೇನ್ ಪತ್ತೆಯಾಗಿದೆ. ಕೊಕೇನ್ ಸಮೇತ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಒದಿ: ಶೇ.15ರಿಂದ 20ರಷ್ಟು KSRTC ಬಸ್​ ಟಿಕೆಟ್​​ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ -ಎಸ್.ಆರ್.ಶ್ರೀನಿವಾಸ್

ವಿಮಾನ ವಿಳಂಬ ಪ್ರಯಾಣಿಕರ ಪರದಾಟ

ನಿನ್ನೆ(ಜುಲೈ 13) ರಾತ್ರಿ ಬೆಂಗಳೂರಿಗೆ ಬರಬೇಕಿದ್ದ ವಿಮಾನ ವಿಳಂಬವಾಗಿದ್ದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಏರ್ ಇಂಡಿಯಾ ಎಕ್ಸಪ್ರೆಸ್ ಏರಲೈನ್ಸ್ ವಿರುದ್ಧ ಕಿಡಿಕಾರಿದ್ದಾರೆ. ಶನಿವಾರ ಸಂಜೆ 5:55ಕ್ಕೆ ಜೈಪುರದಿಂದ ಹೊರಟು 10:40 ಕ್ಕೆ ಬೆಂಗಳೂರು ತಲುಪಬೇಕಿದ್ದ ವಿಮಾನ ವಿಳಂಬವಾಗಿದೆ. ಬೆಂಗಳೂರು ಮೂಲದ ಒಟ್ಟು 40 ಪ್ರಯಾಣಿಕರು ಜೈಪುರದಲ್ಲಿ ವಿಮಾನ ಹತ್ತಿದ್ದಾರೆ. ಆದ್ರೆ, ಏರ್ ಇಂಡಿಯಾ ಎಕ್ಸ್​​ಪ್ರೆಸ್ ವಿಮಾನ ಟೇಕಾಫ್ ಆಗಿಲ್ಲ.ಇದರಿಂದ ಪ್ರಯಾಣಿಕರು ರಾತ್ರಿಯಲ್ಲ ಜೈಪುರ ವಿಮಾನ ನಿಲ್ದಾಣದಲ್ಲೇ ಕಾಲಕಳೆದಿದ್ದಾರೆ. ಕೊನೆಗೆ ಪ್ರಯಾಣಿಕರ ಆಕ್ರೋಶದ ಕಟ್ಟೆ ಹೊಡೆದಿದ್ದು, ಏರ್​ಲೈನ್ಸ್​ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಬಳಿಕ ಪ್ರಯಾಣಿಕರನ್ನು ಕೂಡಲೇ ಮುಂಬೈ ಏರ್ ಪೋರ್ಟ್ ತಲುಪಿಸಲಾಗಿದೆ. ಆದರೆ ಇದೀಗ ಏರ್​ಲೈನ್ಸ್ ಸಿಬ್ಬಂದಿ ಮಾತ್ರ ವಿಮಾನ ನಾಳೆ (ಜುಲೈ 15) ಬೆಳಗ್ಗೆ ವಿಮಾನ ಬರುತ್ತೆ ಎಂದು ಹೇಳಿದ್ದಾರೆ. ಇದರಿಂದ ಪ್ರಯಣಿಕರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ನಾಳೆವರೆಗೂ ವಿಮಾನ ನಿಲ್ದಾಣದಲ್ಲೇ ಇದ್ದರೆ ಉದ್ಯೋಗ, ಶಾಲಾ-ಕಾಲೇಜು ಹೇಗೆ ಎಂದು ಗರಂ ಆಗಿದ್ದು, ಮುಂಬೈನಿಂದ ಬೆಂಗಳೂರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಸಾವಿರಾರು ರುಪಾಯಿ ಹಣ ಕಟ್ಟಿಸಿಕೊಂಡರೂ ಸಮರ್ಪಕ ಸೇವೆ ಕೊಡುತ್ತಿಲ್ಲ ಎಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ಏರಲೈನ್ಸ್ ವಿರುದ್ಧ ಆರೋಪಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:41 pm, Sun, 14 July 24