AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto drivers protest: ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗೆ ಅನುಮತಿ ಕೊಟ್ಟಿದ್ದಕ್ಕೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ಆಟೋ ಚಾಲಕರು

ಓಲಾ, ಊಬರ್​, ರ‍್ಯಾಪಿಡೋದಿಂದ ಬಸವಳಿದಿದ್ದ ಸಾರಥಿಗಳು ಇಂದು ಬೀದಿಗಿಳಿದು ಪ್ರತಿಭಟಿಸಿ ರಾಜ್ಯ ಸಾರಿಗೆ ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ.

Auto drivers protest: ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗೆ ಅನುಮತಿ ಕೊಟ್ಟಿದ್ದಕ್ಕೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ಆಟೋ ಚಾಲಕರು
ಆಟೋ ಚಾಲಕರಿಂದ ಪ್ರತಿಭಟನೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 29, 2022 | 8:56 PM

Share

ಬೆಂಗಳೂರು: ನಗರದಲ್ಲಿ ಸಾರಿಗೆ ಅಂದ್ರೆ ಟಕ್​ ಅಂತಾ ನೆನಪಾಗುವುದು ಬಿಎಂಟಿಸಿ ಬಸ್​. ಅದನ್ನ ಬಿಟ್ಟರೆ ಸಿಲಿಕಾನ್​ ಸಿಟಿಯ ನರನಾಡಿಯಂತೆ ಕೆಲಸ ಮಾಡ್ತಿರೋದು ಆಟೋ ಚಾಲಕರು. ಆದ್ರೆ ಆಟೋ ನಂಬಿ ಜೀವನ ನಡೆಸ್ತಿದ್ದ ಸಾರಥಿಗಳಿಗೆ ಇದೀಗ ಹೊಡೆತ ಬಿದ್ದಿದೆ. ಓಲಾ, ಊಬರ್​, ರ‍್ಯಾಪಿಡೋದಿಂದ ಬಸವಳಿದಿದ್ದ ಸಾರಥಿಗಳು ಇಂದು ಬೀದಿಗಿಳಿದು ಪ್ರತಿಭಟಿಸಿ ರಾಜ್ಯ ಸಾರಿಗೆ ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆಗೆ ಧಿಕ್ಕಾರ ಕೂಗುವ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು (Auto drivers protest) ಮುಂದಾದರು. ಬೌನ್ಸ್​ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿ(electric bike taxis) ಗೆ ಸರ್ಕಾರ ಗ್ರೀನ್​ ಸಿಗ್ನಲ್​ ಕೊಟ್ಟಿರುವುದು ಇವರ ಈ ಆಕ್ರೋಶಕ್ಕೆ ಕಾರಣವಾಗಿ ಬಿಟ್ಟಿದೆ. ಮೊದಲೇ ಓಲಾ, ರ‍್ಯಾಪಿಡೋ ಬೈಕ್​ಗಳಿಂದ ತತ್ತರಿಸಿದ್ದ ಆಟೋ ಚಾಲಕರಿಗೆ, ಇದೀಗ ಬೌನ್ಸ್ ಬೈಕ್​ ಟ್ಯಾಕ್ಸಿಗೆ ಅನುಮತಿ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಈ ನಿರ್ಧಾರ ಖಂಡಿಸಿ ಇಂದು(ಡಿ. 29) ಬೀದಿಗಿಳಿದ ಸಾರಥಿಗಳು ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲೇ ಬಿಸಿಮುಟ್ಟಿಸಿದ್ದಾರೆ.

ಬೌನ್ಸ್ ಇ ಬೈಕ್ ಅನುಮತಿ ವಾಪಸ್ ಪಡೆದಿಲ್ಲ ಎಂದರೆ ಆಟೋ ಮುಷ್ಕರದ ಎಚ್ಚರಿಕೆ

ಬೌನ್ಸ್​ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗೆ ನೀಡಿರುವ ಅನುಮತಿ ರದ್ದು ಮಾಡುವಂತೆ ಇಂದು ಸುಮಾರು 21 ವಿವಿಧ ಯೂನಿಯನ್​ಗಳ ಆಟೋ ಚಾಲಕರು ಪ್ರತಿಭಟಿಸಿದರು. ಸುಡುವ ಬಿಸಿಲಲ್ಲಿ ಬ್ಯಾನರ್​ ಹಿಡಿದು ಕುಳಿತ ಚಾಲಕರು, ಸರ್ಕಾರ ಬೈಕ್​ ಟ್ಯಾಕ್ಸಿ ರದ್ದುಮಾಡುವಂತೆ ಒತ್ತಾಯಿಸಿದರು. ವಿಧಾನಸೌಧ ಚಲೋ ಮಾಡಬೇಕು ಅಂದುಕೊಂಡಿದ್ದ ಚಾಲಕರಿಗೆ ಅಲ್ಲಲ್ಲಿ ಪೊಲೀಸರು ಅಡ್ಡಿಪಡ್ಡಿಸಿದ್ದು, ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಇನ್ನು ಸರ್ಕಾರ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗೆ ಅನುಮತಿ ಕೊಟ್ಟಿರೋದರಿಂದ ನಮಗೆ ಹೊಡೆತ ಬೀಳುತ್ತಿದೆ. ನಮ್ಮ ಆಟೋ ಚಾಲಕರಿಗೆ ಧಕ್ಕೆಯಾಗಿರೋದರಿಂದ ಈ ಹೋರಾಟ ನಡೆಸ್ತಿದ್ದೇವೆ ಅಂತಾ ಕಿಡಿಕಾರಿದ್ರು. ಸರ್ಕಾರ ಕೂಡಲೇ ಬೈಕ್​ ಟ್ಯಾಕ್ಸಿಯನ್ನ ರದ್ದುಮಾಡಬೇಕು ಅಂತಾ ಒತ್ತಾಯಿಸಿದ್ರು.

ಇದನ್ನೂ ಓದಿ: Namma Metro: ಹೊಸ ವರ್ಷಾಚರಣೆ: ನಮ್ಮ ಮೆಟ್ರೋ ಅವಧಿ ವಿಸ್ತರಿಸಿದ BMRCL

ರ‍್ಯಾಪಿಡೋ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಕಮಿಷನರ್ 

ಇತ್ತ ಬೆಳಗ್ಗೆಯಿಂದ ಬಿಸಿಲಲ್ಲೇ ಕುಳಿತು ಪ್ರತಿಭಟಿಸಿದ್ದ ಆಟೋ ಚಾಲಕರು ಮಧ್ಯಾಹ್ನದ ವೇಳೆಗೆ ಫುಲ್​ ಗರಂ ಆಗಿದ್ರು. ಬೆಳಗ್ಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡಿದಿದ್ದಕ್ಕೆ ರೊಚ್ಚಿಗೆದ್ದ ಚಾಲಕರು, ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆಯಿತು. ಇವೆಲ್ಲದರ ಮಧ್ಯೆ ಸ್ಥಳಕ್ಕೆ ಭೇಟಿ ನೀಡಿದ ಆರ್​ಟಿಓ ಅಡಿಷನಲ್​ ಕಮಿಷನರ್​ ಹೇಮಂತ್​ಕುಮಾರ್​, ರ‍್ಯಾಪಿಡೋ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ, ಸದ್ಯ ಇ-ಬೈಕ್​ ಟ್ಯಾಕ್ಸಿಯ ಆಗು ಹೋಗುಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

ವಿಧಾನಸೌಧಕ್ಕೆ ಜಾಥಾ ಮಾಡೋ ಪ್ಲಾನ್​ ವಿಫಲವಾಗಿದ್ದರಿಂದ ರೊಚ್ಚಿಗೆದ್ದ ಆಟೋ ಚಾಲಕರು, ಆರ್​ಟಿಓ ಅಧಿಕಾರಿಗಳ ಕಾರಿನ ಮುಂದೆ ಬಿದ್ದು, ಆಕ್ರೋಶ ಹೊರಹಾಕಿದ್ರು. ವಿಧಾನಸೌಧಕ್ಕೆ ಮುತ್ತಿಗೆ ಹಾಕೇ ತೀರುತ್ತೇವೆ ಅನ್ನುತ್ತಿದ್ದ ಚಾಲಕರಿಗೆ ಪೊಲೀಸರು ಬ್ಯಾರಿಕೇಡ್​ ಹಾಕಿ ಅಡ್ಡಿಪಡಿಸಿದ್ರು. ಅಷ್ಟಕ್ಕೆ ಸುಮ್ಮನಾಗದ ಸಾರಥಿಗಳು ಬ್ಯಾರಿಕೇಡ್​ ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ್ರು.

ಇದನ್ನೂ ಓದಿ: Trin Trin Bicycle: ಸಾಂಸ್ಕೃತಿಕ ನಗರಿ ಮೈಸೂರಿನ ಟ್ರಿಣ್​ ಟ್ರಿಣ್​​ ಯೋಜನೆಗೆ ಮನಸೋತ ಪ್ರವಾಸಿಗರು: ಪ್ರತ್ಯೇಕ ಟ್ರ್ಯಾಕ್​ ನಿರ್ಮಾಣಕ್ಕೆ ಪಾಲಿಕೆ ಚಿಂತನೆ

ಹೋರಾಟದ ಎಚ್ಚರಿಕೆ

ಅದೇನೆ ಇರಲಿ, ಹೀಗಾಗಲೇ ರ್ಯಾಪಿಡೋ ಬೈಕ್​ನಿಂದ ಕಂಗಲಾಗಿರುವ ಆಟೋ ಚಾಲಕರಿಗೆ, ಇದೀಗ ಬೌನ್ಸ್ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗೆ ಅನುಮತಿ ಸಿಕ್ಕಿರೋದು ಮತ್ತಷ್ಟು ಚಿಂತೆ ಉಂಟುಮಾಡಿದೆ. ಸರ್ಕಾರ ಒಂದು ವೇಳೆ ಬೇಡಿಕೆಗಳನ್ನ ಈಡೇರಿಸದಿದ್ರೆ ಮುಂದೆ ದೊಡ್ಡ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಸದ್ಯ ಸರ್ಕಾರ ಸಾರಥಿಗಳ ಸಮಸ್ಯೆಗೆ ಮುಲಾಮು ಹಚ್ಚುತ್ತಾ, ಇಲ್ಲ ಮತ್ತೆ ಪ್ರತಿಭಟನೆಯ ಜ್ವಾಲೆ ಹೊತ್ತಿಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ