AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮನೆ ಹುಡುಕುವುದು ಈಗ ‘ಮಿಷನ್ ಇಂಪಾಸಿಬಲ್’! ಬ್ಯಾಚುಲರ್ಸ್ ಸಂಕಷ್ಟ ಕೇಳೋರು ಯಾರು?

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದೊಡ್ಡ ಸವಾಲಾಗಿದೆ, ವಿಶೇಷವಾಗಿ ಬ್ಯಾಚುಲರ್ಸ್ ಮತ್ತು 10,000 ರೂ. ಒಳಗೆ ಮನೆ ಬಯಸುವವರಿಗೆ. ಐಟಿ ಹಬ್‌ಗಳಲ್ಲಿ ಮಾತ್ರವಲ್ಲದೆ, ಸಾಮಾನ್ಯ ಪ್ರದೇಶಗಳಲ್ಲೂ ಬಾಡಿಗೆ ದರ ಗಗನಕ್ಕೇರಿದ್ದು, ಬಜೆಟ್ ಸ್ನೇಹಿ ಮನೆಗಳು ಮರೀಚಿಕೆಯಾಗಿವೆ. ಇದು ನಗರದಲ್ಲಿ ನೆಲೆಸುವ ಕನಸು ಹೊತ್ತು ಬರುವವರಿಗೆ ದೈನಂದಿನ ಹೋರಾಟವಾಗಿದೆ.

ಬೆಂಗಳೂರಿನಲ್ಲಿ ಮನೆ ಹುಡುಕುವುದು ಈಗ ‘ಮಿಷನ್ ಇಂಪಾಸಿಬಲ್’! ಬ್ಯಾಚುಲರ್ಸ್ ಸಂಕಷ್ಟ ಕೇಳೋರು ಯಾರು?
ವೈರಲ್​​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Mar 27, 2026 | 10:34 AM

Share

ಬೆಂಗಳೂರು, ಮಾ.27: ನಗರದಲ್ಲಿ ಮನೆಗಳು ಬಾಡಿಗೆಗೆ ಸಿಗುವುದು ತುಂಬಾ ಕಷ್ಟ, ಅದರಲ್ಲೂ ಬ್ಯಾಚುನರ್ಲ್​​​ಗಳಿಗೆ ಮನೆ ನೀಡಲು ಯೋಚನೆ ಮಾಡುತ್ತಾರೆ. ಮತ್ತು ಅವರ ಬಜೆಟ್​​ ಕೂಡ 10 ಸಾವಿರದ ಒಳಗೆ ಇರುತ್ತದೆ. ಆದರೆ ಇದೀಗ 10 ಸಾವಿರಕ್ಕೆ ಮನೆ ಸಿಗುವುದು ಕಷ್ಟವಾಗಿದೆ. ಈ ಬಗ್ಗೆ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸುವ ಕನಸು ಹೊತ್ತು ಬರುವವರಿಗೆ ಈಗ ‘ಬಾಡಿಗೆ ಮನೆ’ ಎನ್ನುವುದು ಮರೀಚಿಕೆಯಾಗುತ್ತಿದೆ. ನಗರದ ಐಟಿ ಹಬ್‌ಗಳ ಸುತ್ತಮುತ್ತಲಷ್ಟೇ ಅಲ್ಲದೆ, ಸಾಮಾನ್ಯ ಪ್ರದೇಶಗಳಲ್ಲೂ ಬಾಡಿಗೆ ದರ ಗಗನಕ್ಕೇರಿದ್ದು, ಬಜೆಟ್ ಸ್ನೇಹಿ ಮನೆಗಳನ್ನು ಹುಡುಕುವುದು ಒಂದು ದೈನಂದಿನ ಹೋರಾಟವಾಗಿ ಮಾರ್ಪಟ್ಟಿದೆ.

ನಗರಕ್ಕೆ ಹೊಸದಾಗಿ ಕೆಲಸಕ್ಕೆ ಸೇರುವವರು ಅಥವಾ ವೃತ್ತಿಜೀವನ ಆರಂಭಿಸುವವರಿಗೆ 10,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಕನಿಷ್ಠ ಸೌಲಭ್ಯವಿರುವ 1 BHK ಮನೆ ಸಿಗುವುದು ಅಸಾಧ್ಯವಾಗಿದೆ. ಯುವತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಂತೆ, ವಸತಿ ಪಡೆಯಲು ಕೇವಲ 7 ದಿನಗಳು ಬಾಕಿ ಇದ್ದರೂ ಸೂಕ್ತ ಮನೆ ಸಿಗದೆ ಆತಂಕ ಎದುರಿಸುತ್ತಿದ್ದಾರೆ. ಸತತ ಪ್ರಯತ್ನಗಳ ಹೊರತಾಗಿಯೂ ಅಗತ್ಯಕ್ಕೆ ತಕ್ಕ ಮನೆ ದೊರೆಯುತ್ತಿಲ್ಲ.

ಇದನ್ನೂ ಓದಿ: ರಾಜ್ಯದ ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ; 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಆನ್‌ಲೈನ್ ಪಟ್ಟಿಗಳ ಮೂಲಕ ಅಂತ್ಯವಿಲ್ಲದ ಬ್ರೌಸಿಂಗ್, ದಲ್ಲಾಳಿಗಳ ಕಾಟ, ಮತ್ತು ಹೆಚ್ಚಿನ ಬಾಡಿಗೆ ಅಥವಾ ಠೇವಣಿ ಕಾರಣದಿಂದ ಎದುರಾಗುವ ನಿರಾಕರಣೆಗಳು ಬಾಡಿಗೆದಾರರನ್ನು ಹತಾಶೆಗೊಳಿಸುತ್ತಿವೆ. ಸ್ಥಳ, ಸೌಕರ್ಯಗಳು ಮತ್ತು ವಿಸ್ತೀರ್ಣದ ವಿಚಾರದಲ್ಲಿ ರಾಜಿ ಮಾಡಿಕೊಂಡ ನಂತರವೂ ಬಜೆಟ್‌ನಲ್ಲಿ ಮನೆ ಹುಡುಕುವುದು ಸಮಯದ ವಿರುದ್ಧದ ಓಟದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಇಂದು ಈ ರಾಶಿಯವರು ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ!
ಮುಂಬೈನ ರೈಲಿನಲ್ಲಿ ಮಹಿಳೆಯರ ಕಿತ್ತಾಟ; ವಿಡಿಯೋ ವೈರಲ್
ಮುಂಬೈನ ರೈಲಿನಲ್ಲಿ ಮಹಿಳೆಯರ ಕಿತ್ತಾಟ; ವಿಡಿಯೋ ವೈರಲ್
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ