AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು Vs ಹೈದರಾಬಾದ್: 5 ತಿಂಗಳ ಅನುಭವ ಬಿಚ್ಚಿಟ್ಟ ಯುವಕ; ಕರೆಂಟ್ ಕಟ್, ಗುಂಡಿ ಬಿದ್ದ ರಸ್ತೆ, ಬಿರಿಯಾನಿ ಬಗ್ಗೆ ರೆಡ್ಡಿಟ್‌ನಲ್ಲಿ ಭಾರಿ ಚರ್ಚೆ

ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಜೀವನಶೈಲಿ, ಮೂಲಸೌಕರ್ಯ ಹೋಲಿಕೆ ದಶಕಗಳಿಂದಲೂ ಚರ್ಚೆಯಲ್ಲಿದೆ. ಇತ್ತೀಚೆಗೆ ಹೈದರಾಬಾದ್‌ಗೆ ಶಿಫ್ಟ್ ಆದ ಯುವಕನೊಬ್ಬ ರೆಡ್ಡಿಟ್‌ನಲ್ಲಿ ಈ ಎರಡೂ ನಗರಗಳ ವಿದ್ಯುತ್, ರಸ್ತೆ, ಹವಾಮಾನ, ಆಹಾರ, ಟ್ರಾಫಿಕ್ ಹಾಗೂ ಉದ್ಯೋಗಾವಕಾಶಗಳ ಸಾಧಕ-ಬಾಧಕಗಳನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು Vs ಹೈದರಾಬಾದ್: 5 ತಿಂಗಳ ಅನುಭವ ಬಿಚ್ಚಿಟ್ಟ ಯುವಕ; ಕರೆಂಟ್ ಕಟ್, ಗುಂಡಿ ಬಿದ್ದ ರಸ್ತೆ, ಬಿರಿಯಾನಿ ಬಗ್ಗೆ ರೆಡ್ಡಿಟ್‌ನಲ್ಲಿ ಭಾರಿ ಚರ್ಚೆ
, ಬೆಂಗಳೂರು ಹೈದರಾಬಾದ್ ಹೋಲಿಕೆImage Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:Jun 22, 2026 | 5:11 PM

Share

ಬೆಂಗಳೂರು, ಜೂ.22: ಭಾರತದ ಎರಡು ಪ್ರಮುಖ ಐಟಿ ಹಬ್‌ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ಜೀವನಶೈಲಿ, ಮೂಲಸೌಕರ್ಯ ಹಾಗೂ ಪರಿಸರದ ಕುರಿತು ದಶಕಗಳಿಂದಲೂ ದೊಡ್ಡ ಹೋಲಿಕೆ ನಡೆಯುತ್ತಲೇ ಬಂದಿದೆ. ಇತ್ತೀಚೆಗೆ ಬೆಂಗಳೂರಿನಿಂದ ಭಾಗ್ಯನಗರಕ್ಕೆ (ಹೈದರಾಬಾದ್) ಶಿಫ್ಟ್ ಆದ ಯುವಕನೊಬ್ಬ ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಎರಡೂ ನಗರಗಳ ಕರಾರುವಾಕ್ ಪ್ಲಸ್ ಮತ್ತು ಮೈನಸ್ ಅಂಶಗಳ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿದ್ಯುತ್, ರಸ್ತೆ, ಹವಾಮಾನ, ಆಹಾರ, ಟ್ರಾಫಿಕ್ ಹಾಗೂ ಉದ್ಯೋಗಾವಕಾಶಗಳ ಕುರಿತು ಆತ ಮಾಡಿರುವ ಹೋಲಿಕೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ.

“ನಾನು ಹೈದರಾಬಾದ್‌ಗೆ ಬಂದು 5 ತಿಂಗಳುಗಳಾಗಿವೆ. ಇಲ್ಲಿಗೆ ಬಂದ ಮೇಲೆಯೇ ನನಗೆ ಕರೆಂಟ್ ಇಲ್ಲದ ಜೀವನ ಎಷ್ಟು ಭೀಕರವಾಗಿರುತ್ತದೆ ಎಂಬುದು ಅರ್ಥವಾಗಿದ್ದು” ಎಂದು ಆತ ಬರೆದುಕೊಂಡಿದ್ದಾನೆ. ಹೈದರಾಬಾದ್‌ನಲ್ಲಿ ಬೇಸಿಗೆಯ ಅವಧಿಯಲ್ಲಿ ನಿರಂತರ ವಿದ್ಯುತ್ ಕಡಿತ ಉಂಟಾಗುತ್ತಿತ್ತು. ರೂಮ್‌ನಲ್ಲಿ ಎಸಿ ಇಲ್ಲದಿದ್ದರೆ ತಾಪಮಾನಕ್ಕೆ ಪ್ರಾಣವೇ ಹೋಗುವಷ್ಟು ಧಗೆ ಇರುತ್ತದೆ. ಈ ವಿಚಾರದಲ್ಲಿ ಬೆಂಗಳೂರಿನ ಹವಾಮಾನಬೇಸಿಗೆಯಲ್ಲೂ ಅತ್ಯಂತ ಆಹ್ಲಾದಕರ ಮತ್ತು ಶಾಂತಿಯುತವಾಗಿರುತ್ತದೆ ಎಂದು ಆತ ಹೇಳಿದ್ದಾನೆ.

ರಸ್ತೆ ಮೂಲಸೌಕರ್ಯದ ಬಗ್ಗೆ ಮಾತನಾಡುತ್ತಾ ಆತ ವಿಭಿನ್ನ ಹೋಲಿಕೆ ನೀಡಿದ್ದಾನೆ. ಹೈದರಾಬಾದ್ ರಸ್ತೆಗಳು ಬೆಂಗಳೂರಿನಷ್ಟು ಗುಂಡಿ ಬಿದ್ದಿಲ್ಲ. ಆದರೆ, ಇಲ್ಲಿನ ರಸ್ತೆಗಳಲ್ಲಿ ಸರಿಯಾಗಿ ಮುಚ್ಚದ ಅರ್ಧಂಬರ್ಧ ತೆರೆದ ಮ್ಯಾನ್‌ಹೋಲ್‌ಗಳಿವೆ. ನೀವು ರಸ್ತೆಯನ್ನು ಸರಿಯಾಗಿ ಗಮನಿಸದೆ ಗಾಡಿ ಓಡಿಸಿದರೆ ನೇರವಾಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಬೆಂಗಳೂರಿನಲ್ಲಿ ಗುಂಡಿಗಳಿದ್ದರೂ ಅವು ಯಾರನ್ನೂ ಆಸ್ಪತ್ರೆಗೆ ಕಳುಹಿಸುವಷ್ಟು ಅಪಾಯಕಾರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ.

ಇಲ್ಲಿದೆ ನೋಡಿ ಪೋಸ್ಟ್​:

Posts from the hyderabad community on Reddit

ಊಟದ ವಿಷಯದಲ್ಲಿ ಹೈದರಾಬಾದ್‌ಗೆ ಬೆಂಗಳೂರನ್ನು ಹೋಲಿಸಲು ಸಾಧ್ಯವೇ ಇಲ್ಲ. ಇಲ್ಲಿನ ಬಿರಿಯಾನಿ ಮತ್ತು ಫುಡ್ ಸೂಪರ್. ಆದರೆ ಕೆಲವೊಮ್ಮೆ ಆಹಾರ ತೀರಾ ಖಾರವಾಗಿರುತ್ತದೆ. ಹೈದರಾಬಾದ್‌ನ ಜನ ಸಖತ್ ಫ್ರೆಂಡ್ಲಿ. ಇಲ್ಲಿ ಹಿಂದಿ ಭಾಷೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಬೆಂಗಳೂರಿಗೆ ಹೋಲಿಸಿದರೆ ಇಲ್ಲಿ ಇಂಗ್ಲಿಷ್ ಬಳಕೆ ಸ್ವಲ್ಪ ಕಡಿಮೆ. ಹೈದರಾಬಾದ್‌ನಲ್ಲಿ ಪೀಕ್ ಅವರ್ಸ್‌ನಲ್ಲಿ ಟ್ರಾಫಿಕ್ ಜಾಮ್ ಇದ್ದರೂ ಸಂಚಾರ ನಿರ್ವಹಣೆ ಬೆಂಗಳೂರಿಗಿಂತ ಉತ್ತಮವಾಗಿದೆ. ಅಲ್ಲದೆ ಇಲ್ಲಿ ಬೆಂಗಳೂರಿಗಿಂತ ಹೆಚ್ಚು ಸೂಪರ್ ಕಾರ್ ಹಾಗೂ ಐಷಾರಾಮಿ ಕಾರುಗಳು ಓಡಾಡುತ್ತವೆ. ಇಲ್ಲಿನ ಜನ ಭಾರಿ ಹಣ ಮಾಡುತ್ತಾರೆ ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: ಇದು ಅಡವಿಯಲ್ಲ, ಸಿಲಿಕಾನ್ ಸಿಟಿ ಒಳಗಿನ ‘ಅರ್ಬನ್ ಫಾರೆಸ್ಟ್’: ಐಐಎಸ್‌ಸಿ ಕ್ಯಾಂಪಸ್‌ನ ಮನಮೋಹಕ ಹಸಿರು ಸೌಂದರ್ಯ ಹೇಗಿದೆ ನೋಡಿ?

ಈ ಪೋಸ್ಟ್‌ಗೆ ನೆಟ್ಟಿಗರಿಂದ ಭಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. 30 ವರ್ಷಗಳಿಂದ ಹೈದರಾಬಾದ್‌ನಲ್ಲಿರುವ ವ್ಯಕ್ತಿಯೊಬ್ಬರು, “ನೀವು ತಪ್ಪು ಸಮಯದಲ್ಲಿ ಹೈದರಾಬಾದ್‌ಗೆ ಬಂದಿದ್ದೀರಿ, ಈ ಬಾರಿ ಎಂದೂ ಇಲ್ಲದಷ್ಟು ಭೀಕರ ಬೇಸಿಗೆ ಇತ್ತು” ಎಂದಿದ್ದಾರೆ. ಮತ್ತೊಬ್ಬರು, “ಒಟ್ಟಾರೆ ನಗರಕ್ಕಿಂತ ನೀವು ಯಾವ ಏರಿಯಾದಲ್ಲಿ ವಾಸಿಸುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಅನುಭವ ನಿರ್ಧಾರವಾಗುತ್ತದೆ” ಎಂದಿದ್ದಾರೆ. “ಎರಡೂ ನಗರಗಳು ಚೆನ್ನಾಗಿದ್ದರೂ, ಮೆಟ್ರೋ ಸಿಟಿಗಳಲ್ಲಿ ಒಳ್ಳೆಯ ಜನರಿದ್ದರೂ ಒಂಟಿತನ ಮಾತ್ರ ಖಾಯಂ” ಎಂದು ಇನ್ನೊಬ್ಬರು ಬೇಸರ ಹಂಚಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Mon, 22 June 26

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ