AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಎಲ್‌ಪಿಜಿ ಹಾಹಾಕಾರ: ಆಟೋ ಚಾಲಕರ ಬೆನ್ನಲ್ಲೇ ಇನ್ಶೂರೆನ್ಸ್ ಏಜೆಂಟರೂ ಕಂಗಾಲು! ಯಾಕೆ ಗೊತ್ತಾ?

ಬೆಂಗಳೂರಿನಲ್ಲಿ ಎಲ್‌ಪಿಜಿ ಅಭಾವದಿಂದಾಗಿ ಆಟೋ ಚಾಲಕರು ಕಂಗಾಲಾಗಿದ್ದು, ದುಡಿಮೆ ಇಲ್ಲದೆ ಕಂಗಾಲಾಗಿದ್​ದರೆ ಜತೆಗೆ ಇದೀಗ ವಿಮೆ ಕಟ್ಟಲೂ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಇನ್ಶೂರೆನ್ಸ್ ಏಜೆಂಟ್‌ಗಳ ಮೇಲೂ ಪರಿಣಾಮ ಬೀರಿದ್ದು, ಸಾವಿರಾರು ಆಟೋಗಳ ವಿಮೆ ನವೀಕರಣವಾಗದೆ ಬಾಕಿ ಉಳಿದಿವೆ. ಇದು ವಿಮೆ ಏಜೆಂಟ್​​ಗಳನ್ನೂ ಸಂಕಷ್ಟಕ್ಕೆ ದೂಡಿದೆ.

ಬೆಂಗಳೂರಲ್ಲಿ ಎಲ್‌ಪಿಜಿ ಹಾಹಾಕಾರ: ಆಟೋ ಚಾಲಕರ ಬೆನ್ನಲ್ಲೇ ಇನ್ಶೂರೆನ್ಸ್ ಏಜೆಂಟರೂ ಕಂಗಾಲು! ಯಾಕೆ ಗೊತ್ತಾ?
ಆಟೋ ಇನ್ಶೂರೆನ್ಸ್ (ಸಾಂದರ್ಭಿಕ ಚಿತ್ರ)Image Credit source: tv9
ಗಣಪತಿ ಶರ್ಮಾ
|

Updated on: Apr 11, 2026 | 7:05 AM

Share

ಬೆಂಗಳೂರು, ಏಪ್ರಿಲ್ 11: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಎಲ್‌ಪಿಜಿ (LPG) ಸಿಗದೆ ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಗ್ಯಾಸ್ ಅಭಾವವು ಈಗ ವಿಮಾ ಏಜೆಂಟ್‌ಗಳ (Insurance Agents) ನಿದ್ದೆಗೆಡಿಸಿದೆ. ಗ್ಯಾಸ್ ಇಲ್ಲದೆ ಬಾಡಿಗೆ ಸಿಗುತ್ತಿಲ್ಲ, ಬಾಡಿಗೆ ಇಲ್ಲದೆ ಇನ್ಶೂರೆನ್ಸ್ ಕಟ್ಟಲು ಹಣವಿಲ್ಲ ಎಂಬ ಸ್ಥಿತಿಗೆ ಚಾಲಕರು ಬಂದು ತಲುಪಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಎಲ್‌ಪಿಜಿ ಆಟೋ ಬೆಂಗಳೂರಿನಲ್ಲಿ!

ದೇಶದಲ್ಲೇ ಅತಿ ಹೆಚ್ಚು ಎಲ್‌ಪಿಜಿ ಆಟೋಗಳನ್ನು ಬಳಸುವ ನಗರ ಬೆಂಗಳೂರು. ಆದರೆ ಕಳೆದ ಕೆಲವು ದಿನಗಳಿಂದ ಗ್ಯಾಸ್ ಬಂಕ್‌ಗಳ ಮುಂದೆ ಆಟೋಗಳ ಕಿಲೋಮೀಟರ್ ಉದ್ದದ ಸಾಲು ಕಂಡುಬರುತ್ತಿದೆ. ಎಲ್‌ಪಿಜಿ ಸಿಗದೆ ಚಾಲಕರು ದಿನಪೂರ್ತಿ ಬಂಕ್‌ಗಳ ಮುಂದೆಯೇ ಕಳೆಯುವಂತಾಗಿದ್ದು, ಸರಿಯಾದ ಬಾಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಆರ್ಥಿಕ ಸಂಕಷ್ಟದ ಸರಪಳಿ ಈಗ ಇನ್ಶೂರೆನ್ಸ್ ಕಂಪನಿಗಳಿಗೂ ತಟ್ಟಿದೆ.

ಲ್ಯಾಪ್ಸ್ ಆಗುತ್ತಿದೆ ಇನ್ಶೂರೆನ್ಸ್

ಸಾಮಾನ್ಯವಾಗಿ ಪ್ರತಿ ತಿಂಗಳು ಸಾವಿರಾರು ಆಟೋ ಚಾಲಕರು ತಮ್ಮ ವಾಹನದ ವಿಮೆಯನ್ನು ನವೀಕರಿಸುತ್ತಿದ್ದರು (Renew). ಆದರೆ ಈಗ ಬಾಡಿಗೆ ಇಲ್ಲದೆ ತಿನ್ನಲು ಹಣವಿಲ್ಲದಂತಾಗಿದ್ದು, ಇನ್ಶೂರೆನ್ಸ್ ಕಟ್ಟಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ವಿಮಾ ಏಜೆಂಟರು ಕರೆ ಮಾಡಿದರೆ, ‘ಊಟಕ್ಕೇ ದುಡ್ಡಿಲ್ಲ, ಇನ್ಶೂರೆನ್ಸ್ ಎಲ್ಲಿಂದ ಕಟ್ಟೋದು?’ ಎಂಬ ಉತ್ತರ ಚಾಲಕರಿಂದ ಬರುತ್ತಿದೆ. ಇದರಿಂದಾಗಿ ವಿಮಾ ಕಂಪನಿಗಳಿಗೆ ಮತ್ತು ಏಜೆಂಟ್‌ಗಳಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಸಾವಿರಾರು ಆಟೋಗಳ ಇನ್ಶೂರೆನ್ಸ್ ಈಗ ಲ್ಯಾಪ್ಸ್ ಆಗುತ್ತಿದೆ ಎಂದು ಮೇಘನಾ ಇಂಟರ್ನ್ಯಾಷನಲ್ ಮಾಲೀಕ ವಸಂತ್ ರಾಜ್ ಅಳಲು ತೋಡಿಕೊಂಡಿದ್ದಾರೆ.

ಜೀವಕ್ಕೂ ಅಪಾಯ

ದುಡ್ಡಿದ್ದರೆ ಇನ್ಶೂರೆನ್ಸ್, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿಗೆ ಆಟೋ ಚಾಲಕರು ಬಂದಿದ್ದಾರೆ. ಆದರೆ ಇನ್ಶೂರೆನ್ಸ್ ಇಲ್ಲದೆ ಆಟೋ ಓಡಿಸುವಾಗ ಸಣ್ಣ ಪುಟ್ಟ ಅಪಘಾತಗಳಾದರೂ ಅದರ ಸಂಪೂರ್ಣ ಹೊಣೆಯನ್ನು ಚಾಲಕರೇ ಹೊರಬೇಕಾಗುತ್ತದೆ. ವಿಮೆಯ ಯಾವುದೇ ಸೌಲಭ್ಯಗಳು ಅವರಿಗೆ ದೊರೆಯುವುದಿಲ್ಲ.

ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ 5 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ!

ಎಲ್‌ಪಿಜಿ ಸಮಸ್ಯೆಯಿಂದಾಗಿ ಚಾಲಕರು ತಮ್ಮ ಜೀವನಕ್ಕೆ ಮಾತ್ರವಲ್ಲದೆ, ಜೀವಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!