ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಬಂದ ಜೆಟ್ ಪ್ಯಾಚರ್ ಮೆಷಿನ್ ಬಗ್ಗೆ ವಿವರಿಸಿದ ಕೃಷ್ಣಭೈರೇಗೌಡ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗಿ ಪ್ರಯಾಣಿಕರು, ವಾಹನ ಚಾಲಕರು ಹೈರಾಣಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಜಿಬಿಎ ಹಾಗೂ ಸಚಿವ ಕೃಷ್ಣಭೈರೇಗೌಡ ಕೂಡ ನಾನಾ ರೀತಿಯ ಕಸರತ್ತು ಮಾಡಿ ಗುಂಡಿ ಮುಚ್ಚಲು ಹರಸಾಹಸಪಡುತ್ತಿದ್ದಾರೆ. ಇದೀಗ ಜೆಟ್ ಪ್ಯಾಚರ್ ಮೆಷಿನ್ ತಂದಿದ್ದಾರೆ. ಹಾಗಾದ್ರೆ, ಈ ಜೆಟ್ ಪ್ಯಾಚರ್ ಮೆಷಿನ್ ಹೇಗೆ ಕೆಲಸ ಮಾಡುತ್ತೆ ಎನ್ನುವುದನ್ನು ಕೃಷ್ಣಭೈರೇಗೌಡ ವಿವರಿಸಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಬಂದ ಜೆಟ್ ಪ್ಯಾಚರ್ ಮೆಷಿನ್ ಬಗ್ಗೆ ವಿವರಿಸಿದ ಕೃಷ್ಣಭೈರೇಗೌಡ
Krishnabyregowda
Edited By:

Updated on: Sep 11, 2026 | 4:25 PM

ಬೆಂಗಳೂರು, (ಸೆಪ್ಟೆಂಬರ್ 11): ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿಯುತ್ತಿಲ್ಲ. ಹೈಕೋರ್ಟ್ ಚಾಟಿ ಬೀಸಿ ಎಚ್ಚರಿಕೆ ನೀಡಿದರೂ ಸಹ ಜಿಬಿಎ ಅಧಿಕಾರಿಗಳು ಮಾತ್ರ ಮುಚ್ಚುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಆಗಿದ್ದು, ಈಗಾಗಲೇ ಫುಟ್​​ಪಾತ್ ಸೇರಿಂತೆ ನಗರ ಬದಲಾವಣೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದೀಗ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ಜೆಟ್ ಪ್ಯಾಚರ್ ಮೆಷಿನ್​​ಗೆ ಮೂಲಕ ಟ್ರಾಫಿಕ್ ಜಾಮ್ ಆಗದೇ ಗುಂಡಿ ಮುಚ್ಚಲು ಮುಂದಾಗಿದ್ದಾರೆ. ಹೀಗಾಗಿ ಪ್ರಯೋಗಿಕವಾಗಿ ಇಂದು (ಸೆ.11) ಈ ಜೆಟ್ ಪ್ಯಾಚರ್ ಮೆಷಿನ್​​ಗೆ ಕೃಷ್ಣಭೈರೇಗೌಡ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೃಷ್ಣಭೈರೇಗೌಡ, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ವ್ಯಾಪಕವಾಗಿದೆ. ಎಲ್ಲಾ ಕಡೆಗಳಲ್ಲಿ ಒಂದೇ ಪರಿಹಾರ ಕೊಡೋಕೆ ಆಗಲ್ಲ. ಕೆಲವು ಕಡೆ ಟಾರ್ ಎದ್ದು ಹೋಗಿರುತ್ತೆ. ರಸ್ತೆ ಗುಂಡಿಗಳ ಪರಿಹಾರಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ಎರಡ್ಮೂರು ಇಂಚು ಗುಂಡಿ ಬಿದ್ರೆ ಮಶೀನ್ ಮೂಲಕ ಕವರ್ ಮಾಡುತ್ತೇವೆ. ಟ್ರಾಫಿಕ್ ಸಂಪೂರ್ಣ ಬಂದ್ ಮಾಡೋದು ಬೇಡ . ರಾತ್ರಿ ಹೊತ್ತು ಹೋಗಿ ಕೆಲಸ ಮಾಡೋದು ಬೇಡ. ಒಂದೇ ಮಷಿನ್​​ನಲ್ಲಿ ಟ್ರಾಫಿಕ್ ಮಧ್ಯೆ ಕೆಲಸ ಮಾಡಬಹುದು ಎಂದಿದ್ದಾರೆ.

ಈ ಮಷಿನ್​​​​ನಿಂದ ಟ್ರಾಫಿಕ್ ಮಧ್ಯೆ ಕೆಲಸ ಮಾಡಬಹುದು

MS Building Road ಜೆಟ್ ಪ್ಯಾಚರ್ ಮೆಷಿನ್ ಅನುಕೂಲದ ಬಗ್ಗೆ ವಿವರಿಸಿದ ಸಚಿವ ಕೃಷ್ಣ ಬೈರೇಗೌಡ | #TV9D
ಒಂದೇ ಮಷಿನ್ ನಲ್ಲಿ ಡಸ್ಟ್ ಕ್ಲಿನ್, ವೆಟ್ ಮಿಕ್ಸ್ ಹಾಕೋ ಮೂಲಕ ಟ್ರಾಫಿಕ್ ಸಂಪೂರ್ಣವಾಗಿ ನಿಲ್ಲಿಸದೆ ಟ್ರಾಫಿಕ್ ಮಧ್ಯೆ ಕೆಲಸ ಮಾಡಬಹುದು. ಹಾಟ್ ಮಿಕ್ಸ್ ಯಾಕೆ ಹಾಕಲ್ಲ ಅಂದ್ರೆ ಮಳೆಗಾಲ ಅಲ್ಲಿ ಹಾಕೋಕೆ ಆಗಲ್ಲ. ಟ್ರಾಫಿಕ್ ಅಲ್ಲಿ ಹಾಕೋಕೆ ಆಗಲ್ಲ. 2 ಗಂಟೆ ಟ್ರಾಫಿಕ್ ಬಿಡೋಕೆ ಆಗಲ್ಲ . ಈ ಕೆಲವು ಹೈ ಡೆನ್ಸಿಟಿ ರೋಡ್ ಗಳಲ್ಲಿ ಈ ಜೆಟ್ ಪ್ಯಾಚರ್ ಮೂಲಕ ರೋಡ್ ನಿಯಂತ್ರಣ ಮಾಡ್ತೇವೆ. ಹಾಟ್ ಮಿಕ್ಸ್ ಹಾಕೋಕೆ ರೋಲರ್ ಬೇಕು. ಕ್ವಾಂಟಿಟಿ ಕೂಡ ಜಾಸ್ತಿ ಬೇಕಾಗುತ್ತದೆ . ಈ ಮಶೀನ್ ಅಲ್ಲಿ ಒಂದೇ ಒಂದು ಗುಂಡಿ ಬಿದ್ದಿದರೆ ಕೂಡ ಕವರ್ ಮಾಡಬಹುದು.

ಆಳವಾದ ಗುಂಡಿ ಬಿದ್ದಿದ್ರೆ ಇದು ವರ್ಕ್ ಆಗಲ್ಲ

ಕೇಂದ್ರ ನಗರ ಪಾಲಿಕೆಯಿಂದ ಟ್ರಯಲ್ ಮೂಲಕ ಆರಂಭ ಮಾಡಿದ್ದೇವೆ. ಇದು ಇಲ್ಲಿ ಯಶಸ್ವಿಯಾದರೆ ಬೇರೆ ಕಾರ್ಪೊರೇಷನ್ ಅಲ್ಲಿ ಬಳಕೆ ಮಾಡಬಹುದು. ತುಂಬಾ ಆಳವಾದ ಗುಂಡಿ ಬಿದ್ದಿದ್ದರೆ ಇದು ವರ್ಕ್ ಆಗಲ್ಲ. ಹೀಗಾಗಿ ಆಳವಾದ ಗುಂಡಿಗಳಿಗೆ ಬೇರೆ ಮೆಥಡ್ ಕಂಡು ಹಿಡಿಯಬೇಕಿದೆ.ಅಲ್ಲೊಂದು ಇಲ್ಲೊಂದು ಗುಂಡಿ ಇದ್ರೆ ಮಾತ್ರ ಜೆಟ್ ಪ್ಯಾಚರ್ ಉಪಯುಕ್ತ .ಆ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಆರಂಭ ಮಾಡಿದ್ದೇವೆ ಎಂದು ಹೇಳಿದರು.

ಡ್ಯಾಶ್ ಕ್ಯಾಮ್ ಮೂಲಕ ರಸ್ತೆ ಗುಂಡಿ ಪತ್ತೆ

ಪ್ರಹಾರಿ ವಾಹನಗಳಿಗೆ ಡ್ಯಾಶ್ ಕ್ಯಾಮ್ ಅಳವಡಿಕೆ ಮಾಡಿ ರಸ್ತೆ ಗುಂಡಿ ಪತ್ತೆ ಹಚ್ಚುತ್ತೇವೆ ಎಂದ ಕೃಷ್ಣ ಬೈರೇಗೌಡ | #TV9D
ಬೆಂಗಳೂರಿನಲ್ಲಿ ಎಷ್ಟು ಗುಂಡಿ ಇದೆ ಅಂತ ಹೇಳುತಲೇ ಇರುತ್ತೇವೆ. ಗುಂಡಿ ಹೇಳಿದ್ರೆ ಅಪಹಾಸ್ಯಕ್ಕೆ ದಾರಿ ಮಾಡಿಕೊಡುತ್ತೆ. ಎಲ್ಲಾ ರಸ್ತೆ ಎಸ್ಟಿಮೇಟ್ ಮಾಡಿರಲಿಕ್ಕೆ ಸಾಧ್ಯ ಇಲ್ಲ. 15 ಸಾವಿರ ಕಿಲೋಮೀಟರ್ ರಸ್ತೆ ಇದೆ. ಭವಿಷ್ಯದಲ್ಲಿ ವೈಜ್ಞಾನಿಕ ಉತ್ತರ ಕೊಡಬೇಕಾದರೆ ಪ್ರಹಾರಿ ವಾಹನಗಳಿಗೆ ಡ್ಯಾಶ್ ಕ್ಯಾಮ್ ಅಳವಡಿಕೆ ಮಾಡುತ್ತಿದ್ದೇವೆ. ಇದಕ್ಕಾಗಿ ಕಾರ್ಪೊರೇಶನ್ ವತಿಯಿಂದ ಕೆಲವು ವಾಹನಕ್ಕೆ ಕ್ಯಾಮ್ ಫಿಕ್ಸ್ ಮಾಡುತ್ತೇವೆ. ಅದೇ ರಸ್ತೆಯಲ್ಲಿ ಅನಾಲಿಸಿಸ್ ಮಾಡುವ ಪ್ರಕ್ರಿಯೆ ಆರಂಭ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us