AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಗೆದಷ್ಟು ಬಯಲಾಗುತ್ತಿದೆ RTO ಅಧಿಕಾರಿಗಳ ಭ್ರಷ್ಟಾಚಾರ! ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗ

ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರದ ಕುರಿತು ವಕೀಲ ನಟರಾಜ್ ಶರ್ಮಾ ದೂರು ನೀಡಿದ್ದಾರೆ. ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ಹೊರ ರಾಜ್ಯದ 10 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ತಪಾಸಣೆ ಮಾಡದೆ ಫಿಟ್ನೆಸ್ ಸರ್ಟಿಫಿಕೆಟ್ (ಎಫ್‌ಸಿ) ನೀಡಲಾಗಿದೆ. ಈ ಅಕ್ರಮದಲ್ಲಿ ನಾಲ್ವರು ಮೋಟಾರು ವಾಹನ ನಿರೀಕ್ಷಕರು ಭಾಗಿಯಾಗಿದ್ದು, ಸಾರಿಗೆ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಬಗೆದಷ್ಟು ಬಯಲಾಗುತ್ತಿದೆ RTO ಅಧಿಕಾರಿಗಳ ಭ್ರಷ್ಟಾಚಾರ! ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗ
ಬಗೆದಷ್ಟು ಬಯಲಾಗುತ್ತಿದೆ RTO ಅಧಿಕಾರಿಗಳ ಭ್ರಷ್ಟಾಚಾರ! ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗ
ಕಿರಣ್​ ಸೂರ್ಯ
| Edited By: |

Updated on: Feb 13, 2026 | 2:19 PM

Share

ಬೆಂಗಳೂರು, ಫೆಬ್ರವರಿ 13: ಕೆಲ ದಿನಗಳ ಹಿಂದಷ್ಟೇ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಸದ್ದು ಮಾಡಿತ್ತು. ವಾಹನಗಳನ್ನು ತಪಾಸಣೆ ಮಾಡದೇ ಸಾವಿರಾರು ಹೊರ ರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್ (ಎಫ್‌ಸಿ) ನೀಡಿರುವುದು ರಾಜ್ಯ ಸಾರಿಗೆ ಇಲಾಖೆ ಗಮನಕ್ಕೆ ಬಂದಿದ್ದಲ್ಲದೇ ಇದೀಗ ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗಗೊಂಡಿದೆ.

40 ಅಲ್ಲ 10 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ಅನಧಿಕೃತ ಎಫ್‌ಸಿ

ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 10,022 ವಾಹನಗಳಿಗೆ ಕಳೆದ ಆರು ತಿಂಗಳಲ್ಲಿ ಅನಧಿಕೃತವಾಗಿ ಎಫ್‌ಸಿ ನೀಡಲಾಗಿದೆ ಎಂದು ಟಿವಿ9 ಗೆ ದಾಖಲೆಗಳು ದೊರೆತಿದ್ದು, ಈ ಅಕ್ರಮದಲ್ಲಿ ನಾಲ್ವರು ಮೋಟಾರು ವಾಹನ ನಿರೀಕ್ಷಕರು ಭಾಗಿಯಾಗಿರುವುದು ದೃಢಪಟ್ಟಿದೆ.

ಕಳೆದ ತಿಂಗಳು ಗುಜರಾತಿನ 41 ಶಾಲಾ ವಾಹನಗಳಿಗೆ ಎಫ್‌ಸಿ ನೀಡುವ ವೇಳೆ ತಪಾಸಣೆ ಮಾಡದೇ ಅನಧಿಕೃತ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿ ನಿಸಾರ್ ಅಹಮದ್ ಅಮಾನತುಗೊಂಡಿದ್ದರು. ಆದರೆ ಇದೀಗ ಬೆಳಕಿಗೆ ಬಂದ ದಾಖಲೆಗಳ ಪ್ರಕಾರ, ಕೇವಲ 41 ವಾಹನಗಳಷ್ಟೇ ಅಲ್ಲ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹೊರ ರಾಜ್ಯದ ವಾಹನಗಳಿಗೆ ಸಹ ತಪಾಸಣೆ ನಡೆಸದೆ ಎಫ್‌ಸಿ ನೀಡಲಾಗಿದೆ. ಈ ಎಲ್ಲಾ ಅಕ್ರಮಗಳ ಕುರಿತು ವಕೀಲ ನಟರಾಜ್ ಶರ್ಮಾ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್​ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು

 ಕೋರಮಂಗಲ ಆರ್ಟಿಓದಲ್ಲಿ ತಪಾಸಣೆ ಮಾಡದೆ ಎಫ್ಸಿ ನೀಡಿದ ದಾಖಲೆ

  1.  2025ರ ಆಗಸ್ಟ್ ನಲ್ಲಿ – 646 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್- ಮಹಾರಾಷ್ಟ್ರಮತ್ತು ಗುಜರಾತಿನ 636 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ಎ.ಎ. ಖಾನ್.( ಹಿರಿಯ ಮೋಟಾರು ವಾಹನ ನಿರೀಕ್ಷಕ ) ಮಹಾರಾಷ್ಟ್ರದ 10 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
  2.  ಸೆಪ್ಟೆಂಬರ್ – 1,168 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ನಿಸಾರ್ ಅಹಮದ್, (ಮಹಾರಾಷ್ಟ್ರ, ಗುಜರಾತ್- 1149 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ಎ.ಎ. ಖಾನ್- ( ಮಹಾರಾಷ್ಟ್ರ,ಕೇರಳ, ಗುಜರಾತ್ – 19 ವಾಹನಗಳಿಗೆ ಎಫ್ಸಿ ನೀಡಿದ್ದಾರೆ )
  3.  ಅಕ್ಟೋಬರ್- 1,813 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ನಿಸಾರ್ ಅಹಮದ್- (ಮಹಾರಾಷ್ಟ್ರ ಮತ್ತು ಗುಜರಾತ್ -1802 ವಾಹನಗಳಿಗೆ ಎಫ್ಸಿ ನೀಡಿದ್ರೆ, ಎ.ಎ.ಖಾನ್ ( ಕೇರಳ ಮತ್ತು ಮಹಾರಾಷ್ಟ್ರದ – 11 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
  4.  ನವೆಂಬರ್- 3,383 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ನಿಸಾರ್ ಅಹಮದ್- ( ಮಹಾರಾಷ್ಟ್ರ, ಗುಜರಾತ್ -3381 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ನರಸಿಂಹ ರೆಡ್ಡಿ- ಮೋಟಾರು ವಾಹನ ನಿರೀಕ್ಷಕ. ( ಮಹಾರಾಷ್ಟ್ರದ – 2 ವಾಹನಗಳಿಗೆ ಎಫ್ಸಿ ನೀಡಿದ್ದಾರೆ )
  5.  ಡಿಸೆಂಬರ್- 2,057 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ನಿಸಾರ್ ಅಹಮದ್- 2,054 ( ಮಹಾರಾಷ್ಟ್ರ, ಗುಜರಾತ್ ) ಎ.ಎ. ಖಾನ್ – 1 ( ಕೇರಳ ) ಹೆಚ್.ಎಂ ಮಂಜುನಾಥ್- 2 ( ಮಹಾರಾಷ್ಟ್ರ,)
  6.  2026- ಜನವರಿ- 955 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ನಿಸಾರ್ ಅಹಮದ್- 952 ( ಮಹಾರಾಷ್ಟ್ರ, ಗುಜರಾತ್ ) ಎ.ಎ. ಖಾನ್- 3 ( ಮಹಾರಾಷ್ಟ್ರ ಮತ್ತು ಕೇರಳ, )

ಈ ಪ್ರಕರಣವು ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಹಣದಾಸೆಗೆ ಸಂಬಂಧಿಸಿದ ಅಕ್ರಮ ಕಾರ್ಯಪ್ರವೃತ್ತಿಗಳನ್ನು ಬಹಿರಂಗಪಡಿಸುತ್ತದೆ. ಸಾರಿಗೆ ಇಲಾಖೆ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡರೆ, ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಬಹುದಾಗಿದೆ ಎಂದು ವಕೀಲರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?