AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹಳೇ ಕಾಲದ ‘ಬಾಯ್ಲರ್ ಚಹಾ’ ಕುಡಿಯಬೇಕೇ?: ಹಾಗಾದ್ರೆ ವಸಂತನಗರದ ಈ ಸ್ಪಾಟ್‌ಗೆ ಒಮ್ಮೆ ವಿಸಿಟ್ ಕೊಡಿ!

ಬೆಂಗಳೂರಿನಲ್ಲಿ ಆಧುನಿಕ ಕೆಫೆಗಳ ನಡುವೆಯೂ, ವಸಂತನಗರದ ಮುರುಗನ್ ಟೀ ಸ್ಟಾಲ್ ಸಾಂಪ್ರದಾಯಿಕ ಬಾಯ್ಲರ್ ಚಹಾದ ಅಪ್ಪಟ ರುಚಿಯನ್ನು ಉಳಿಸಿಕೊಂಡಿದೆ. ತಾಮ್ರ/ಹಿತ್ತಾಳೆಯ ಬಾಯ್ಲರ್‌ಗಳಲ್ಲಿ ತಯಾರಾಗುವ ಈ ಚಹಾ, ಚಹಾ ಪ್ರಿಯರ ನೆಚ್ಚಿನ ತಾಣವಾಗಿದೆ. ವಿಧಾನ ಸೌಧಕ್ಕೆ ಭೇಟಿ ನೀಡುವವರು ಈ ಹಳೇ ಕಾಲದ ಬಿಸಿ ಬಿಸಿ ಚಹಾ ಸವಿಯಲು ನಗರದ ಮೂಲೆ ಮೂಲೆಗಳಿಂದ ಬರುತ್ತಾರೆ.

ಬೆಂಗಳೂರಿನಲ್ಲಿ ಹಳೇ ಕಾಲದ 'ಬಾಯ್ಲರ್ ಚಹಾ' ಕುಡಿಯಬೇಕೇ?: ಹಾಗಾದ್ರೆ ವಸಂತನಗರದ ಈ ಸ್ಪಾಟ್‌ಗೆ ಒಮ್ಮೆ ವಿಸಿಟ್ ಕೊಡಿ!
ಬಾಯ್ಲರ್ ಚಹಾ ಬೆಂಗಳೂರು
ಅಕ್ಷಯ್​ ಪಲ್ಲಮಜಲು​​
|

Updated on: Jun 03, 2026 | 2:54 PM

Share

ಬೆಂಗಳೂರು, ಜೂ.3: ಆಧುನಿಕ ಕೆಫೆಗಳು ಮತ್ತು ಕೃತಕ ಟೀ ಮೇಕರ್‌ಗಳ ಹಾವಳಿಯ ನಡುವೆ, ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಟೀ ಬಾಯ್ಲರ್‌ನಲ್ಲಿ (Traditional Tea Boiler) ಹದವಾಗಿ ಕುದಿಸಿದ ಚಹಾದ ಅಪ್ಪಟ ರುಚಿಯನ್ನು ಹುಡುಕುವುದು ಈಗ ನಿಜಕ್ಕೂ ಅಪರೂಪದ ಸಂಗತಿಯಾಗಿದೆ. ಆದರೆ, ಹಳೇ ಕಾಲದ ಆ ಅದ್ಭುತ ರುಚಿ ಮತ್ತು ಫೀಲ್ ಅನ್ನು ಇಂದಿಗೂ ಯಥಾವತ್ತಾಗಿ ಉಳಿಸಿಕೊಂಡು ಬಂದಿದೆ ಬೆಂಗಳೂರಿನ ವಸಂತನಗರದಲ್ಲಿರುವ ಪ್ರಸಿದ್ಧ ‘ಮುರುಗನ್ ಟೀ ಸ್ಟಾಲ್’.

ಚಹಾ ಪ್ರಿಯರ ಪ್ರಕಾರ, ನಾರ್ಮಲ್ ಪಾತ್ರೆಯಲ್ಲಿ ಮಾಡುವ ಚಹಾಕ್ಕಿಂತಲೂ, ತಾಮ್ರ ಅಥವಾ ಹಿತ್ತಾಳೆಯ ಸಾಂಪ್ರದಾಯಿಕ ದೊಡ್ಡ ಬಾಯ್ಲರ್‌ಗಳಲ್ಲಿ ನಿರಂತರವಾಗಿ ಕುದಿಯುವ ನೀರಿನಲ್ಲಿ ತಯಾರಾಗುವ ಚಹಾದ ರುಚಿಯೇ ಬೇರೆ. ವಸಂತನಗರದ ಈ ಸಣ್ಣ ಟೀ ಅಂಗಡಿಯಲ್ಲಿ ಇಂದಿಗೂ ಅದೇ ಸಾಂಪ್ರದಾಯಿಕ ಶೈಲಿಯನ್ನು ಬಳಸಲಾಗುತ್ತಿದ್ದು, ಇಲ್ಲಿನ ಒಂದು ಬಿಸಿ ಬಿಸಿ ಕಪ್ ಚಹಾ ಕುಡಿಯಲು ನಗರದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೇಶದ ಮೊದಲ ‘ಡಬಲ್ ಡೆಕ್ಕರ್’ ಸಾರಿಗೆ: ಒಂದೇ ಮಾರ್ಗದಲ್ಲಿ ಮೆಟ್ರೋ ಮತ್ತು ಸಬರ್ಬನ್ ರೈಲು; 169 ಕೋಟಿ ರೂ. ಉಳಿತಾಯ!

ಇಲ್ಲಿದೆ ನೋಡಿ ಪೋಸ್ಟ್​​;

ಇಂದು ರಾಜಧಾನಿಯ ಹೃದಯಭಾಗವಾದ ‘ವಿಧಾನ ಸೌಧ’ದ ಸುತ್ತಮುತ್ತಲಿನ ಅದ್ಭುತ ವಾತಾವರಣ, ಹಸಿರು ಮತ್ತು ಸಾಂಸ್ಕೃತಿಕ ವೈಬ್ಸ್ ಅನ್ನು ಆನಂದಿಸಲು ಹೊರಡುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಈ ಮುರುಗನ್ ಸ್ಟಾಲ್‌ನ ಬಿಸಿ ಚಹಾ ಒಂದು ಪರ್ಫೆಕ್ಟ್ ಎನರ್ಜಿ ಬೂಸ್ಟರ್ ಆಗಿದೆ. ಕಾವೇರಿ ಕಾಂಪ್ಲೆಕ್ಸ್ ಅಥವಾ ವಸಂತನಗರದ ಕಡೆಯಿಂದ ಬರುವವರು ಇಲ್ಲಿ ಒಂದು ಕಪ್ ಬಾಯ್ಲರ್ ಟೀ ಸವಿದು, ನಂತರ ಅಲ್ಲಿಂದಲೇ ಹತ್ತಿರವಿರುವ ವಿಧಾನ ಸೌಧದ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಸಾಗುವುದು ಚಹಾ ಪ್ರಿಯರ ಇಂದಿನ ನೆಚ್ಚಿನ ದಿನಚರಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More