AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಶಾಕಿಂಗ್​​ ಘಟನೆ: 200 ರೂ. ಜಗಳಕ್ಕೆ ಮಹಿಳೆಯ ಆತ್ಮಹತ್ಯೆ. ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗಾಗಿ ತೆಗೆದಿಟ್ಟಿದ್ದ 1,300 ರೂ.ನಲ್ಲಿ 200 ರೂ. ಇರಲಿಲ್ಲ. ಸುಮಾ ಅವರ ಗಂಡ ಚಂದ್ರಶೇಖರ್ ಅವರು ವೈಯಕ್ತಿಕ ಕಾರಣಕ್ಕೆ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದು ಗಂಡ ಬಳಿ ಸುಮಾ ಕೇಳಿದ್ದಾರೆ. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ

ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jan 12, 2026 | 12:25 PM

Share

ಬೆಂಗಳೂರು, ಜ.12: ಬೆಂಗಳೂರಿನಿಂದ (Bengaluru) 30 ಕಿ.ಲೋ ದೂರದಲ್ಲಿರುವ ಬ್ಯಾಡರಹಳ್ಳಿ ಗ್ರಾಮದಲ್ಲಿ ಒಂದು ಅಘಾತಕಾರಿ​​ ಘಟನೆಯೊಂದು ನಡೆದಿದ್ದು, ಸುಂದರ ಕುಟುಂಬದಲ್ಲಿ ಕತ್ತಲೆ ಆವರಿಸಿದೆ. ಮನೆಗೆ ಬೆಳಕಾಗಿದ್ದ ಮನೆಯ ಯಜಮಾನಿಯ ತಪ್ಪು ನಿರ್ಧಾರದಿಂದ, ಗಂಡ, ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಇದೀಗ ಈ ಘಟನೆಯಿಂದ ಮನೆಯವರು ಮಾತ್ರವಲ್ಲದೆ ಇಡೀ ಗ್ರಾಮವೂ ಕೂಡ ಮರುಗಿದೆ.  200 ರೂ. ವಿಚಾರವಾಗಿ ಇಬ್ಬರ ನಡುವೆ ಸಣ್ಣ ಜಗಳದಿಂದ ಶುರುವಾಗಿದೆ. ಇದರಿಂದ ಬೇಸರುಗೊಂಡು  30 ವರ್ಷದ ಮಹಿಳೆ  ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಎರಡು ಮಕ್ಕಳ ತಾಯಿಯಾಗಿದ್ದ ಸುಮಾ, ಚಂದ್ರಶೇಖರ್ ಎಂಬುವವರನ್ನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗಳು ತಮ್ಮ ಮಕ್ಕಳು ಮತ್ತು ಮನೆಯ ಹಿರಿಯರ ಜತೆಗೆ ಸುಂದರ ಜೀವನ ನಡೆಸುತ್ತಿದ್ದರು. ಈ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದೀಗ ಮನೆಯೊಳಗೆ ಅಮ್ಮನಿಲ್ಲದೆ ಎಲ್ಲವೂ ಖಾಲಿ ಖಾಲಿಯಾಗಿದೆ.

ದಿನಗೂಲಿ ಕೆಲಸ ಮಾಡಿಕೊಂಡು ಬದುಕಿದ್ದ ಈ ಕುಟುಂಬದ ಬಗ್ಗೆ ನೆರೆಹೊರೆಯವರಿಗೆ ಬಹಳ ಪ್ರೀತಿ. ಏಷ್ಯಾನೆಟ್ ನ್ಯೂಸ್ ವರದಿ ಮಾಡಿರುವ ಪ್ರಕಾರ,  ಸಾಮಾನ್ಯವಾಗಿ ಜೀವನ ನಡೆಸುತ್ತಿದ್ದ ಈ ಕುಟುಂಬ ಯಾರೊಬ್ಬರ ಸುದ್ದಿಗೂ ಹೋಗುತ್ತಿರುಲಿಲ್ಲ. ಅವರ ಖರ್ಚು ಕೂಡ ಅಷ್ಟೇ ಎಚ್ಚರಿಕೆಯಿಂದ ಮಾಡುತ್ತಿದ್ದರು. ಹೀಗೆ ದಿನ ಕಳೆಯುತ್ತಿದ್ದಂತೆ, ಒಂದು ದಿನ ಬೆಳಿಗ್ಗೆ, ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗೆ ಸುಮಾ ತೆಗೆದಿಟ್ಟಿದ್ದ ಹಣದ ಬಗ್ಗೆ ಜಗಳ ಶುರುವಾಗಿದೆ. ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗಾಗಿ ತೆಗೆದಿಟ್ಟಿದ್ದ 1,300 ರೂ.ನಲ್ಲಿ 200 ರೂ. ಇರಲಿಲ್ಲ. ಸುಮಾ ಅವರ ಗಂಡ ಚಂದ್ರಶೇಖರ್ ಅವರು ವೈಯಕ್ತಿಕ ಕಾರಣಕ್ಕೆ ತೆಗೆದುಕೊಂಡಿದ್ದರು.

ಈ ವಿಚಾರ ಸುಮಾಗೆ ತಿಳಿದು ಗಂಡ ಚಂದ್ರಶೇಖರ್ ಜತೆಗೆ ಜಗಳಕ್ಕೆ ಇಳಿದಿದ್ದರು.ಇದರಿಂದ ಸುಮಾ ಕೂಡ ಬೇಸರದಲ್ಲಿದ್ದರು. ಕುಟುಂಬದ ಪರಿಚಯದವರು ಹೇಳುವಂತೆ ಜಗಳವು ಸಣ್ಣ ಪ್ರಮಾಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಚಂದ್ರಶೇಖರ್ ಮತ್ತು ಅವರ ತಾಯಿ ಈ ವಿಷಯದ ಬಗ್ಗೆ ಇತ್ಯರ್ಥ ಮಾಡಿ ಸುಮಾ ಅವರನ್ನು ಸಮಾಧಾನ ಮಾಡಿದ್ದಾರೆ. ಆದರೆ ಸುಮಾ ಇದರ ನೋವಿನಲ್ಲೇ ಇದ್ದರು. ಅವರಲ್ಲಿ ಆರ್ಥಿಕ ಒತ್ತಡ ಹೆಚ್ಚಾಗಿತ್ತು. ಈ ಕಾರಣಕ್ಕೆ ಈ ವಿಷಯ ಸಾಯುವ ಹಂತಕ್ಕೆ ಬಂದಿದೆ ಎಂದು ಕುಟುಂಬದವರು ಹೇಳುತ್ತಾರೆ.

ಇದನ್ನೂ ಓದಿ: “ಸರಿಯಾಗಿರೋ ಬಟ್ಟೆ ಧರಿಸಿ” ಎಂದ ಹೋಮ್​​ ಗಾರ್ಡ್​​​​ಗೆ ರಕ್ತ ಬರುವಂತೆ ಹೊಡೆದ ಬೆಂಗಳೂರಿನ ಯುವತಿ

ಈ ಇತ್ಯರ್ಥ ನಂತರ ಚಂದ್ರಶೇಖರ್​​​ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲೂ ಯಾರೂ ಇಲ್ಲದ ಕಾರಣ ಸುಮಾ ಕೂಡ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಘಟನೆಯ ಬಗ್ಗೆ ಮರಗುತ್ತಿದ್ದರು. ಚಂದ್ರಶೇಖರ್​​​​ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದ ವೇಳೆ ಸುಮಾ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಆ ದೃಶ್ಯವು ಮನೆ ಮತ್ತು ಹಳ್ಳಿಯಲ್ಲಿ ದೊಡ್ಡ ಅಘಾತವನ್ನು ಸೃಷ್ಟಿಸಿತ್ತು. ಇದೀಗ ಸುಮಾ 200 ರೂ. ಕಾರಣಕ್ಕೆ ಇಬ್ಬರು ಚಿಕ್ಕ ಮಕ್ಕಳನ್ನು ಅನಾಥ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 12 January 26

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ