AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಹೆಚ್ಚಿನ ಪ್ರದೇಶಗಳಿಗೆ ನಾಳೆ ಕಾವೇರಿ ನೀರು ಪೂರೈಕೆ ಸ್ಥಗಿತ: ಕಾರಣ, ಏರಿಯಾ ವಿವರ ಇಲ್ಲಿದೆ

Bengaluru water supply cut alert: ಬೆಂಗಳೂರು ನಗರದ ಅನೇಕ ಪ್ರದೇಶಗಳಿಗೆ ಶನಿವಾರ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ. ಹೀಗಾಗಿ ಆಯಾ ಪ್ರದೇಶಗಳ ಜನರು ಈಗಲೇ ನೀರು ಸಂಗ್ರಹಿಸಿ ಇಟ್ಟುಕೊಳ್ಳುವುದು ಒಳಿತು. ಯಾವೆಲ್ಲ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಇರುವುದಿಲ್ಲ? ಕಾರಣವೇನು ಎಂಬುದನ್ನು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವಿವರ ಇಲ್ಲಿದೆ.

ಬೆಂಗಳೂರಿನ ಹೆಚ್ಚಿನ ಪ್ರದೇಶಗಳಿಗೆ ನಾಳೆ ಕಾವೇರಿ ನೀರು ಪೂರೈಕೆ ಸ್ಥಗಿತ: ಕಾರಣ, ಏರಿಯಾ ವಿವರ ಇಲ್ಲಿದೆ
ಜಲಮಂಡಳಿ
Follow us
Ganapathi Sharma
|

Updated on:Sep 20, 2024 | 7:55 AM

ಬೆಂಗಳೂರು, ಸೆಪ್ಟೆಂಬರ್ 20: ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಆದಷ್ಟು ಬೇಗ ಬೆಂಗಳೂರಿನ ಮತ್ತಷ್ಟು ಪ್ರದೇಶಗಳಿಗೆ ನೀರು ಪೂರೈಕೆ ಮಾಡಬೇಕೆಂಬ ತರಾತುರಿಯಲ್ಲಿ ಜಲಮಂಡಳಿ ಇದೆ. ಈ ಮಧ್ಯೆ, 5ನೇ ಹಂತದ ಯೋಜನೆಯ ಕೊಳವೆಯನ್ನು ಹೆಗ್ಗನಹಳ್ಳಿಯ ನೆಲಮಟ್ಟದ ಸಂಗ್ರಹಗಾರಕ್ಕೆ ಜೋಡಿಸುವ ಕಾಮಗಾರಿ ಕೈಗೊಂಡಿರುವ ಕಾರಣ ಸೆಪ್ಟೆಂಬರ್ 21ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನೀರು ಪೂರೈಕೆ ವ್ಯತ್ಯಯ ಮತ್ತು ಸ್ಥಗಿತವಾಗುವ ಪ್ರದೇಶಗಳ ಬಗ್ಗೆ ಬೆಂಗಳೂರು ಜಲಮಂಡಳಿ ಪ್ರಕಟಣೆ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.

ಕಾವೇರಿ 5ನೇ ಹಂತದ 700 ಮಿ.ಮೀ. ಕೊಳವೆ ಮಾರ್ಗವನ್ನು ಹೆಗ್ಗನಹಳ್ಳಿಯ ನೆಲ ಮಟ್ಟದ ಸಂಗ್ರಹಾಗಾರಕ್ಕೆ ಜೋಡಿಸುವ ಕಾಮಗಾರಿಯನ್ನು ಸೆಪ್ಟೆಂಬರ್ 21ರ ಶನಿವಾರ ಕೈಗೊಳ್ಳಲಾಗುತ್ತಿದೆ. ಇದರಿಂದ ಶನಿವಾರ ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ಕಾವೇರಿ 4ನೇ ಘಟ್ಟದ 2ನೇ ಫೇಸ್‌ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.

ಯಾವೆಲ್ಲ ಪ್ರದೇಶಗಳಿಗೆ ನೀರು ಪೂರೈಕೆ ಸ್ಥಗಿತ?

ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪ್ರಕಾಶನಗರ, ನಂದಿನಿ ಲೇಔಟ್, ಗೊರಗುಂಟೆಗುಂಟೆ ಪಾಳ್ಯ, ಕೃಷ್ಣಾನಂದನಗರ, ಶಂಕರ ನಗರ, ಕಂಠೀರವನಗರ, ಮಹಾಲಕ್ಷ್ಮಿ ಲೇಔಟ್, ಸರಸ್ವತಿನಗರ, ಗಣೇಶ ಬ್ಲಾಕ್, ರಾಜಾಜಿನಗರದ ಎಲ್ಲಾ ಪ್ರದೇಶಗಳು, ರಾಜಗೋಪಾಲನಗರ, ಜಿಕೆಡಬ್ಲ್ಯೂ ಲೇಔಟ್, ಲಕ್ಷ್ಮಿ ದೇವಿನಗರ, ಚಾಮುಂಡಿ ಪುರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್ ಎಂಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್, ಲೇಔಟ್, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತನಗರ, ಕಮ್ಮಗೊಂಡನ ಹಳ್ಳಿ ಭುವನೇಶ್ವರಿನಗರ, ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಪೈನ್ ರಸ್ತೆ, ಶ್ರೀನಿವಾಸನಗರ, ಹೋಯಳನಗರ, ಸಂಜೀವಿನಿನಗರ, ಲಕ್ಷ್ಮಣನಗರ, ಶ್ರೀ ಗಂಧನಗರ, ಮಯೂರನಗರ, ಶಿವಾನಂದ ನಗರ, ಫ್ರೆಂಡ್ಸ್ ಸರ್ಕಲ್, ಎಜಿಪಿ ಲೇಔಟ್, ಚಿಕ್ಕಸಂದ್ರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಕೆ.ಪಿ.ಅಗ್ರಹಾರ. ಚೆನ್ನಪ್ಪ ಗಾರ್ಡನ್, ಗಾಣಪ್ಪ ಲೇಔಟ್, ಮಂಜುನಾಥನಗರ, ಚೌಡರಪಾಳ, ವಿದ್ಯಾರಣ್ಯನಗರ ಮಾರೇನಹಳ್ಳಿ 20ನೇ ಮೇನ್, ಕೆಎಚ್‌ಬಿ ಕ್ವಾರ್ಟರ್ಸ್, ಹೌಸಿಂಗ್ ಬೋರ್ಡ್ ಕಾರ್ಪೋರೇಷನ್ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ.ಲೇಔಟ್, ಮೂಡಲಪಾಳ್ಯ, ನಾಗಾಪುರ, ಅಗ್ರಹಾರ ದಾಸರಹಳ್ಳಿ ರಾಜಾಜಿನಗರ 6ನೇ ಬ್ಲಾಕ್, ವೆಸ್ಟ್ ಆಫ್ ಕಾರ್ಡ್ ರೋಡ್, ಇಂದಿರ ನಗರ ಕೊಳಗೇರಿ, ಕೆಎಚ್‌ ಬಿ ಕಾಲೋನಿ, ಮಹಾಗಣಪತಿನಗರ, ಶಿವನಹಳ್ಳಿ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ಬೆಂಗಳೂರು: ಸಾಂಕ್ರಾಮಿಕ ರೋಗಗಳ ಜತೆಗೆ ಹೆಚ್ಚಿದ ಚರ್ಮ ಸಮಸ್ಯೆಗಳು, ತಜ್ಞ ವೈದ್ಯರು ನೀಡಿದ ಸಲಹೆ ಇಲ್ಲಿದೆ

ಶಿವಪುರ, ನೆಲಗದರನಹಳ್ಳಿ ಐಪಿನಗರ, ದೊಡ್ಡಣ್ಣ ಕೈಗಾರಿಕಾ ಪ್ರದೇಶ, ರಾಮಯ್ಯ ಲೇಔಟ್, ಜೈಭುವನೇಶ್ವರಿನಗರ, ಸಂಜಯ ಗಾಂಧಿ ನಗರ, ಮಲ್ಲಸಂದ್ರ, ರವೀಂದ್ರ ನಗರ, ಸಂತೋಷ್‌ ನಗರ, ಬಿಎಚ್​​​ಇಎಲ್ ಕಾಲೋನಿ, ಬಾಬಣ್ಣ ಲೇಔಟ್, ಕಲ್ಯಾಣ ನಗರ, ಶನಿಮಹಾತ್ಮ ದೇವಸ್ಥಾನ, ಹಾವ ನೂರು ಲೇಔಟ್, ಡಿಫೆನ್ ಕಾಲೋನಿ, ಶಂಕ್ರಪ್ಪ ಗಾರ್ಡನ್, ಗೋಪಾಲಪುರ, ಕಾವೇರಿಪುರ, ರಂಗನಾಥಪುರ, ಬಿಡಿಎ ಲೇಔಟ್, ರಾಜೀವ್ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರನಗರ, ಮೂಡಲ ಪಾಳ್ಯ, ಎಂಟಿ ಲೇಔಟ್, ಮಾರೇನಹಳ್ಳಿ, ಜಿಕೆಡಬ್ಲ್ಯೂ ಲೇಔಟ್, ವಿನಾಯಕ. ಲೇಔಟ್, ಮಾರುತಿ ಮಂದಿರ, ಶಿವಾನಂದ ನಗರ, ಕೋಮಲನಗರ, ವಿಶ್ವಭಾರತಿ ನಗರ, ಸಣ್ಣಕ್ಕೆ ಬಯಲು, ಕಾಮಾಕ್ಷಿಪಾಳ್ಯ, ರಾಗಿನಗರ, ಶಕ್ತಿಗಣಪತಿ ನಗರ, ಬಿಎಚ್ ಇಎಲ್ ಲೇಔಟ್, ಕನ್ನಹಳ್ಳಿ, ಐಡಿಎಲ್ ಹೋಮ್ ಟೌನ್‌ಶಿಪ್, ಮೈಲಾಸಂದ್ರ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಟೌನ್, ಬಂಡೇ ಮಠ, ಕೆಂಗೇರಿ ಪೋರ್ಟ್, ಸ್ವಾತಿ ಲೇಔಟ್, ಕೋಡಿವಾಳ, ವಿಜಯ ಲೇಔಟ್, ಭುವನೇಶ್ವರನಗರ, ಜ್ಞಾನ ಭಾರತಿ, ದುಬಾಸಿಪಾಳ್ಯ, ನಾಗದೇವನ ಹಹ್ ಅನ್ನಪೂರ್ಣೇಶ್ವರಿನಗರ, ಜ್ಞಾನ ಗಂಗಿನಗರ, ರೈಲ್ವೆ ಲೇಔಟ್, ಎಂಪಿಎಂ ಲೇಔಟ್, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್, ನಾಗರಬಾವಿ, ಎನ್ ಜಿಇಎಫ್ ಲೇಔಟ್, ಟೆಲಿಕಾಂ ಲೇಔಟ್ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:50 am, Fri, 20 September 24

Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ