AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: 3 ತಿಂಗಳಲ್ಲಿ ಶೇ 8ರಷ್ಟು ಹೆಚ್ಚಳ

Bengaluru House Rent: ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಮನೆ ಬಾಡಿಗೆ ದರ ಮತ್ತೆ ಹೆಚ್ಚಾಗಿದೆ. ಪ್ರಮುಖ ಏರಿಯಾಗಳಲ್ಲಿ ಬಾಡಿಗೆ ದರ ಕಳೆದ ಮೂರು ತಿಂಗಳಲ್ಲಿ ಶೇ 8ರಷ್ಟು ಜಾಸ್ತಿಯಾಗಿದೆ. ಮನೆ ಬಾಡಿಗೆ ದರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಸದ್ಯ ಯಾವ ಏರಿಯಾದಲ್ಲಿ ಎಷ್ಟು ಬಾಡಿಗೆ ಇದೆ ಎಂಬ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: 3 ತಿಂಗಳಲ್ಲಿ ಶೇ 8ರಷ್ಟು ಹೆಚ್ಚಳ
ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: ದರ ಶೇ 8ರಷ್ಟು ಹೆಚ್ಚಳ
Poornima Agali Nagaraj
| Edited By: |

Updated on:May 09, 2024 | 1:06 PM

Share

ಬೆಂಗಳೂರು, ಮೇ 6: ರಾಜ್ಯ ರಾಜಾಧಾನಿ ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ನಗರ.‌ ಇಲ್ಲಿ ಒಂದು ಸೈಟ್ ತೆಗದುಕೊಳ್ಳಬೇಕು ಅಂದರೆ ಮಧ್ಯಮ ವರ್ಗದ ಜನರಿಗೆ ಕನಸಿನ ಮಾತೇ ಎನ್ನುವಂತಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸೈಟ್​​ಗಳ ಬೆಲೆ ದುಬಾರಿಯಾಗುತ್ತಿದ್ದು, ಎಷ್ಟೋ ಜನರು ಇಷ್ಟು ದಿನ ನೆಮ್ಮದಿಯಾಗಿ ಬಾಡಿಗೆ ಮನೆಗಳಲ್ಲಿಯೇ (rented House) ಜೀವನ ನಡೆಸುತ್ತಿದ್ದಾರೆ.‌ ಇದೀಗ ಬಾಡಿಗೆ ಮನೆಗಳ ಬಾಡಿಗೆಗೂ (House Rent) ಚಿನ್ನದ ದರ ನಿಗದಿಪಡಿಸಲಾಗುತ್ತಿದೆ. ಬಾಡಿಗೆದಾರರಿಗೆ ಇನ್ನು ಮುಂದೆ ಜೀವನ ಮಾಡುವುದು ತುಂಬ ಕಷ್ಟವಾದಂತೆ ಕಾಣುತ್ತಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇಕಡಾ 8ರಷ್ಟು ಹೆಚ್ಚಳ ಮಾಡಲಾಗಿದೆ. ಹೈ ಫೈ ಏರಿಯಾಗಳಲ್ಲಿ ಬಾಡಿಗರ ದರವನ್ನು ಸಾಮಾನ್ಯ ಜನರು ಕೇಳದಂತಾಗಿದೆ. ಕೋವಿಡ್ ಅವಧಿಯಲ್ಲಿ 2022ರ ಅಂತ್ಯದ ವೇಳೆ ವೈಟ್‌ಫೀಲ್ಡ್‌ನಲ್ಲಿ 2 ಬಿಎಚ್‌ಕೆ ಮನೆ ದರ 22,500 ರೂ. ಇತ್ತು. ಇನ್ನು ಸರ್ಜಾಪುರ ರಸ್ತೆಯಲ್ಲಿ 24,000 ರೂ. ಇತ್ತು. 2023ರ ಅಂತ್ಯದ ವೇಳೆಗೆ, ವೈಟ್‌ಫೀಲ್ಡ್‌ನಲ್ಲಿ 30,200 ರೂ. ಮತ್ತು ಸರ್ಜಾಪುರ ರಸ್ತೆಯಲ್ಲಿ 31,600 ರೂ.ಗೆ ಗಮನಾರ್ಹವಾಗಿ ಏರಿಕೆ ಕಂಡಿತು.

ಈಗ ಯಾವ ಏರಿಯಾದಲ್ಲಿ ಎಷ್ಟಿದೆ ಬಾಡಿಗೆ?

2024ರ ಮೊದಲ ತ್ರೈಮಾಸಿಕದಲ್ಲಿ, ಸರಾಸರಿ ಬಾಡಿಗೆಯು ಸರ್ಜಾಪುರದಲ್ಲಿ 34,000 ರೂ., ಮತ್ತು ವೈಟ್‌ಫೀಲ್ಡ್‌ನಲ್ಲಿ 32,500 ರೂ.ಗೆ ಏರಿಕೆಯಾಗಿದೆ.‌ ಇದಲ್ಲದೇ ಬೆಂಗಳೂರಿನ ಹೈ ಫೈ ಏರಿಯಾಗಳಾದ ಮಲ್ಲೇಶ್ವರಂ, ಕೋರಮಂಗಲ, ಡಾಲೋರ್ಸ್ ಕಾಲೋನಿ, ಸದಾಶಿವನಗರ, ಜಯನಗರ, ಜೆಪಿನಗರ, ರಾಜಾಜಿನಗರ, ಆರ್​ಆರ್ ನಗರ, ಇಂದಿರಾನಗರ, ಸೇರಿದಂತೆ ಪ್ರಸಿದ್ಧ ಏರಿಯಾಗಳಲ್ಲೂ ಬಾಡಿಗೆ ದಾಖಾಲೆ ಬರೆಯುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಬೆಂಗಳೂರಿನಲ್ಲಿ ಅತಿಹೆಚ್ಚು ಬೆಲೆ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿ ತುಂಬ ದುಬಾರಿ ಎನ್ನುವಂತಾಗಿದೆ.

ಕೋರೋನಾ ಸಂದರ್ಭದಲ್ಲಿ ಐಟಿಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದವು. ಇದೀಗ ಕೋವಿಡ್ ಸಮಯದಲ್ಲಿ ಮುಚ್ಚಿದ್ದ ಆಫೀಸ್​​ಗಳು ಒಪನ್ ಆಗುತ್ತಿದ್ದು, ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಐಟಿ – ಬಿಟಿ ನೌಕರರಿಂದ ಹೆಚ್ಚಾಗಿ ಮನೆಗಳಿಗೆ ಬೇಡಿಕೆ ಇದೆ. ‌ಅಲ್ಲದೆ, ಈಗ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ.‌ ಈ ಕಾರಣದಿಂದಾಗಿ ಮನೆಯ ಬಾಡಿಗಳು ಜಾಸ್ತಿಯಾಗುತ್ತಿವೆ ಎಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಫೆಡರೇಷನ್ ಹೇಳಿದೆ.

ಇದನ್ನೂ ಓದಿ: ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ

ಇದೇ ರೀತಿಯಾಗಿ ಮನೆಯ ಬಾಡಿಗೆ ಹೆಚ್ಚಳವಾಗುತ್ತಿದ್ದರೆ ಬಡಜನರು ಜೀವನ‌ ಮಾಡುವುದು ಹೇಗೆ? ಚಿಕ್ಕ ಮನೆಗಳಿಗೆ 7 ರಿಂದ 10 ಸಾವಿರ ಕೇಳುತ್ತಾರೆ.‌ ಕೂಲಿ ಕೆಲಸ ಮಾಡಿ ಅಷ್ಟು ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆಯೇ? ಈ ಕುರಿತಾಗಿ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು‌ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Thu, 9 May 24

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್