AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಅಂತ್ಯ: ಸಂಪತ್ತಿನ ಖಜಾನೆ ಕಂಡು ಅಧಿಕಾರಿಗಳಿಗೇ ಶಾಕ್​​!

ರಾಜ್ಯದ 7 ಜಿಲ್ಲೆಗಳ 54 ಕಡೆಗಳಲ್ಲಿ 10 ಅಧಿಕಾರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯಗೊಂಡಿದೆ. ರೇಡ್‌ ವೇಳೆ ಕೋಟಿ ಕೋಟಿ ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದ್ದು, ಸಂಪತ್ತಿನ ಖಜಾನೆ ಕಂಡು ಅಧಿಕಾರಿಗಳೇ ಶಾಕ್​​ ಆಗಿದ್ದಾರೆ. ಈ ಪೈಕಿ ಕೆಲವರ ಸಂಬಳ ಲಕ್ಷದ ಗಡಿ ದಾಟದಿದ್ದರೂ ಅಪಾರ ಆಸ್ತಿ ಪಾಸ್ತಿ ಸಂಪಾದನೆ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ.

10 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಅಂತ್ಯ: ಸಂಪತ್ತಿನ ಖಜಾನೆ ಕಂಡು ಅಧಿಕಾರಿಗಳಿಗೇ ಶಾಕ್​​!
ಲೋಕಾಯುಕ್ತ ದಾಳಿ ವೇಳೆ ಪತ್ತೆಯಾದ ವಸ್ತುಗಳುImage Credit source: Tv9 Kannada
Shivaprasad B
| Edited By: |

Updated on:Jul 08, 2026 | 10:10 PM

Share

ಬೆಂಗಳೂರು, ಜುಲೈ 08: ರಾಜ್ಯದ ವಿವಿಧೆಡೆ 10 ಅಧಿಕಾರಿಗಳ ಮನೆಗಳ ಮೇಲೆ ರೇಡ್​​ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಅಂತ್ಯಗೊಂಡಿದೆ. 7 ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೇರಿದ 54 ಕಡೆ ದಾಳಿ ನಡೆದಿತ್ತು. ರೇಡ್​​ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಏನೇನು ಪತ್ತೆ?

1. ನರೇಂದ್ರ ಕುಮಾರ್ ಎಂ., ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿಭಾಗ-1, ಕೆ.ಆರ್. ಸರ್ಕಲ್, ಬೆಂಗಳೂರು

  • ಒಟ್ಟು ಆಸ್ತಿ: ₹8.51 ಕೋಟಿ (ಸ್ಥಿರ ಆಸ್ತಿ ₹5.95 ಕೋಟಿ + ಚರ ಆಸ್ತಿ ₹2.56 ಕೋಟಿ)
  • ಅಸಮತೋಲನ ಆಸ್ತಿ: ₹5.75 ಕೋಟಿ
  • ಚಿನ್ನ: ₹1.20 ಕೋಟಿ ಮೌಲ್ಯ
  • ನಗದು: ₹3.10 ಲಕ್ಷ
  • ಕೃಷಿ ಜಮೀನು: 4 ಎಕರೆ
  • ವಾಹನಗಳು: ₹16.60 ಲಕ್ಷ ಮೌಲ್ಯ
  • ಮನೆಗಳು: 3
  • ಬ್ಯಾಂಕ್ ಠೇವಣಿ: ₹89.16 ಲಕ್ಷ
  • ಇತರೆ ವಸ್ತುಗಳು: ₹27.46 ಲಕ್ಷ

2. ಪ್ರವೀಣ್ ಶ್ರೀಹರಿ ಬಿ., ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್., ಬೆಂಗಳೂರು

  • ಒಟ್ಟು ಆಸ್ತಿ: ₹5.88 ಕೋಟಿ (ಸ್ಥಿರ ಆಸ್ತಿ ₹4.60 ಕೋಟಿ + ಚರ ಆಸ್ತಿ ₹1.28 ಕೋಟಿ)
  • ಅಸಮತೋಲನ ಆಸ್ತಿ: ₹4.33 ಕೋಟಿ
  • ಚಿನ್ನ: ₹11.08 ಲಕ್ಷ ಮೌಲ್ಯ
  • ನಗದು: ₹2.35 ಲಕ್ಷ
  • ಸೈಟ್: 2 ನಿವೇಶನಗಳು
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 11.7 ಎಕರೆ
  • ವಾಹನಗಳು: ₹1.15 ಕೋಟಿ ಮೌಲ್ಯ
  • ಮನೆಗಳು: 2

ಇದನ್ನೂ ಓದಿ: ಕರ್ನಾಟಕದ 7 ಜಿಲ್ಲೆಯ 10 ಅಧಿಕಾರಿಗಳ ಮನೆ-ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಕೋಟಿ ಕೋಟಿ ಆಸ್ತಿ, ಚಿನ್ನಾಭರಣ ಪತ್ತೆ

3. ಪುಷ್ಪಾ ಡಿ.ಆರ್., ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಮಾರಾಟ ಮಹಾಮಂಡಳಿ, ಕೇಂದ್ರ ಕಚೇರಿ, ಬೆಂಗಳೂರು.

  • ಒಟ್ಟು ಆಸ್ತಿ: ₹8.16 ಕೋಟಿ (ಸ್ಥಿರ ಆಸ್ತಿ ₹7.38 ಕೋಟಿ + ಚರ ಆಸ್ತಿ ₹78.22 ಲಕ್ಷ)
  • ಅಸಮತೋಲನ ಆಸ್ತಿ: ₹5.93 ಕೋಟಿ
  • ಚಿನ್ನ: ₹35 ಲಕ್ಷ ಮೌಲ್ಯ
  • ನಗದು: ₹72,000
  • ಸೈಟ್: 1 ನಿವೇಶನ
  • ವಾಣಿಜ್ಯ ಕಟ್ಟಡ: 1 ವಾಣಿಜ್ಯ ಸಂಕೀರ್ಣ
  • ಕೃಷಿ ಜಮೀನು: 20 ಗುಂಟೆ
  • ವಾಹನಗಳು: ₹42.50 ಲಕ್ಷ ಮೌಲ್ಯ
  • ಮನೆಗಳು: 3

4. ದುಗ್ಗಪ್ಪ ಬಿ.ಎಚ್., ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ

  • ಒಟ್ಟು ಆಸ್ತಿ: ₹1.95 ಕೋಟಿ (ಸ್ಥಿರ ಆಸ್ತಿ ₹1.52 ಕೋಟಿ + ಚರ ಆಸ್ತಿ ₹43.51 ಲಕ್ಷ)
  • ಅಸಮತೋಲನ ಆಸ್ತಿ: ₹1.95 ಕೋಟಿ
  • ಚಿನ್ನ: ₹18.92 ಲಕ್ಷ ಮೌಲ್ಯ
  • ನಗದು: ₹1.84 ಲಕ್ಷ
  • ಸೈಟ್: 3 ನಿವೇಶನಗಳು
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 3 ಎಕರೆ 30 ಗುಂಟೆ
  • ವಾಹನಗಳು: ₹22 ಲಕ್ಷ ಮೌಲ್ಯ
  • ಮನೆ: 1

5. ಶಂಕರ ಎಂ., ಸಹ ಪ್ರಾಧ್ಯಾಪಕರು ತೋಟಗಾರಿಕೆ ಇಲಾಖೆ, ಚಿತ್ರದುರ್ಗ

  • ಒಟ್ಟು ಆಸ್ತಿ: ₹3.28 ಕೋಟಿ (ಸ್ಥಿರ ಆಸ್ತಿ ₹1.71 ಕೋಟಿ + ಚರ ಆಸ್ತಿ ₹1.56 ಕೋಟಿ)
  • ಅಸಮತೋಲನ ಆಸ್ತಿ: ₹1.88 ಕೋಟಿ
  • ಚಿನ್ನ: ₹1.26 ಕೋಟಿ ಮೌಲ್ಯ
  • ನಗದು: ₹9,000
  • ಸೈಟ್: 1 ನಿವೇಶನ
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 8 ಎಕರೆ 26 ಗುಂಟೆ
  • ವಾಹನಗಳು: ₹27.80 ಲಕ್ಷ ಮೌಲ್ಯ
  • ಮನೆಗಳು: 2

6. ಅಮೃತರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿ), ಜೆಎಸ್‌ಎಲ್‌ಎಂ, ಕಲಬುರಗಿ

  • ಒಟ್ಟು ಆಸ್ತಿ: ₹3.98 ಕೋಟಿ (ಸ್ಥಿರ ಆಸ್ತಿ ₹2.84 ಕೋಟಿ + ಚರ ಆಸ್ತಿ ₹1.15 ಕೋಟಿ)
  • ಅಸಮತೋಲನ ಆಸ್ತಿ: ₹2.65 ಕೋಟಿ
  • ಚಿನ್ನ: ₹38.53 ಲಕ್ಷ ಮೌಲ್ಯ
  • ನಗದು: ₹68,027
  • ಸೈಟ್: 3 ನಿವೇಶನಗಳು
  • ವಾಣಿಜ್ಯ ಕಟ್ಟಡ: 12 ವಾಣಿಜ್ಯ ಮಳಿಗೆ
  • ಕೃಷಿ ಜಮೀನು: ₹35.80 ಲಕ್ಷ ಮೌಲ್ಯದ ಕೃಷಿ ಜಮೀನು
  • ವಾಹನಗಳು: ₹10.52 ಲಕ್ಷ ಮೌಲ್ಯ
  • ಮನೆಗಳು: 2
  • ಫ್ಲ್ಯಾಟ್: 1

7. ತಿಮ್ಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಂಬಳಗೂಡು ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ

  • ಒಟ್ಟು ಆಸ್ತಿ: ₹3.72 ಕೋಟಿ (ಸ್ಥಿರ ಆಸ್ತಿ ₹2.53 ಕೋಟಿ + ಚರ ಆಸ್ತಿ ₹1.19 ಕೋಟಿ)
  • ಅಸಮತೋಲನ ಆಸ್ತಿ: ₹3.51 ಕೋಟಿ
  • ಚಿನ್ನ: ₹84 ಲಕ್ಷ ಮೌಲ್ಯ
  • ಸೈಟ್: 2 ನಿವೇಶನಗಳು
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 2 ಎಕರೆ 15 ಗುಂಟೆ
  • ವಾಹನಗಳು: ₹35.70 ಲಕ್ಷ ಮೌಲ್ಯ
  • ಮನೆಗಳು: 4

8. ಕಿರಣ್ ಅಂಗಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನಾ ಕೇಂದ್ರ, ಅರಣ್ಯ ಇಲಾಖೆ, ಶಿವಮೊಗ್ಗ

  • ಒಟ್ಟು ಆಸ್ತಿ: ₹1.95 ಕೋಟಿ (ಸ್ಥಿರ ಆಸ್ತಿ ₹1.53 ಕೋಟಿ + ಚರ ಆಸ್ತಿ ₹42.36 ಲಕ್ಷ)
  • ಅಸಮತೋಲನ ಆಸ್ತಿ: ₹1.95 ಕೋಟಿ
  • ಚಿನ್ನ: ₹15.45 ಲಕ್ಷ ಮೌಲ್ಯ
  • ನಗದು: ₹13,044
  • ಕೃಷಿ ಜಮೀನು: 1 ಎಕರೆ
  • ವಾಹನಗಳು: ₹2.84 ಲಕ್ಷ ಮೌಲ್ಯ
  • ಮನೆ: 1

9. ಬಸನಗೌಡ ಪಾಟೀಲ್, ಕಾರ್ಯಪಾಲಕ ಅಭಿಯಂತರರು, ಕೆ.ಬಿ.ಜೆ.ಎನ್.ಎಲ್., ಎನ್.ಆರ್.ಬಿ.ಸಿ. ಉಪ ವಿಭಾಗ-4, ದೇವದುರ್ಗ, ರಾಯಚೂರು

  • ಒಟ್ಟು ಆಸ್ತಿ: ₹9.44 ಕೋಟಿ (ಸ್ಥಿರ ಆಸ್ತಿ ₹8.28 ಕೋಟಿ + ಚರ ಆಸ್ತಿ ₹1.16 ಕೋಟಿ)
  • ಅಸಮತೋಲನ ಆಸ್ತಿ: ₹6.12 ಕೋಟಿ
  • ಚಿನ್ನ: ₹1.29 ಕೋಟಿ ಮೌಲ್ಯ
  • ನಗದು: ₹1.15 ಲಕ್ಷ
  • ಸೈಟ್: 5 ನಿವೇಶನಗಳು
  • ಕೃಷಿ ಜಮೀನು: 1 ಎಕರೆ
  • ವಾಹನಗಳು: ₹10.50 ಲಕ್ಷ ಮೌಲ್ಯ
  • ಮನೆಗಳು: 4

10. ಮಧುಸೂದನ್ ಎನ್., ಸಹಾಯಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ತಿಪಟೂರು ಉಪ ವಿಭಾಗ, ತುಮಕೂರು

  • ಒಟ್ಟು ಆಸ್ತಿ: ₹2.95 ಕೋಟಿ (ಸ್ಥಿರ ಆಸ್ತಿ ₹1.63 ಕೋಟಿ + ಚರ ಆಸ್ತಿ ₹1.33 ಕೋಟಿ)
  • ಅಸಮತೋಲನ ಆಸ್ತಿ: ₹2.10 ಕೋಟಿ
  • ಚಿನ್ನ: ₹1.94 ಕೋಟಿ ಮೌಲ್ಯ
  • ನಗದು: ₹11.94 ಲಕ್ಷ
  • ಸೈಟ್: 3 ನಿವೇಶನಗಳು
  • ವಾಹನಗಳು: ₹27 ಲಕ್ಷ ಮೌಲ್ಯ
  • ಮನೆ: 1

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಈ ಅಧಿಕಾರಿಗಳಿಗೆ ಸಂಬಂಧಿಸಿದ ಜಾಗಗಳ ಮೇಲೆ ದಾಳಿ ಮಾಡಿ ಜಾಲಾಡಿದ್ದರು. ದಾಳಿ ವೇಳೆ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ, ಚಿನ್ನಾಭರಣ, ನಗದು ಪತ್ತೆಯಾಗಿದ್ದು, ಕೆಲವರ ಸಂಬಳ ತಿಂಗಳಿಗೆ ಲಕ್ಷದ ಗಡಿ ದಾಟದಿದ್ದರೂ ಅಪಾರ ಮೌಲ್ಯದ ಆಸ್ತಿ ಗಳಿಸಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:09 pm, Wed, 8 July 26

Follow Us
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!