ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ ಹೆಸರಿಡಲು ಸಿಎಂಗೆ ಮನವಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 224ನೇ ಜಯಂತಿ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಇರುವ ರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ ಬೊಮ್ಮಾಯಿ, ಪುಪ್ಪಾರ್ಚನೆ ಮಾಡಿದರು. ರಾಯಣ್ಣ ಅಂದ್ರೆ ಕೂದಲು ನೆಟ್ಟಗಾಗುತ್ತವೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ ಹೆಸರಿಡಲು ಸಿಎಂಗೆ ಮನವಿ
ರಾಯಣ್ಣ ಪ್ರತಿಮೆಗೆ ಪುಪ್ಪಾರ್ಚನೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
Follow us
| Updated By: sandhya thejappa

Updated on: Aug 15, 2021 | 11:59 AM

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 224ನೇ ಜಯಂತಿ ಹಿನ್ನೆಲೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನಿರಂಜನಾನಂದಪುರಿಶ್ರೀ ಮನವಿ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ ಹೆಸರಿಡಲು ನಿರಂಜನಾನಂದಪುರಿ ಸ್ವಾಮೀಜಿಗಳು ಸಿಎಂಗೆ ಮನವಿ ಮಾಡಿದ್ದಾರೆ. ಅಲ್ಲದೇ ಸಂಸತ್ ಭವನದ ಮುಂದೆ ರಾಯಣ್ಣ ಪ್ರತಿಮೆ ಮಾಡುವಂತೆ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 224ನೇ ಜಯಂತಿ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಇರುವ ರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ ಬೊಮ್ಮಾಯಿ, ಪುಪ್ಪಾರ್ಚನೆ ಮಾಡಿದರು. ರಾಯಣ್ಣ ಅಂದ್ರೆ ಕೂದಲು ನೆಟ್ಟಗಾಗುತ್ತವೆ. ರೋಮಾಂಚನ ಆಗುತ್ತೆ. ವೀರ, ಧೀರ, ಶೂರ, ಶತಮಾನದ ಯುಗ ಪುರುಷ ರಾಯಣ್ಣ. ಸಿಪಾಯಿ ದಂಗೆಗೂ 40 ವರ್ಷ ಮುಂಚೆ ರಾಯಣ್ಣ, ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ರು. ಬ್ರಿಟಿಷ್ ಕಮೀಷನರ್ ಠಾಕ್ರೆ ಬಂಧನ ಮಾಡಿ ಬ್ರಿಟಿಷರಿಗೆ ಭಯ ಹುಟ್ಟಿಸಿದ ವೀರ ಮಹಿಳೆ ಕಿತ್ತೂರು ಚೆನ್ನಮ್ಮ. ಆತನ ಬಂಟ ರಾಯಣ್ಣ ಅಂತ ಸಿಎಂ ಬೊಮ್ಮಾಯಿ ಹೇಳಿದರು.

ರಾಯಣ್ಣ ಮಾತು ಚೆನ್ನಮ್ಮ ತಾಯಿ ಮಗನ ಸಂಬಂಧ ಇತ್ತು. ಚೆನ್ನಮ್ಮ ಏನೇ ಮಾಡಬೇಕಾದ್ರು ರಾಯಣ್ಣ ಜೊತೆಗೆ ಇರುತ್ತಿದ್ದ. ಮೋಸ ಮಾಡಿ ರಾಯಣ್ಣನನ್ನ ಸೆರೆ ಹಿಡಿದ್ರು. ರಾಯಣ್ಣ ಹಿಡಿದುಕೊಟ್ಟವರ ಮನೆಯವರ ಅನ್ನ ಈಗಲೂ ಸಂಜೆ ವೇಳೆಗೆ ಹುಳ ಬೀಳುತ್ತೆ. ಇದು ರಾಯಣ್ಣ ಸಾತ್ವಿಕ ಶಕ್ತಿ ಅಂತ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಚಿವ ಅಶೋಕ್, ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ ಸೇರಿ ಹಲವರು ಭಾಗಿಯಾಗಿದ್ದರು.

ಇನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಶಾಲುಗೆ ಅವಕಾಶ ಇಲ್ಲದ ಕಾರಣ ಆಯೋಜಕರು ಮುಖ್ಯಮಂತ್ರಿಗೆ ಪುಸ್ತಕ ನೀಡಿ ಸ್ವಾಗತ ಕೋರಿದರು.

ಇದನ್ನೂ ಓದಿ

ನಾನು ಕೂಡ ಮುಖ್ಯಮಂತ್ರಿ ಆಗಬಹುದು, ಇದೇ ಅವಧಿಯಲ್ಲೇ ಸಿಎಂ ಆಗ್ತೀನಿ: ಸಚಿವ ಉಮೇಶ್ ಕತ್ತಿ

Martin: ಸ್ವಾತಂತ್ರ್ಯ ದಿನಾಚರಣೆಗೆ ಧ್ರುವ ಸರ್ಜಾ ಕೊಟ್ರು ಭರ್ಜರಿ ಗಿಫ್ಟ್; ಹೊಸ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್

(Niranjanananda Puri Swamiji requested CM to name the Belgaum and hubli airport)