ಹೆಣ್ಣೂರಿನಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ; ಅಪಹರಣಕ್ಕೆ ಸಹಾಯ ಮಾಡಿದ್ದ ಮಹಿಳೆ ಅರೆಸ್ಟ್

ಮಂಗೀತಾ ಆರೋಪಿ ದುರ್ಗಾದೇವಿಗೆ 10 ಲಕ್ಷ ರೂ. ಕೊಡುತ್ತೇನೆ ಬಾಲಕನನ್ನ ಸುರಕ್ಷಿತವಾಗಿ ಇರಿಸುವಂತೆ ಹೇಳಿದ್ದಳು. ಅದರಂತೆ ದುರ್ಗಾದೇವಿ ಜಿಗಣಿಯಲ್ಲಿದ್ದ ಸಂಬಂಧಿ ಗೌರವ್ ಸಿಂಗ್ ಬಳಿ ಬಾಲಕನನ್ನ ಬಿಟ್ಟಿದ್ದಳು.

ಹೆಣ್ಣೂರಿನಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ; ಅಪಹರಣಕ್ಕೆ ಸಹಾಯ ಮಾಡಿದ್ದ ಮಹಿಳೆ ಅರೆಸ್ಟ್
ದುರ್ಗಾದೇವಿ, ಗೌರವ್ ಸಿಂಗ್, ಮಂಗೀತಾ
Updated By: sandhya thejappa

Updated on: Jun 10, 2022 | 2:37 PM

ಬೆಂಗಳೂರು: ಹೆಣ್ಣೂರಿನಲ್ಲಿ ನಡೆದ ಬಾಲಕನ ಕಿಡ್ನಾಪ್ (Kidnap) ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಅಪಹರಣಕ್ಕೆ ಸಹಾಯ ಮಾಡಿದ್ದ ಮಹಿಳೆ ದುರ್ಗಾದೇವಿಯನ್ನು ಅರೆಸ್ಟ್ ಮಾಡಲಾಗಿದೆ. ಬಿಹಾರ (Bihar) ಮೂಲದ ಮಂಗೀತಾ, ದುರ್ಗಾ ಇಬ್ಬರು ಸೇರಿ ಹೊರಮಾವಿನ ಬಳಿ ಧಮ್ಮದೀಪ್ ಎಂಬ ಬಾಲಕನನ್ನು ಕಿಡ್ನಾಪ್ ಮಾಡಿದ್ದರು. ಮಂಗೀತಾ ಆರೋಪಿ ದುರ್ಗಾದೇವಿಗೆ 10 ಲಕ್ಷ ರೂ. ಕೊಡುತ್ತೇನೆ ಬಾಲಕನನ್ನ ಸುರಕ್ಷಿತವಾಗಿ ಇರಿಸುವಂತೆ ಹೇಳಿದ್ದಳು. ಅದರಂತೆ ದುರ್ಗಾದೇವಿ ಜಿಗಣಿಯಲ್ಲಿದ್ದ ಸಂಬಂಧಿ ಗೌರವ್ ಸಿಂಗ್ ಬಳಿ ಬಾಲಕನನ್ನ ಬಿಟ್ಟಿದ್ದಳು.

ದುರ್ಗಾದೇವಿ ಗೌರವ್ ಸಿಂಗ್​ಗೂ ಹಣ ನೀಡೋದಾಗಿ ದುರ್ಗಾದೇವಿ ಹೇಳಿದ್ದಳು. ಇದೀಗ ಪ್ರಕರಣ ಸಂಬಂಧ ಮಂಗಿತಾ, ಗೌರವ್ ಸಿಂಗ್ ಹಾಗೂ ದುರ್ಗಾದೇವಿಯನ್ನ ಬಂಧಿಸಲಾಗಿದೆ.

ಕೆಲವೇ ಗಂಟೆಗಳಲ್ಲಿ ಮಗು ರಕ್ಷಣೆ:
ಜೂನ್ 8ರ ಸಂಜೆ 11 ವರ್ಷದ ಮಗು ಹೆಣ್ಣೂರಿನಿಂದ ಕಿಡ್ನ್ಯಾಪ್ ಆಗಿತ್ತು. ಕಿಡ್ನಾಪ್ ಆಗಿದ್ದ ಮಗು ಹೊರಮಾವು ನಿವಾಸಿಯಾಗಿರುವ ಬಿಎಂಟಿಸಿ ಚಾಲಕ ಸುಭಾಷ್ ಎಂಬುವವರ ಪುತ್ರ. ಕಿಡ್ನಾಪ್ ಮಾಡಿದ್ದ ಆರೋಪಿಗಳು ಪೋಷಕರಿಗೆ ಕರೆ ಮಾಡಿ ಸುಮಾರು 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಪೋಷಕರು ಅದೇ ದಿನ ರಾತ್ರಿ 9 ಗಂಟೆ ಹೊತ್ತಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಮಗುವನ್ನು ರಕ್ಷಿಸಿದ್ದರು.

ಇದನ್ನೂ ಓದಿ
Viral Video: ಚಲಿಸುತ್ತಿರುವ ರೈಲಿನಿಂದ ಸ್ಪೈಡರ್​ಮ್ಯಾನ್ ಶೈಲಿಯಲ್ಲಿ ಮೊಬೈಲ್ ಕದ್ದ ಖದೀಮ
Shamita Shetty: ಲವ್​ ಮಾಡಿದ್ದು ಸಾಕಾಯ್ತು, ಇನ್ಮುಂದೆ ಜಸ್ಟ್​ ಫ್ರೆಂಡ್ಸ್​; ರಾಕೇಶ್​ ಬಾಪಟ್​ ಜತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್​
ಆಯುಷ್ಮಾನ್ ಭಾರತ ಯೋಜನೆ ಹಣ ದುರುಪಯೋಗ; ಸಾಕ್ಷಿ ಸಮೇತ ಅಕ್ರಮ ಬಯಲಾದ್ರು ಪರಿಶೀಲನೆ ಅರ್ಧಕ್ಕೆ ಕೈಬಿಟ್ಟ ಅಧಿಕಾರಿಗಳು, ಈ ನಡೆಗೆ ಕಾರಣವೇನು?
ನಿಮಗಿದು ಗೊತ್ತೇ?: ಮೊದಲ ಸೂರ್ಯ ಮುಳುಗದ ಸಾಮ್ರಾಜ್ಯ: ವಸಾಹತುಶಾಹಿ ಆಡಳಿತ ಆರಂಭಿಸಿದ್ದು, ಕೊನೆಗೊಳಿಸಿದ್ದು ಯಾವ ದೇಶ?

ಇದನ್ನೂ ಓದಿ: Shamita Shetty: ಲವ್​ ಮಾಡಿದ್ದು ಸಾಕಾಯ್ತು, ಇನ್ಮುಂದೆ ಜಸ್ಟ್​ ಫ್ರೆಂಡ್ಸ್​; ರಾಕೇಶ್​ ಬಾಪಟ್​ ಜತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್​

ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಫೋನ್ ನಂಬರ್​ನ ಹೆಣ್ಣೂರು ಠಾಣೆ ಪೊಲೀಸರು ತಕ್ಷಣ ಟ್ರೇಸ್ ಮಾಡಿದ್ದರು. ಈ ವೇಳೆ ಜಿಗಣಿ ಬಳಿ ಫಾರ್ಮ್​ಹೌಸ್​ನಲ್ಲಿ ಮಗು ಜತೆ ಆರೋಪಿಗಳು ಇದ್ದರು. ಸಿನಿಮೀಯ ರೀತಿ ಕಾಂಪೌಂಡ್ ಹಾರಿ ಒಳ ನುಗ್ಗಿ ಮಗುವನ್ನು ರಕ್ಷಣೆ ಮಾಡಿದ್ದು, ನೇಪಾಳ ಮೂಲದ ಆರೋಪಿಯನ್ನ ಬಂಧಿಸಲಾಗಿದೆ.

ಸಾಲ ತೀರಿಸಲು ಕಿಡ್ನಾಪ್​​ಗೆ ಇಳಿದಿದ್ದ ಮಹಿಳೆಯರು:
ಮಾಡಿದ್ದ ಸಾಲ ತೀರಿಸಲು ಮಹಿಳೆಯರು ಕಿಡ್ನಾಪ್​ಗೆ ಇಳಿದಿದ್ದರು. ಈ ಹಿಂದೆ ಮಂಗೀತಾ ಬಾಲಕ ತಾಯಿ ಅಶ್ವಿನಿ ಫೋನ್ ಪಡೆದಿದ್ದಳು. ಮಂಗೀತಾ ಸುಭಾಷ್ ಮತ್ತು ಅಶ್ವಿನಿ ಮನೆ ಪಕ್ಕದಲ್ಲೇ ಇದ್ದಾರೆ. ಕರೆ ಮಾಡಬೇಕೆಂದು ಫೋನ್ ಪಡೆದಿದ್ದಳು. ಆಗ ತನ್ನ ನಂಬರ್​​ಗೆ ಡಯಲ್ ಮಾಡಿಕೊಂಡು ನಂಬರ್ ಪಡೆದಿದ್ದಾಳೆ. ನಂತರ ದುರ್ಗಾ ಹಾಗೂ ಪ್ರಿಯಕರ ಗೌರವ್ ಎಂಬಾತನ ಜೊತೆ ಸೇರಿ ಕಿಡ್ನಾಪ್ ಪ್ಲಾನ್ ಮಾಡಿದ್ದಳು. ವಜೂನ್ 7 ರಂದು ಮುಖ್ಯ ರಸ್ತೆವರೆಗೂ ಬಾಲಕನ ಕಳಿಸಿದ್ದಳು. ಅಲ್ಲಿಂದ ಸ್ವಿಮ್ಮಿಂಗ್ ಪೂಲ್​ಗೆ ಅಂತಾ ದುರ್ಗಾ ಕರೆದೊಯ್ದಿದ್ದಳು. ಬಾಲಕನನ್ನು  ಕಿಡ್ನಾಪ್ ಮಾಡಿ ಜಿಗಣಿ ಬಳಿಯ ಜೆ.ಆರ್‌ ಫಾರ್ಮ್ ಬಳಿ ಬಿಟ್ಟು ಬಂದಿದ್ದಳು.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:33 am, Fri, 10 June 22