AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆ, ರಾಜ್ಯದ ಉದ್ದಗಲಕ್ಕೂ ಮುಂದುವರೆದ ವರ್ಷಧಾರೆ

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತ, ಉಂಟಾಗಿರುವ ಹಿನ್ನಲೆ ಮೂರು ದಿನದಿಂದಲೂ ಬೆಂಗಳೂರು ನಗರದಲ್ಲಿ ಮಳೆಯಾಗುತ್ತಿದ್ದು ಇನ್ನೂ 2 ದಿನ ಮಳೆ ಮುಂದುವರೆಯಲಿದೆ.

Karnataka Rains: ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆ, ರಾಜ್ಯದ ಉದ್ದಗಲಕ್ಕೂ ಮುಂದುವರೆದ ವರ್ಷಧಾರೆ
ಮಳೆ
TV9 Web
| Edited By: |

Updated on:Oct 17, 2022 | 8:06 AM

Share

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯಾದ್ಯಂತ 2 ದಿನ ಭಾರೀ ಮಳೆ ಸುರಿಯಲಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ ಅ. 19ರ ವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಮೈಸೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ವರುಣನ ಆರ್ಭಟ ಮುಂದುವರೆದಿದೆ. ಮುಂಜಾನೆ ಕೆಲಸಕ್ಕೆ ಹೋಗುವವರಿಗೆ ಮಳೆ ಸಮಸ್ಯೆ ತಂದೊಡ್ಡಿದೆ. ಕೆ.ಆರ್.ಪುರಂ, ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ಬೆಂಗಳೂರು ‌ಸುತ್ತಮುತ್ತ ಮಳೆಯಾಗುತ್ತಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ಗದಗ ರಾಯಚೂರು, ಬೀದರ್, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಬ್ಬರದ ಮಳೆ: ಸಿಡಿಲು-ಗುಡುಗಿನ ಶಬ್ದಕ್ಕೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತ, ಉಂಟಾಗಿರುವ ಹಿನ್ನಲೆ ಎರಡು ದಿನದಿಂದಲೂ ಬೆಂಗಳೂರು ನಗರದಲ್ಲಿ ಮಳೆಯಾಗುತ್ತಿದೆ. ಕಾರ್ಪೋರೇಷನ್, ಮೆಜೆಸ್ಟಿಕ್, ಮೈಸೂರ್‌ಬ್ಯಾಂಕ್ ಸರ್ಕಲ್, ಟೌನ್‌ಹಾಲ್, ಡಬಲ್‌ರೋಡ್, ರಿಚ್ಮಂಡ್‌ಸರ್ಕಲ್, ಶಾಂತಿನಗರ, ವಿಲ್ಸನ್‌ಗಾರ್ಡಾನ್ ಸೇರಿದಂತೆ ಹಲವೆಡೆ ನಿನ್ನೆ ವರುಣನ ಆರ್ಭಟ ಜೋರಾಗಿಯೇ ಇತ್ತು. ಅದ್ರಲ್ಲೂ ರಿಚ್‌ಮಂಡ್‌ ಸರ್ಕಲ್‌ ಸಂಪರ್ಕಿಸೋ ರಸ್ತೆಗಳೋ ಕಾಲುವೆಗಳಂತಾಗಿದ್ವು. ಒಂದು ಅಡಿಯಷ್ಟು ನೀರು ನಿಂತಿದ್ರೆ, ಅದೇ ನೀರಲ್ಲಿ ಸರ್ಕಸ್‌ ಮಾಡ್ದಾ ಸವಾರರು ಸಾಗುವಂತಾಗಿತ್ತು. ಇದನ್ನೂ ಓದಿ: Head Bush: ಡಾಲಿ ಧನಂಜಯ್​ ಮೇಲೆ ಹೂಮಳೆ ಸುರಿಸಿದ ಫ್ಯಾನ್ಸ್​; ಚಿತ್ರದುರ್ಗದಲ್ಲಿ ‘ಹೆಡ್​ ಬುಷ್​’ ತಂಡಕ್ಕೆ ಭರ್ಜರಿ ಸ್ವಾಗತ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:06 am, Mon, 17 October 22