AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಞಾನಸಾಗರದಲ್ಲಿ ಈಜಾಡಿ, ಕರ್ಮ ಯೋಗದ ಆಕಾಶದಲ್ಲಿ ಹಾರಾಡಿ: ಬನ್ನಿ ಭಾರತ ಗೌರವ ಶಿಬಿರದಲ್ಲಿ ಭಾಗವಹಿಸಿ

ಭಾರತ ಪುಣ್ಯಭೂಮಿ. ಇದು ದೇವಸಾನಿಧ್ಯ ದಟ್ಟೈಸಿದ ದೇಶವೂ ಅಹುದು. ಇದು ತ್ಯಾಗ ಭೂಮಿ, ಯೋಗ ಭೂಮಿ, ಕರ್ಮ ಭೂಮಿ, ಅಸಂಖ್ಯ ಶೂರರು, ವೀರರು, ಧೀರರು ಆಳಿದ ದೇಶವಿದು. ಅಪಾರ ಯೋಗಿಗಳು, ತ್ಯಾಗಿಗಳು, ಸಂತರು, ಸನ್ಯಾಸಿಗಳು ತಪಸ್ಸುಗೈದ ದೇಶವಿದು. ಇದುವೇ ‘ಭಾರತ ಗೌರವ’. ಇಂತಹ ಭಾರತ ಗೌರವ ಶಿಬಿರವನ್ನು ಸಾಕ್ಷಿ ಟ್ರಸ್ಟ್ ಬೆಂಗಳೂರಿನಲ್ಲಿ ಆಯೋಜಿಸಿದೆ. ಹಾಗಾದ್ರೆ, ಈ ಶಿಬಿರ ಯಾವಗ ಎಲ್ಲಿ ನಡೆಯುತ್ತೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಜ್ಞಾನಸಾಗರದಲ್ಲಿ ಈಜಾಡಿ, ಕರ್ಮ ಯೋಗದ ಆಕಾಶದಲ್ಲಿ ಹಾರಾಡಿ: ಬನ್ನಿ ಭಾರತ ಗೌರವ ಶಿಬಿರದಲ್ಲಿ ಭಾಗವಹಿಸಿ
Sakshi Trust
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: May 06, 2025 | 8:19 PM

ಬೆಂಗಳೂರು, (ಮೇ 06): ಸಾಕ್ಷಿ ಟ್ರಸ್ಟ್ ಭಾರತ ಗೌರವ ಶಿಬಿರ ಆಯೋಜಿಸಿದ್ದು, ಇದು 2025ರ ಜೂನ್ 14 ರಿಂದ 22 ವರೆಗೆ ನಡೆಯಲಿದೆ. ಬೆಂಗಳೂರಿನ ಹೊರ ವಲಯದಲ್ಲಿ, ಪ್ರಶಾಂತ ವಾತಾವರಣ ನೆಲೆಸಿದ ಅರೋವೇದ ತೋಟದಲ್ಲಿ ಆಯೋಜಿಸಲಾಗಿದೆ. 30 ರಿಂದ 35 ಆಸಕ್ತರು ಮಾತ್ರ ಭಾಗವಹಿಸಲು ಅವಕಾಶ ಇದೆ. 20 ರಿಂದ 50 ವರ್ಷದೊಳಗಿನ ಸ್ತ್ರೀ ಪುರುಷರೆಲ್ಲ ಭಾಗವಹಿಸಬಹುದು. ಪ್ರವೇಶ ಉಚಿತವಾಗಿದ್ದು, ಸರಳ ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. ಇನ್ನು ಇದರಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬೇಕು.

ವೇದಗಳು ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಅಂದು ಇಂದು ಮುಂದು ವೇದಗಳೇ ನಮ್ಮ ಬೆಳಕು. ಮನುಷ್ಯನ ಅಂತಃಸ್ಸತ್ವ ಅರಳಿಸುವ ಜ್ಞಾನ ವೇದಗಳಲ್ಲಿ ಇದೆ. ಕತ್ತಲೆ ಕಳೆಯಬೇಕು, ಬೆಳಕು ಪಡೆಯಬೇಕು. ಇದಕ್ಕಾಗಿ ವೇದಗಳು ಬೇಕು. ಇದರ ಮರ್ಮ ಅರಿಯಲು “ಭಾರತ ಗೌರವ ಶಿಬಿರ”. ಭಾರತದ ಪರಂಪರೆ ಪೂರ್ಣವಾಗಿ ಅರಿಯಬೇಕಾಗಿದೆ. ಮಸುಕಾದ ನಮ್ಮ ಸಂಸ್ಕೃತಿ-ಸ್ಮರಣೆಗೆ ಹೊಳಪು ನೀಡಬೇಕಾಗಿದೆ. ಭಾರತದಲ್ಲಿ ಅಗಿಹೋದ ಪ್ರಾತಃಸ್ಮರಣೀಯರನ್ನು ನೆನೆಯಬೇಕು. ವಿಶ್ವಗುರು ಪರಂಪರೆ ಮೆರೆಯಲು ನಾವೆಲ್ಲ ಸಿದ್ಧರಾಗಬೇಕು. ಸಂಸ್ಕೃತಿಯ ತೇರು ಎಳೆಯಲು, ಪರಂಪರೆಯ ಪಲ್ಲಕ್ಕಿ ಹೊರಲು ಮನಸ್ಸು ಮಾಡಬೇಕು. ದೇವರು ದಯಪಾಲಿಸಿದ ಶಕ್ತಿ, ಯುಕ್ತಿ, ಸಾಮರ್ಥ್ಯ ಮತ್ತು ಸದ್ಗುಣಗಳನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಬೇಕು. ಈ ಸಿದ್ಧತೆಗಾಗಿ “ಭಾರತ ಗೌರವ ಶಿಬಿರ”.

ಜೂನ್ 14 ರಿಂದ 22 ವರೆಗೆ ಭಾರತ ಗೌರವ ಶಿಬಿರ

ಭಾರತ ಗೌರವ ಶಿಬಿರ ಜೂನ್ 14 ರಿಂದ 22 ವರೆಗೆ ನಡೆಯಲಿದೆ. ಬೆಂಗಳೂರಿನ ಹೊರ ವಲಯದಲ್ಲಿ, ಪ್ರಶಾಂತ ವಾತಾವರಣ ನೆಲೆಸಿದ ಅರೋವೇದ ತೋಟದಲ್ಲಿ ಆಯೋಜಿಸಲಾಗಿದೆ. 30 ರಿಂದ 35 ಆಸಕ್ತರು ಮಾತ್ರ ಭಾಗವಹಿಸಲು ಅವಕಾಶ ಇದೆ. 20 ರಿಂದ 50 ವರ್ಷದೊಳಗಿನ ಸ್ತ್ರೀ ಪುರುಷರೆಲ್ಲ ಭಾಗವಹಿಸಬಹುದು. ಪ್ರವೇಶ ಉಚಿತ. ಸರಳ ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. ವಿವಿಧ ಕ್ಷೇತ್ರದ ಸಾಧಕರು, ವಿದ್ವಾಂಸರು ಮಾರ್ಗದರ್ಶನ ನೀಡಲಿದ್ದಾರೆ. ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಆಟೋಟಗಳೂ ಶಿಬಿರದ ಭಾಗ ಆಗಿರುತ್ತವೆ.

ಎಲ್ಲ ಶಿಬಿರಾರ್ಥಿಗಳಿಗೂ ಅಧ್ಯಯನ ಸಾಮಗ್ರಿ ಉಚಿತವಾಗಿ ನೀಡಲಾಗುತ್ತದೆ. ಭಾರತೀಯ ಸಂಸ್ಕೃತೀಯ ರಕ್ಷಣೆ, ವರ್ಧನೆಗಾಗಿ ಆಸಕ್ತಿ ಹೊಂದಿದವರು ನಮೂದಿತ ಅರ್ಜಿ ಭರ್ತಿ ಮಾಡಿ ಕಳಿಸಲು ಕೋರಿದೆ. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-05-2025. ಆಯ್ಕೆ ಆದವರಿಗೆ 30-05-2025ರೊಳಗೆ ಮಾಹಿತಿ ನೀಡಲಾಗುತ್ತೆ.

ಅರ್ಜಿ ಹಾಗೂ ಇತರ ಮಾಹಿತಿಗಾಗಿ ಸಂಪರ್ಕಿಸಿ : ಬಿಂದುಮಾಧವ ವಿ.ಜೆ. : 9008833886 info@vedah.com www.vedah.com