AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು’: ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ

ಸುಧಾ ಮೂರ್ತಿ ಅವರು ಬೆಂಗಳೂರಿನ ಬೀದಿ ನಾಯಿಗಳ ಮೇಲಿನ ದೌರ್ಜನ್ಯ ಖಂಡಿಸಿ, ಮಾನವೀಯತೆ ತೋರಲು ಕರೆ ನೀಡಿದ್ದಾರೆ. ಮೂಕ ಪ್ರಾಣಿಗಳಿಗೆ ಪ್ರೀತಿ, ಆಹಾರ, ನೀರು ನೀಡಿ, ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ. ಕೇವಲ ಪ್ರೀತಿ ಸಾಲದು, ಸಂತಾನಹರಣ ಚಿಕಿತ್ಸೆ (ABC) ಮತ್ತು ಲಸಿಕೆ ಹಾಕಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಲು ಅವರು ಪ್ರೇರೇಪಿಸಿದ್ದಾರೆ.

'ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು': ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ
ಸುಧಾ ಮೂರ್ತಿ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Feb 27, 2026 | 9:52 AM

Share

ಬೆಂಗಳೂರು, ಫೆ.27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳ ಮೇಲಿನ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಇನ್ಫೋಸಿಸ್ ಫೌಂಡೇಶನ್‌ನ ಮಾರ್ಗದರ್ಶಕಿ ಸುಧಾ ಮೂರ್ತಿ (Sudha Murty) ಅವರು ಈ ಮೂಕ ಪ್ರಾಣಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ನಗರದ ಜನತೆ ಬೀದಿ ನಾಯಿಗಳ ಬಗ್ಗೆ ತೋರುತ್ತಿರುವ ಅಸಡ್ಡೆಯನ್ನು ಬಿಟ್ಟು, ಮಾನವೀಯತೆಯಿಂದ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾ ಮೂರ್ತಿಯವರು, “ನನ್ನ ಮನೆಯ ಬಳಿಯೂ ಹಲವು ಬೀದಿ ನಾಯಿಗಳಿವೆ. ಅವುಗಳಿಗೆ ನಾವು ನೀಡುವ ಒಂದು ತುತ್ತು ಅನ್ನಕ್ಕಿಂತ ಹೆಚ್ಚಾಗಿ, ನಾವು ತೋರುವ ಒಂದು ಸಣ್ಣ ಪ್ರೀತಿಯ ಸ್ಪರ್ಶ ಅಥವಾ ಕರುಣೆಯ ನೋಟ ಮುಖ್ಯ. ಪ್ರಾಣಿಗಳು ಭಾಷೆಯನ್ನು ಅರ್ಥ ಮಾಡಿಕೊಳ್ಳಲಾರವು, ಆದರೆ ಅವುಗಳಿಗೆ ಪ್ರೀತಿಯ ಭಾಷೆ ಚೆನ್ನಾಗಿ ಗೊತ್ತು,” ಎಂದು ಭಾವುಕರಾಗಿ ನುಡಿದರು. ಬೀದಿ ನಾಯಿಗಳನ್ನು ಕಂಡಾಗ ಕಲ್ಲು ಹೊಡೆಯುವುದು ಅಥವಾ ಓಡಿಸುವುದನ್ನು ಮಾಡಬೇಡಿ. ಅವುಗಳೂ ಈ ಸಮಾಜದ ಭಾಗ ಎಂಬುದನ್ನು ಮರೆಯಬೇಡಿ.

ಇದನ್ನೂ ಓದಿ: ವಿಶ್ವ ಎನ್‌ಜಿಒ ದಿನವನ್ನು ಆಚರಿಸುವುದೇಕೆ ಗೊತ್ತಾ? ಇದರ ಹಿನ್ನೆಲೆಯನ್ನು ತಿಳಿಯಿರಿ

ಇಲ್ಲಿದೆ ನೋಡಿ ವಿಡಿಯೋ:

ಮನುಷ್ಯರಿಗೆ ಬದುಕುವ ಹಕ್ಕಿರುವಂತೆ ಈ ಪ್ರಾಣಿಗಳಿಗೂ ಇದೆ. ನಗರದ ಬೆಳವಣಿಗೆಯ ನಡುವೆ ನಾವು ಅವುಗಳ ಆವಾಸಸ್ಥಾನಗಳನ್ನು ಕಿತ್ತುಕೊಂಡಿದ್ದೇವೆ, ಹೀಗಾಗಿ ಅವುಗಳಿಗೆ ಆಸರೆ ನೀಡುವುದು ನಮ್ಮ ಜವಾಬ್ದಾರಿ. ನಿಮ್ಮ ಮನೆಯ ಮುಂದೆ ಬರುವ ನಾಯಿಗಳಿಗೆ ಸ್ವಲ್ಪ ನೀರು ಅಥವಾ ಆಹಾರ ನೀಡಿ. ಅವು ನಮಗಿಂತ ಹೆಚ್ಚು ನಿಷ್ಠೆಯನ್ನು ತೋರಿಸುತ್ತವೆ. ಸುಧಾ ಮೂರ್ತಿಯವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅನೇಕ ಬೆಂಗಳೂರಿಗರು ತಮ್ಮ ಮನೆಯ ಬಳಿಯ ಬೀದಿ ನಾಯಿಗಳ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ಕೇವಲ ಆಹಾರ ನೀಡಿದರೆ ಸಾಲದು, ಅವುಗಳ ಸಂತಾನಹರಣ ಚಿಕಿತ್ಸೆ (ABC) ಮತ್ತು ಲಸಿಕೆ ಹಾಕಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗೋಣ” ಎಂದು ಜನ ಚರ್ಚಿಸುತ್ತಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us