AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime Updates: ಜೈಲಿನಿಂದ ಬಿಡುಗಡೆಯಾಗಿ 21ನೇ ದಿನಕ್ಕೇ ಕಳ್ಳತನ; ಕಾರು ಕದಿಯುವಾಗ ಸಿಕ್ಕಿಬಿದ್ದ ಖದೀಮರು

ಕಾರಿನ ಗಾಜು ಒಡೆದು ಸ್ಟೇರಿಂಗ್ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ಮುನಿರಾಜು ಕಾರು ತೆಗೆಯಲು ಹೋದಾಗ ಶೂಟರ್ ಸಲ್ಮಾನ್ ಕಾರಿನಲ್ಲಿ ಕೂತಿದ್ದ. ಮೆಹಬೂಬ್ ಉಮೆರ್ ಅಲ್ಲೆ ಪಕ್ಕದಲ್ಲಿ ಅಡಗಿ ಕುಳಿತಿದ್ದ. ಅವರು ಕಾರನ್ನು ಕದಿಯಲು ಬಂದಿರೋದು ಗೊತ್ತಾಗಿ ಮುನಿರಾಜು ಸಹಾಯಕ್ಕಾಗಿ ಕಿರುಚಿದ್ದರು.

Crime Updates: ಜೈಲಿನಿಂದ ಬಿಡುಗಡೆಯಾಗಿ 21ನೇ ದಿನಕ್ಕೇ ಕಳ್ಳತನ; ಕಾರು ಕದಿಯುವಾಗ ಸಿಕ್ಕಿಬಿದ್ದ ಖದೀಮರು
ಮೆಹಬೂಬ್ ಉಮರ್ ಅಲಿಯಾಸ್ ನವಾಜ್ ಮತ್ತು ಶೂಟರ್ ಸಲ್ಮಾನ್
TV9 Web
| Edited By: |

Updated on: Mar 03, 2022 | 11:19 AM

Share

ಬೆಂಗಳೂರು: ಕಳ್ಳನೊಬ್ಬ ಜೈಲಿನಿಂದ ಬಿಡುಗಡೆಯಾಗಿ 21 ದಿನಕ್ಕೇ ಕಳ್ಳತನಕ್ಕೆ ಇಳಿದ ಘಟನೆ ನಡೆದಿದೆ. ಪಲ್ಸರ್ ಬೈಕ್ ನಲ್ಲಿ ಬಂದು ಕಾರು ಕಳ್ಳತನ ಮಾಡುತ್ತಿದ್ದ ಆಸಾಮಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಹೈಫೈ ಏರಿಯಾದಲ್ಲಿ ಮತ್ತೆ ಕಾರು ಕಳ್ಳತನ ಮಾಡಲು ಹೋಗಿ ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ. ಶೂಟರ್ ಸಲ್ಮಾನ್ ಮತ್ತು ಮೆಹಬೂಬ್ ಉಮರ್ ಅಲಿಯಾಸ್ ನವಾಜ್ ಎಂಬವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಪಾರ್ಕಿಂಗ್ ಮಾಡಿದ್ದ ಕಾರನ್ನು ಶೂಟರ್ ಸಲ್ಮಾನ್ ಮತ್ತು ನವಾಜ್ ಕಳ್ಳತನ ಮಾಡಲು ಹೋಗಿದ್ದರು. ಮುನಿರಾಜು ಎನ್ನುವವರಿಗೆ ಸೇರಿದ್ದ ಕಾರನ್ನು ಕಳ್ಳತನ ಮಾಡಲು ಬಂದಿದ್ದ ಆರೋಪಿಗಳು, ಕಾರಿನ ಗಾಜು ಒಡೆದು ಸ್ಟೇರಿಂಗ್ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ಮುನಿರಾಜು ಕಾರು ತೆಗೆಯಲು ಹೋದಾಗ ಶೂಟರ್ ಸಲ್ಮಾನ್ ಕಾರಿನಲ್ಲಿ ಕೂತಿದ್ದ. ಮೆಹಬೂಬ್ ಉಮೆರ್ ಅಲ್ಲೆ ಪಕ್ಕದಲ್ಲಿ ಅಡಗಿ ಕುಳಿತಿದ್ದ. ಅವರು ಕಾರನ್ನು ಕದಿಯಲು ಬಂದಿರೋದು ಗೊತ್ತಾಗಿ ಮುನಿರಾಜು ಸಹಾಯಕ್ಕಾಗಿ ಕಿರುಚಿದ್ದರು.

ತಕ್ಷಣವೇ ಶೂಟರ್ ಸಲ್ಮಾನ್, ಮುನಿರಾಜವನ್ನ ಚಾಕುವಿನಿಂದ ಮುಗಿಸಿ ಬಿಡು ಎಂದಿದ್ದ. ಆದರೆ, ಸ್ಥಳೀಯರು ಮುನಿರಾಜು ಕೂಗಿದ್ದರಿಂದ ಸಹಾಯಕ್ಕೆ ಬಂದಿದ್ದರು. ಸ್ಥಳೀಯರನ್ನು ನೋಡಿ ಬೈಕ್ ಬಿಟ್ಟು ಎಸ್ಕೇಪ್ ಅಗಲು ಪ್ರಯತ್ನಿಸಿದ್ದ ಆರೋಪಿಗಳು, ಆಯತಪ್ಪಿ ಬಿದ್ದು ಸ್ಥಳಿಯರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಸದಾಶಿವ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶೂಟರ್ ಸಲ್ಮಾನ್ ಬರೋಬ್ಬರಿ 11 ಪ್ರಕರಣ ಇರುವುದು ತಿಳಿದುಬಂದಿದೆ. ಕೊಲೆ, ಕೊಲೆಯತ್ನ, ಕಿಡ್ನಾಪ್, ರಾಬರಿ ಪ್ರಕರಣದಲ್ಲೂ ಸಲ್ಮಾನ್ ಭಾಗಿ ಆಗಿದ್ದಾರೆ.

ಇತರ ಅಪರಾಧ ಸುದ್ದಿಗಳು

ಯಾದಗಿರಿ: ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 11 ಮಂದಿ ಗಾಯಾಳುಗಳು ಮೃತಪಟ್ಟಿದ್ದಾರೆ.

ಕಲಬುರಗಿ: ನಗರದ ನೂರ್ ಮೊಹಲ್ಲಾ ಕಾಲೋನಿಯಲ್ಲಿ ಕತ್ತು ಕೊಯ್ದು ಶಹನ್ ಬೇಗಂ (36) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ವಸೀಂ ಅಕ್ರಂ ಎಂಬಾತ ಹತ್ಯೆಗೈದಿದ್ದಾನೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯನಗರ: ಅಮರದೇವರಗುಡ್ಡದಿಂದ ಕೂಡ್ಲಿಗಿ ಪಟ್ಟಣಕ್ಕೆ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ವಿನಾಯಕ (24) ದುರ್ಮರಣನ್ನಪ್ಪಿದ ಘಟನೆ ನಡೆದಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಗುಡ್ಡದಹಳ್ಳಿ ಬಳಿ ಆಂಧ್ರದ ಮೂಲದ ನಿಂಗಪ್ಪ (40) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಪಾರ್ವತಮ್ಮ, ಪ್ರಿಯಕರ ಹೊನ್ನೂರ ಸ್ವಾಮಿ ಬಂಧಿಸಲಾಗಿದೆ. ತಳಕು ಠಾಣೆ ಇನ್ಸ್​ಪೆಕ್ಟರ್​ ಸಮೀವುಲ್ಲಾ, ರಾಂಪುರ ಪಿಎಸ್​ಐ ಗಾದಿಲಿಂಗಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ: Crime News: ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ; ವರದಕ್ಷಿಣೆಗೆ ಪೀಡಿಸಿದ ಪತಿರಾಯ ಅರೆಸ್ಟ್

ಇದನ್ನೂ ಓದಿ: Crime Updates: ತಲಾ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಸಿಬ್ಬಂದಿ, ಬೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್