AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರದಲ್ಲಿ ನಡೆಯಿತು ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ನೀಡುವ ಬಲಿ ಜಾತ್ರೆ! ಏನಿದರ ವಿಶೇಷತೆ?

ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆಯ ವಿಶೇಷತೆ ಎಂದರೆ, ರಾತ್ರಿ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆತನ ಶವವನ್ನು ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಜನ ಶವವನ್ನು ಮೇಲೆ ಎಸೆಯುತ್ತಾರೆ.

ಚಾಮರಾಜನಗರದಲ್ಲಿ ನಡೆಯಿತು ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ನೀಡುವ ಬಲಿ ಜಾತ್ರೆ! ಏನಿದರ ವಿಶೇಷತೆ?
ಜಾತ್ರೆಯಲ್ಲಿ ಸೇರಿದ ಭಕ್ತರು
TV9 Web
| Edited By: sandhya thejappa|

Updated on:May 10, 2022 | 8:11 AM

Share

ಚಾಮರಾಜನಗರ: ಜಾತ್ರೆ (Fair) ಎಂದರೆ ಸಂಭ್ರಮ, ಸಡಗರ. ಸಾಮಾನ್ಯವಾಗಿ ಜಾತ್ರೆ ಅಂದರೆ ದೇವರ (God) ಮೂರ್ತಿಯನ್ನು ಹೊತ್ತು ಉತ್ಸಾಹ ಮಾಡಿ ಪೂಜಾ ವಿಧಿ ವಿಧಾನಗಳನ್ನ ಮಾಡಲಾಗುತ್ತದೆ. ಹಲವೆಡೆ ಪ್ರಾಣಿ ಬಲಿ ಕೂಡಾ ಇರುತ್ತದೆ. ಜಾತ್ರೆ ಎಂದು ನೆನೆದಾಗ ಅಂಗಡಿ ಮುಂಗಟ್ಟು, ಲಕ್ಷಾಂತರ ಜನ, ಆಟದ ಜೋಕಾಲಿಗಳು, ದೇವರ ರಥೋತ್ಸವ ಕಣ್ಣಿನ ಮುಂದೆ ಬಂದು ಹೋಗುತ್ತವೆ. ಇದು ಸರ್ವೆ ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ಜಾತ್ರೆ ತೀರಾ ಭಿನ್ನವಾಗಿದೆ. ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆ ಜಿಲ್ಲೆಯಲ್ಲಿ ನಡೆಯುತ್ತದೆ.

ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆಯ ವಿಶೇಷತೆ ಎಂದರೆ, ರಾತ್ರಿ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆತನ ಶವವನ್ನು ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಜನ ಶವವನ್ನು ಮೇಲೆ ಎಸೆಯುತ್ತಾರೆ. ಈ ವೇಳೆ ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ಬರುತ್ತದೆ. ಇದು ಜನರ ನಂಬಿಕೆ. ಈ ವಿಚಿತ್ರ ಆಚರಣೆಯನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದಲ್ಲಿ ಆಚರಿಸುತ್ತಾರೆ.

ಸೀಗೆಮಾರಮ್ಮ ಬಲಿ ಹಬ್ಬದಲ್ಲಿ ವಿಶೇಷ ಆಚರಣೆ: ಸತತ 9 ಗಂಟೆಗಳ ಕಾಲ ಆತನ ಉಸಿರಾಟ ನಿಂತು‌ ಹೋಗಿರುತ್ತದೆ. ಆತ ದೇವರಿಗೆ ಬಲಿಯಾಗಿರುತ್ತಾನೆ ಎಂಬ  ನಂಬಿಕೆಯಿದೆ. ಸೀಗಮಾರಮ್ಮ ಬಲಿ ಹಬ್ಬ ಸುಮಾರು 19 ವರ್ಷಗಳ ಬಳಿಕ ನಡೆದಿದೆ. ಗ್ರಾಮದ ಎಲ್ಲಾ‌ ಸಮುದಾಯಗಳು ಒಟ್ಟಿಗೆ ಸೇರಿ ಆಚರಣೆ ಮಾಡಿದ್ದಾರೆ. ಇನ್ನು ಬಲಿ ಬೀಳುವ ವ್ಯಕ್ತಿಯ ಎದೆ ಮೇಲೆ ದೇಗುಲದ ಅರ್ಚಕ ಕಾಲಿಡುತ್ತಾರೆ. ಮಧ್ಯೆ ರಾತ್ರಿ 12 ಗಂಟೆ ವೇಳೆಗೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದು ಅರ್ಚಕ  ಕಾಲಿಟ್ಟರೇ ಪ್ರಾಣ ಹೋಗುತ್ತೆ ಎಂಬ ನಂಬಿಕೆ. ಪ್ರಾಣ ಹೋಗಿ ನಿಷ್ಕ್ರಿಯವಾದ ವ್ಯಕ್ತಿಯನ್ನು ಬಲಿ ಪೀಠಕ್ಕೆ ತೆಗೆದುಕೊಂಡು ಹೋಗುತ್ತಾರೆ. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಬೆಳಿಗ್ಗೆ 9 ಗಂಟೆ ವೇಳೆಗೆ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆ ನೆರವೇರುತ್ತದೆ. ಒಳಗೆರೆ ಹುಚ್ಚಮ್ಮ ದೇವತೆ ಅರ್ಚಕರ ಮೈಮೇಲೆ ಬರುತ್ತದೆಯಂತೆ. ತೀರ್ಥ ಪೋಕ್ಷಣೆಯಿಂದ ಸತ್ತ ವ್ಯಕ್ತಿಗೆ ಮರುಜೀವ ಬರುತ್ತದೆ. ಸತ್ತಿದ್ದ ವ್ಯಕ್ತಿಗೆ 11ನೇ ದಿನ ಸಾಂಕೇತಿಕವಾಗಿ ತಿಥಿ ಮಾಡಲಾಗುತ್ತದೆ. ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಮನೆ ಹೊರತುಪಡಿಸಿ ಬೇರೆಡೆ ಊಟ ತಿಂಡಿ ಮಾಡುವಂತಿಲ್ಲ.

24 ದಿನ ಶುಭಕಾರ್ಯಗಳು ನಡೆಯಲ್ಲ: ಈ ಸೀಗಮಾರಮ್ಮನ ಹಬ್ಬ 24 ದಿನಗಳ ಕಾಲ ನಡೆಯುತ್ತದೆ. 24 ದಿನಗಳ ಕಾಲ ಗ್ರಾಮದಲ್ಲಿ ಮಾಂಸಹಾರ ಮಾಡಲ್ಲ. ಮದ್ಯಪಾನ ಮಾಡಲ್ಲ, ಮನೆಗಳಲ್ಲಿ ಒಗ್ಗರಣೆ ಹಾಕಲ್ಲ. ಈ ಅವಧಿಯಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳು ನಡೆಯಲ್ಲ. ಈ ಅವಧಿಯಲ್ಲಿ ಯಾರಾದರು ಸತ್ತರೆ ಒಂದೇ ಗಂಟೆ ಅವಧಿಯಲ್ಲಿ ಗ್ರಾಮದಿಂದ ಹೊರಕ್ಕೆ ಶವ ಸಾಗಣೆ ಮಾಡಬೇಕು.

ಇದನ್ನೂ ಓದಿ

Namitha Birthday: ‘ನೀಲಕಂಠ’ ಬೆಡಗಿ ನಮಿತಾ ಜನ್ಮದಿನ: ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಲಿರುವ ಬಹುಭಾಷಾ ನಟಿ

ನ್ಯೂಯಾರ್ಕ್​ನಲ್ಲಿ ಕತ್ರಿನಾ-ವಿಕ್ಕಿ ಕೌಶಲ್​; ವೈರಲ್​ ಆಯ್ತು ವೆಕೇಶನ್ ಫೋಟೋ

Published On - 8:08 am, Tue, 10 May 22

Follow Us
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು