AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಂಜಿನಪ್ಪ ಮೂಗು-ಬಾಯಿ ಮೂಲಕ ಒಂದೇ ಸಮಯದಲ್ಲಿ ವಿವಿಧ ಸ್ವರ ಸೃಷ್ಟಿಸ್ತಾರೆ, ಇಲ್ಲಿದೆ ಪರಿಚಯ

Kannada Rajyotsava Award 2022: ಮೂಗಿನ ಮೂಲಕ ನೀರ ಝರಿ, ಉಸಿರಿನ ಮೂಲಕ ನಾದ ಝರಿ ಒಟ್ಟಿಗೇ ಹೊರಹೊಮ್ಮಿಸುತ್ತಾರೆ ಹಿರಿಯ ಕಲಾವಿದ ಮುಖವೀಣೆ ಆಂಜಿನಪ್ಪ. ರಾಜ್ಯ ಸರ್ಕಾರ ಆ ಅಪರೂಪದ ಕಲಾವಿದನನ್ನು ಗುರ್ತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ, ಗೌರವಿಸಿದೆ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಂಜಿನಪ್ಪ ಮೂಗು-ಬಾಯಿ ಮೂಲಕ ಒಂದೇ ಸಮಯದಲ್ಲಿ ವಿವಿಧ ಸ್ವರ ಸೃಷ್ಟಿಸ್ತಾರೆ, ಇಲ್ಲಿದೆ ಪರಿಚಯ
ಆಂಜಿನಪ್ಪ ಮೂಗು-ಬಾಯಿ ಮೂಲಕ ಒಂದೇ ಸಮಯದಲ್ಲಿ ವಿವಿಧ ಸ್ವರ ಸೃಷ್ಟಿಸ್ತಾರೆ
TV9 Web
| Edited By: |

Updated on: Oct 31, 2022 | 5:34 PM

Share

ಅವರ ಕಲೆ ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪ. ಅವರ ತರುವಾಯ ಆ ಕಲೆಯೂ ನಾಶವಾಗುತ್ತದೆಂಬ ಚಿಂತೆ! ಇವೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಆ ಅಪರೂಪದ ಕಲಾವಿದನನ್ನು ಗುರ್ತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award 2022) ನೀಡಿ ಗೌರವಿಸಿದೆ, ಅಷ್ಟಕ್ಕೂ ಆ ಕಲೆಯಾದ್ರುಯಾರು? ಅದರ ವಿಶೇಷತೆಯಾದ್ರು ಏನು? ಅನ್ನೋ ವಿವರ ಇಲ್ಲಿದೆ ನೋಡಿ.

ಅಪರೂಪದ ಕಲಾವಿದ ಮುಖವೀಣೆ ಆಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ!!

ಇವರು ಮುಖವೀಣೆ ಆಂಜಿನಪ್ಪ (Mukha Veena Kale Chikkaballapur artist Anjinappa). ಜನಪದ ಕಲಾವಿದ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಗವಿಕುಂಟಹಳ್ಳಿ ನಿವಾಸಿ. ಮುಖವೀಣೆ ಆಂಜಿನಪ್ಪ ಮೂಲತಃ ಕಲಾವಿದರ ಕುಟುಂಬದವರು. ತಮ್ಮ ಪೂರ್ವಜರಿಂದ ಬಂದಂತಹ ಮುಖವೀಣೆ ಕಲೆಯನ್ನೆ…. ಬಾಲ್ಯದಲ್ಲೇ ಕಲಿತುಕೊಂಡು, ಹೊಟ್ಟೆ ಪಾಡಿಗೆ ಊರೂರು ಸುತ್ತಿ ತಮ್ಮ ಕಲೆಯನ್ನ ಪ್ರದರ್ಶಿಸುತ್ತಾರೆ.

ಮೂಗಿನ ಮೂಲಕ ನೀರ ಝರಿ, ಉಸಿರಿನ ಮೂಲಕ ನಾದ ಝರಿ ಒಟ್ಟಿಗೇ:

ಮೊದ್ಲಿಗೆ ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕಲೆಯನ್ನ ದೇಶಾದ್ಯಂತ ಪ್ರಖ್ಯಾತಿಗೊಳಿಸಿ, ಹಲವು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಬೆರಳಿಣಿಕೆ ಸಂಖ್ಯೆಯಲ್ಲಿರುವ ಮುಖವೀಣೆ ಕಲಾವಿದರಲ್ಲಿ ಆಂಜಿನಪ್ಪ ಅವರೂ ಒಬ್ಬರು. ಆಂಜಿನಪ್ಪ ಹಾಗೂ ಅವರ ಕಲೆಯನ್ನು ಗುರ್ತಿಸಿ ರಾಜ್ಯ ಸರ್ಕಾರ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ಗೌರವ ಸಲ್ಲಿಸ್ತಿದೆ.

ಇವರ ಬತ್ತಳಿಕೆಯಲ್ಲಿರುವ ಪುಟ್ಟ ಪುಟ್ಟ ವಾದ್ಯಗಳು ಹಾಗೂ ಮುಖವೀಣೆಯಿಂದ ಹೊರಬರುವ ನಾದಲೀಲೆಗಳು ಎಂತಹವರನ್ನೂ ಮೋಡಿ ಮಾಡುತ್ತದೆ. ಈ ನಾದಗಾರುಡಿಗನ ಸ್ವರ ಮಾಧುರ್ಯಕ್ಕೆ ಸೋಲದವರೆ ಇಲ್ಲ. ಕೊಳಲು, ಶೃತಿವಾದ್ಯ ಹಾಗೂ ಮುಖವೀಣೆಗಳನ್ನ ಮುಪ್ಪುರಿಗೊಳಿಸಿ ನುಡಿಸಬಲ್ಲರಲ್ಲದೇ… ಮೂಗಿನ ಮೂಲಕ ನೀರ ಝರಿಯನ್ನೂ, ಉಸಿರಿನ ಮೂಲಕ ನಾದ ಝರಿಯನ್ನ ಒಟ್ಟಿಗೆ ಹರಿಸಿ ನೋಡುಗರನ್ನ ಮಂತ್ರಮುಗ್ದಗೊಳಿಸಬಲ್ಲರು. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಚಿಕ್ಕಬಳ್ಳಾಪುರದ ಸನಾದಿ ಅಪ್ಪಣ್ಣ ಎಂದೇ ಖ್ಯಾತರಾಗಿರುವ ಮುಖವೀಣೆ ಆಂಜಿನಪ್ಪನವರಿಗೆ ಈಗಾಗಲೇ ಹಲವಾರು ಪ್ರಶಸ್ತಿ ಸನ್ಮಾನಗಳು ಬಂದಿವೆ. ಆದ್ರೂ ಆಂಜಿನಪ್ಪನವರನ್ನು ಕಾಡ್ತಿರುವ ಆರ್ಥಿಕ ಸಂಕಷ್ಟ ಮಾತ್ರ ದೂರವಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಆಂಜಿನಪ್ಪ ಕೀರ್ತಿ ತಂದಿದ್ದಾರೆ. ಈಗ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯ ಜನ ಹಾಗೂ ಸ್ವತಃ ಆಂಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿಧ ಪ್ರಶಸ್ತಿಗಳ ಮಧ್ಯೆ ಇದೀಗ ನಾಡಿನ‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಆದ್ರೆ ಮುಖ ವೀಣೆ ಆಂಜಿನಪ್ಪನವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಸರ್ಕಾರ ಮತ್ತು ದಾನಿಗಳು ಅವರ ಸಹಾಯಕ್ಕೆ ಮುಂದಾಗಬೇಕಿದೆ.

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ