AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಗಗನಕ್ಕೇರುತ್ತಿದೆ ತರಕಾರಿ ದರ: ನೂರರ ಗಡಿ ದಾಟಿದ ಬೀನ್ಸ್, ಬದನೆಕಾಯಿ

Bangalore Vegetable Price Hike: ಅನಾವೃಷ್ಟಿ ಹಾಗೂ ನೆರೆ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ತರಕಾರಿ ಮತ್ತು ಸೊಪ್ಪುಗಳ ದರ ಗಗನಕ್ಕೇರಿದೆ. ಬೀನ್ಸ್, ನುಗ್ಗೆಕಾಯಿ, ಬಿಳಿ ಬದನೆಕಾಯಿ ಸೇರಿದಂತೆ ಪ್ರಮುಖ ತರಕಾರಿಗಳ ಬೆಲೆ 100 ರೂ. ದಾಟಿದೆ. ಆದರೆ, ಟೊಮೆಟೊ ಮತ್ತು ಈರುಳ್ಳಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಸಣ್ಣ ಸಮಾಧಾನ ತಂದಿದೆ.

ಬೆಂಗಳೂರಿನಲ್ಲಿ ಗಗನಕ್ಕೇರುತ್ತಿದೆ ತರಕಾರಿ ದರ: ನೂರರ ಗಡಿ ದಾಟಿದ ಬೀನ್ಸ್, ಬದನೆಕಾಯಿ
ಸಾಂದರ್ಭಿಕ ಚಿತ್ರImage Credit source: tv9
ಕಿರಣ್​ ಸೂರ್ಯ
| Edited By: |

Updated on: Jun 25, 2026 | 7:24 AM

Share

ಮುಖ್ಯಾಂಶಗಳು

  • ತರಕಾರಿ, ಸೊಪ್ಪುಗಳ ಬೆಲೆ ಭಾರಿ ಏರಿಕೆ.
  • ಟೊಮೆಟೊ, ಈರುಳ್ಳಿ ದರ ಮಾತ್ರ ಇಳಿಕೆ.
  • ಮೊಟ್ಟೆ ಬೆಲೆ 8 ರೂಪಾಯಿಗೆ ಹೆಚ್ಚಳ.

ಬೆಂಗಳೂರು, ಜೂನ್ 25: ಬೆಂಗಳೂರಿನ (Bengaluru) ಸಾರ್ವಜನಿಕರಿಗೆ ಹಾಗೂ ಗೃಹಿಣಿಯರಿಗೆ ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ಸಿಹಿ ಹಾಗೂ ಕಹಿ ಸುದ್ದಿ ಎದುರಾಗಿದೆ. ರಾಜ್ಯದಲ್ಲಿ ಎದುರಾಗಿರುವ ಅನಾವೃಷ್ಟಿ ಮತ್ತು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿನ ಹವಾಮಾನ ಏರಿಳಿತದ ನೇರ ಎಫೆಕ್ಟ್ ತರಕಾರಿ ಮಾರುಕಟ್ಟೆಯ ಮೇಲೆ ಬೀರಿದೆ. ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಹೋಲ್‌ಸೇಲ್ ಬಜಾರ್‌ಗಳಲ್ಲೇ ತರಕಾರಿ ಮತ್ತು ಸೊಪ್ಪುಗಳ ದರ ಸೆಂಚುರಿ ಬಾರಿಸಿದ್ದು, ನಿತ್ಯದ ಅಡುಗೆಗೆ ತರಕಾರಿ ಕೊಳ್ಳಲು ಜನಸಾಮಾನ್ಯರು ಪರದಾಡುವಂತಾಗಿದೆ.

ಮಾರುಕಟ್ಟೆಯಲ್ಲಿ ತರಕಾರಿ ದರಗಳ ಪಟ್ಟಿ (ಪ್ರತಿ ಕೆಜಿಗೆ)

ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಮುಖ ತರಕಾರಿಗಳ ದರ ವಿವರ ಹೀಗಿದೆ;

  • ನುಗ್ಗೆಕಾಯಿ: 200 ರಿಂದ 220 ರೂ.
  • ಬೀನ್ಸ್: 115 ರಿಂದ 140 ರೂ.
  • ಮೆಂತ್ಯ ಸೊಪ್ಪು: 120 ರಿಂದ 130 ರೂ.
  • ಬಿಳಿ ಬದನೆಕಾಯಿ: 110 ರಿಂದ 120 ರೂ.
  • ಬಟಾಣಿ ಹಾಗೂ ಹಸಿಮೆಣಸಿನಕಾಯಿ: 100 ರಿಂದ 120 ರೂ.
  • ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಹಾಗೂ ಕ್ಯಾರೆಟ್: 80 ರಿಂದ 100 ರೂ.
  • ಬೆಳ್ಳುಳ್ಳಿ: 200 ರಿಂದ 220 ರೂ.

ಟೊಮೆಟೊ-ಈರುಳ್ಳಿ ಬೆಲೆ ಇಳಿಕೆ, ಮೊಟ್ಟೆ ದುಬಾರಿ

ಇಷ್ಟೆಲ್ಲಾ ತರಕಾರಿಗಳ ಬೆಲೆ ಏರಿಕೆಯ ನಡುವೆ ಸಮಾಧಾನಕರ ಸಂಗತಿಯೆಂದರೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಟೊಮೆಟೊ ದರ 10 ರಿಂದ 15 ರೂಪಾಯಿ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 15-20 ರೂಪಾಯಿಗೆ ಸಿಗುತ್ತಿದೆ. ಹಾಗೆಯೇ ಈರುಳ್ಳಿ ಕೂಡ ಕೆಜಿಗೆ 20 ರಿಂದ 25 ರೂಪಾಯಿಗೆ ಲಭ್ಯವಿದೆ. ಇತ್ತ ತರಕಾರಿ ಬೆಲೆ ಏರಿಕೆಯ ಬೆನ್ನಲ್ಲೇ ಈ ಹಿಂದೆ 6.50 ರೂಪಾಯಿ ಇದ್ದ ಒಂದು ಕೋಳಿ ಮೊಟ್ಟೆಯ ಬೆಲೆ ಈಗ ದಿಢೀರನೆ 8 ರೂಪಾಯಿಗೆ ಏರಿಕೆಯಾಗಿದೆ.

ವ್ಯಾಪಾರವಿಲ್ಲದೆ ತತ್ತರಿಸಿದ ವರ್ತಕರು

ಕಳೆದ ಕೆಲವು ವಾರಗಳಿಂದ ದೇಶದ ವಿವಿಧೆಡೆ ಕೆಲವೆಡೆ ಅತಿವೃಷ್ಟಿಯಾಗಿ ಬೆಳೆ ಕೊಳೆತಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗಿ ನಿಂತಿವೆ. ಬಿಳಿ ಬದನೆಕಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ 100ರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ತರಕಾರಿ ದರ ದುಬಾರಿಯಾದ ಹಿನ್ನೆಲೆಯಲ್ಲಿ ಈ ಹಿಂದೆ ಕೆಜಿಗಟ್ಟಲೆ ಕೊಳ್ಳುತ್ತಿದ್ದ ಗ್ರಾಹಕರು ಈಗ ಕಾಲು ಕೆಜಿ, ಅರ್ಧ ಕೆಜಿಗೆ ಸೀಮಿತವಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಹವಾಮಾನ ವೈಪರೀತ್ಯದ ಈ ಆಟ ಸಿಲಿಕಾನ್ ಸಿಟಿಯ ಜನಸಾಮಾನ್ಯರ ಮಾಸಿಕ ಬಜೆಟ್‌ಅನ್ನು ಸಂಪೂರ್ಣವಾಗಿ ಏರುಪೇರು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us