ಶೃಂಗೇರಿಯಲ್ಲಿ ಕೇಳಿಬಂತು ‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಘೋಷಣೆ: ಏನಂದ್ರು ಡಿಸಿಎಂ?

ಡಿನ್ನರ್ ಪಾಲಿಟಿಕ್ಸ್ ಸೇರಿದಂತೆ ಕರ್ನಾಟಕ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮಧ್ಯೆಯೇ, ಶೃಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ‘‘ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ತಕ್ಷಣ ಮಾತನಾಡಿದ ಡಿಸಿಎಂ, ನನಗೆ ಯಾರ ಬೆಂಬಲ, ಘೋಷಣೆಗಳು ಬೇಡ ಎಂದರಾದರೂ, ಸಿದ್ದರಾಮಯ್ಯ ಬಣದ ಡಿನ್ನರ್ ಪಾಲಿಟಿಕ್ಸ್​ಗೆ ಪರೋಕ್ಷ ತಿರುಗೇಟು ನೀಡಿದರಾ ಎಂಬ ಅನುಮಾನ ಮೂಡಿದೆ.

ಶೃಂಗೇರಿಯಲ್ಲಿ ಕೇಳಿಬಂತು ‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಘೋಷಣೆ: ಏನಂದ್ರು ಡಿಸಿಎಂ?
ಮೆಣಸೆ ಹೆಲಿಪ್ಯಾಡ್​​ನಲ್ಲಿ ಡಿಕೆ ಶಿವಕುಮಾರ್​ಗೆ ಅದ್ದೂರಿ ಸ್ವಾಗತ
Edited By:

Updated on: Jan 11, 2025 | 12:44 PM

ಶೃಂಗೇರಿ, ಜನವರಿ 11: ‘‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’’ ಈ ಘೋಷಣೆ ಕೇಳಿಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಮೆಣಸೆ ಹೆಲಿಪ್ಯಾಡ್​ನಲ್ಲಿ. ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದು, ಮೆಣಸೆ ಹೆಲಿಪ್ಯಾಡ್​ಗೆ ಆಗಮನಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಅವರ ಪರ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ರಾಜಕೀಯದಲ್ಲಿ ಯಾವುದೇ ತಿರುವು ಇಲ್ಲ. ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಜನರು ಅಧಿಕಾರ ನೀಡಿದ್ದಾರೆ, 5 ವರ್ಷ ನಮ್ಮ ಸರ್ಕಾರ ಇರಲಿದೆ. ನಮ್ಮ ಸರ್ಕಾರ ಜನರ ಪರವಾಗಿ ಕೆಲಸ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ನಾವೆಲ್ಲರೂ ಕೆಲಸ ಮಾಡುತ್ತೇವೆ. ನನಗೆ ಯಾರ ಬೆಂಬಲ ಬೇಡ, ಯಾರ ಘೋಷಣೆಯೂ ಬೇಡ. ಪಕ್ಷಕ್ಕಾಗಿ ನಾನು ಕೆಲಸ ಮಾಡುತ್ತೇನೆ. ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿರುವ ವಿಷಯ ಎಂದರು.
DKS in Sringeri Mutt : ಹೆಲಿಕಾಪ್ಟರ್​ನಿಂದ ಡಿಕೆಶಿ ಬರ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಘೋಷಣೆ | #TV9D
ಧರ್ಮೋ ರಕ್ಷತಿ ರಕ್ಷಿತಃ. ಯಾರು ಧರ್ಮವನ್ನು ಕಾಯುತ್ತಾರೋ ಅವರನ್ನು ಧರ್ಮ ಕಾಯುತ್ತದೆ. ಶ್ರೀಗಳು ಜವಾಬ್ದಾರಿ ವಹಿಸಿಕೊಂಡು 50 ವರ್ಷ ಪೂರೈಸಿದ್ದಾರೆ. ಯಾವುದೇ ರಾಜಕೀಯಕ್ಕೆ ಹೋಗದೆ ಶ್ರೀಗಳು ಧರ್ಮ ಉಳಿಸಿದ್ದಾರೆ. ಶೃಂಗೇರಿ ಶಾರದಾ ಪೀಠದ ಮೇಲೆ ನನಗೆ ವಿಶೇಷವಾದ ನಂಬಿಕೆ ಇದೆ. ನಾನು ಸರ್ಕಾರದ ಪರ ಹಾಗೂ ವೈಯಕ್ತಿಕವಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು, ನಾನು ಪೂಜೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ, ಅದರಲ್ಲಿಯೂ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಡಿನ್ನರ್ ಪಾಲಿಟಿಕ್ಸ್ ಹಾಗೂ ಇತರ ಬೆಳವಣಿಗೆಗಳ ಮಧ್ಯೆಯೇ ಬೆಂಬಲಿಗರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆಗಳನ್ನು ಕೂಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಸಿಟಿ ರವಿ ಡ್ರಾಮಾ ಮಾಸ್ಟರ್: ಡಿಕೆ ಶಿವಕುಮಾರ್

ಬಿಜೆಪಿ ಎಂಎಲ್​ಸಿ ಸಿಟಿ ರವಿಗೆ ಬೆದರಿಕೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರೊಬ್ಬ ಡ್ರಾಮಾ ಮಾಸ್ಟರ್ ಎಂದರು. ಮಾತನಾಡಿರುವ ಬಗ್ಗೆ ಆತ್ಮಸಾಕ್ಷಿ ಇರಬೇಕು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಮಾಡಿದರೆ ಇದಕ್ಕೆ ಕೊನೆ ಇಲ್ಲ. ಸಿಟಿ ರವಿ ಹಾಗೆ ಮಾತನಾಡಬಾರದಿತ್ತು ಎಂದು ಬಿಜೆಪಿಗರೇ ಹೇಳಿದ್ದಾರೆ. ತಪ್ಪಾಯ್ತು ಅಂದಿದ್ದರೆ ಅಲ್ಲಿಗೆ ಮುಗಿಯುತ್ತಿತ್ತು ಎಂದು ಶಿವಕುಮಾರ್ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:21 pm, Sat, 11 January 25

Loading...
Unable to load recommendations.
Follow Us