AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನಲ್ಲಿ ಹೆಚ್ಚಾದ ನಿಧಿಗಳ್ಳರು; ಕ್ರಮಕ್ಕೆ ಚಿತ್ರದುರ್ಗ ಜನರ ಆಗ್ರಹ

ಭಕ್ತರು ವಿಶೇಷವಾಗಿ ಜಾತ್ರೆಯನ್ನು ಆಚರಿಸುತ್ತಾರೆ. ಆದರೆ ಇಂತಹ ಅಪರೂಪದ ಪುಣ್ಯಸ್ಥಳದ ಮೇಲೆ ನಿಧಿಗಳ್ಳರ ಕೆಂಗಣ್ಣು ಬಿದ್ದಿದೆ. ಗಾದ್ರಿ ಪಾಲನಾಯಕ ಹುಲಿ ಜೊತೆ ಕಾದಾಡುವ ವೇಳೆ ಕೊಡಲಿ ಇದೇ ಪ್ರದೇಶದಲ್ಲಿ ಉಳಿದಿದೆ ಎಂಬ ಪ್ರತೀತಿ ಇದೆ.

ಕೋಟೆನಾಡಿನಲ್ಲಿ ಹೆಚ್ಚಾದ ನಿಧಿಗಳ್ಳರು; ಕ್ರಮಕ್ಕೆ ಚಿತ್ರದುರ್ಗ ಜನರ ಆಗ್ರಹ
ಗಾದ್ರಿ ಪಾಲನಾಯಕನ ಸಮಾಧಿ
sandhya thejappa
|

Updated on: Mar 17, 2021 | 12:46 PM

Share

ಚಿತ್ರದುರ್ಗ: ಕೋಟೆನಾಡಿನಲ್ಲಿ ಅನೇಕ ಐತಿಹಾಸಕ ಸ್ಮಾರಕಗಳಿವೆ. ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ನಾಯಕರ ಸಮಾಧಿ ಸ್ಮಾರಕಗಳಿವೆ. ಆದರೆ ಪುಣ್ಯಸ್ಥಳಗಳೂ ಕೂಡಾ ನಿಧಿಗಳ್ಳರ ಹಾವಳಿಯಿಂದಾಗಿ ವಿರೂಪಗೊಳ್ಳುತ್ತಿದ್ದು, ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ವಾಲ್ಮೀಕಿ ನಾಯಕ ಸಮುದಾಯದ ಸಾಂಸ್ಕೃತಿಕ ನಾಯಕ ಗಾದ್ರಿ ಪಾಲನಾಯಕ ಆಂಧ್ರದಿಂದ ಚಿತ್ರದುರ್ಗದ ಮಿಂಚೇರಿಯತ್ತ ಸಾಗಿ ಬಂದಿದ್ದನು. ಆಗ ಕಾಡಿನಲ್ಲಿ ಗಾದ್ರಿ ಪಾಲನಾಯಕ ಹುಲಿ ಜೊತೆ ಕಾದಾಡುತ್ತಾನೆಂಬ ಕಥೆಯಿದೆ. ಅಂತೆಯೇ ಗಾದ್ರಿ ಪಾಲನಾಯಕನ ಸಮಾಧಿ, ಗಾದ್ರಿ ಪಾಲನಾಯಕ ಸಾಕಿದ್ದ ಹಸುವಿನ ಸಮಾಧಿ ಹಾಗೂ ಹುಲಿಯ ಸಮಾಧಿ ಡಿ.ಮೆದಕೇರಿಪುರ ಗ್ರಾಮದ ಬಳಿಯ ಮಿಂಚೇರಿ ಗುಡ್ಡಗಾಡು ಪ್ರದೇಶದಲ್ಲಿದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ವರ್ಷಕ್ಕೊಮ್ಮೆ ನಾಯಕ ಸಮುದಾಯದ ಸಾವಿರಾರು ಜನ ಈ ಗಾದ್ರಿ ಪಾಲನಾಯಕನ ಸಮಾಧಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಭಕ್ತರು ವಿಶೇಷವಾಗಿ ಜಾತ್ರೆಯನ್ನು ಆಚರಿಸುತ್ತಾರೆ. ಆದರೆ ಇಂತಹ ಅಪರೂಪದ ಪುಣ್ಯಸ್ಥಳದ ಮೇಲೆ ನಿಧಿಗಳ್ಳರ ಕೆಂಗಣ್ಣು ಬಿದ್ದಿದೆ. ಗಾದ್ರಿ ಪಾಲನಾಯಕ ಹುಲಿ ಜೊತೆ ಕಾದಾಡುವ ವೇಳೆ ಕೊಡಲಿ ಇದೇ ಪ್ರದೇಶದಲ್ಲಿ ಉಳಿದಿದೆ ಎಂಬ ಪ್ರತೀತಿ ಇದೆ. ಹೀಗಾಗಿ, ನಿಧಿಗಳ್ಳರು ಪದೇಪದೇ ಗಾದ್ರಿ ಪಾಲನಾಯಕನ ಸಮಾಧಿ ಅಗೆದು ವಿರೂಪಗೊಳಿಸುತ್ತಿದ್ದಾರೆ. ಆ ಮೂಲಕ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಆಗಿದೆಯಾಗಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಾದ್ರಿ ಪಾಲನಾಯಕನ ಸಮಾಧಿಗೆ ನಮಸ್ಕರಿಸುತ್ತಿರುವ ಭಕ್ತರು

ಗಾದ್ರಿ ಪಾಲನಾಯಕನ ಸಮಾಧಿ, ಗಾದ್ರಿ ಪಾಲನಾಯಕ ಸಾಕಿದ್ದ ಹಸುವಿನ ಸಮಾಧಿ ಹಾಗೂ ಹುಲಿಯ ಸಮಾಧಿ ಡಿ.ಮೆದಕೇರಿಪುರ ಗ್ರಾಮದ ಬಳಿಯ ಮಿಂಚೇರಿ ಗುಡ್ಡಗಾಡು ಪ್ರದೇಶದಲ್ಲಿದೆ ಎಂಬ ನಂಬಿಕೆ ಜನರಲ್ಲಿದೆ

ಭಕ್ತರ ಆಗ್ರಹ ಗಾದ್ರಿ ಪಾಲನಾಯಕ, ಹುಲಿ ಸಮಾಧಿ ಹಾಗೂ ಮಿಂಚೇರಿ ಗಂಗಾಜಲ ದೊರಕುವ ಪುಣ್ಯಸ್ಥಳವೂ ಇದೆ. ಅಂತೆಯೇ ಈ ಪುಣ್ಯಭೂಮಿಗೆ ಬಂದರೆ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎಂಬ ನಂಬಿಕ ಜನರಲ್ಲಿದೆ. ಇಂತಹ ಅಪರೂಪದ ಪ್ರದೇಶಕ್ಕೆ ನಿಧಿಗಳ್ಳರ ಕಾಟ ಶುರುವಾಗಿದೆ. ಈಗಾಗಲೇ ನಾಲ್ಕಾರು ಸಲ ಸಮಾಧಿ ಅಗೆದು ನಿಧಿಗಳ್ಳರು ವಿರೂಪಗೊಳಿಸಿ ಭಕ್ತರ ಮನಸ್ಸಿಗೆ ಘಾಸಿ ಮಾಡಿದ್ದಾರೆ. ಇದರಿಂದ ಜಿಲ್ಲಾಡಳಿತ ಈ ಐತಿಹಾಸಿಕ ಸ್ಥಳದ ಬಗ್ಗೆ ಗಮನಹರಿಸಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಭಕ್ತರು ಆಗ್ರಹಿಸುತ್ತಿದ್ದಾರೆ.

ಈ ಪುಣ್ಯಭೂಮಿಗೆ ಬಂದರೆ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎಂಬ ನಂಬಿಕ ಜನರಲ್ಲಿದೆ

ಇದನ್ನೂ ಓದಿ

ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನಗಳ ಹಿಡಿದಿದ್ದಾರೆ

PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ