AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?

ಅಧಿಕಾರ ಬಿಟ್ಟುಕೊಟ್ರೂ ಸಿದ್ದರಾಜು ತಮ್ಮ ಅಧಿಕೃತ ಮೊಬೈಲ್​ ಸಿಮ್ ಕಾರ್ಡ್​ನ ಹಸ್ತಾಂತರಿಸಿಲ್ಲ ಎಂದು ಹೇಳಲಾಗಿದೆ. ಜೊತೆಗೆ, ಕಳೆದ 2 ತಿಂಗಳಿಂದ ಆ ನಂಬರ್ ಸ್ವಿಚ್ ಆಫ್​ ಕೂಡ ಆಗಿದೆಯಂತೆ.

ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?
ದೇವನಹಳ್ಳಿ ಪೊಲೀಸ್​ ಠಾಣೆ
KUSHAL V
| Updated By: ಸಾಧು ಶ್ರೀನಾಥ್​|

Updated on: Nov 30, 2020 | 11:11 AM

Share

ದೇವನಹಳ್ಳಿ: ಇಬ್ಬರು ಖಾಕಿ ಅಧಿಕಾರಿಗಳು ಶೀತಲ ಸಮರದಿಂದ ಸಾರ್ವಜನಿಕರು ಕಷ್ಟ ಅನುಭವಿಸುತ್ತಿರುವ ಘಟನೆ ದೇವನಹಳ್ಳಿ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಕಳೆದ ಒಂದೂವರೆ ವರ್ಷದಿಂದ ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜುರನ್ನು ಕಳೆದ ಎರಡು ತಿಂಗಳ ಹಿಂದೆ ಕೆ.ಜಿ.ಹಳ್ಳಿ ಗಲಾಟೆ ಬಂದೋಬಸ್​ಗೆಂದು ನಿಯೋಜಿಸಲಾಗಿತ್ತು. ಜೊತೆಗೆ, ದೇವನಹಳ್ಳಿ ಠಾಣೆಗೆ ಪ್ರಭಾರ ಇನ್​ಸ್ಪೆಕ್ಟರ್​ ಆಗಿ ಮೊಹಮ್ಮದ್ ರಫೀಕ್​ರನ್ನ ಹಿರಿಯ ಅಧಿಕಾರಿಗಳು ನೇಮಕ ಮಾಡಿದ್ದರು.

ಆದರೆ, ಅಧಿಕಾರ ಬಿಟ್ಟುಕೊಟ್ರೂ ಸಿದ್ದರಾಜು ತಮ್ಮ ಅಧಿಕೃತ ಮೊಬೈಲ್​ ಸಿಮ್ ಕಾರ್ಡ್​ನ ಹಸ್ತಾಂತರಿಸಿಲ್ಲ ಎಂದು ಹೇಳಲಾಗಿದೆ. ಜೊತೆಗೆ, ಕಳೆದ 2 ತಿಂಗಳಿಂದ ಆ ನಂಬರ್ ಸ್ವಿಚ್ ಆಫ್​ ಕೂಡ ಆಗಿದೆಯಂತೆ. ಇತ್ತ, ಸಿಮ್ ಬಗ್ಗೆ ಕೇಳಿದ್ರೆ ನಾನು ಆವತ್ತೇ ಮೊಹಮ್ಮದ್ ರಫೀಕ್​ಗೆ ಕೊಟ್ಟಿದ್ದೀ‌ನಿ ಎಂದು ಇನ್​​ಸ್ಪೆಕ್ಟರ್ ಸಿದ್ದರಾಜು ಹೇಳುತ್ತಿದ್ದಾರೆ. ಆದ್ರೆ ನನಗೆ ಸಿಮ್ ಕೊಟ್ಟೇ ಇಲ್ಲ.. ಅವರ‌ ಬಳಿಯೇಯಿದೆ ಅಂತಾ ಇನ್​ಸ್ಪೆಕ್ಟರ್​ ರಫೀಕ್​ ವಾದ.

ಈ ನಡುವೆ, ಜನ ತಮ್ಮ ಸಂಕಷ್ಟ ಹೇಳಿಕೊಳ್ಳಲು ಠಾಣೆಯ ಅಧಿಕೃತ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ರೆ ನೋ ರೆಸ್ಪಾನ್ಸ್. ಹಾಗಾಗಿ, ನಮ್ಮ ಗೋಳು ಕೇಳೋರು ಯಾರು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳ ಶೀತಲ ಸಮರದ ನಡುವೆ ಸಿಲುಕಿ ನಾವು ಕಷ್ಟ ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ.. ಒಂದೇ ರೂಂನಲ್ಲಿ 2 ಚೇರ್​ ಹಾಕಿ ಕುಳಿತ ಅಧಿಕಾರಿಗಳು!

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!