AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?

ಅಧಿಕಾರ ಬಿಟ್ಟುಕೊಟ್ರೂ ಸಿದ್ದರಾಜು ತಮ್ಮ ಅಧಿಕೃತ ಮೊಬೈಲ್​ ಸಿಮ್ ಕಾರ್ಡ್​ನ ಹಸ್ತಾಂತರಿಸಿಲ್ಲ ಎಂದು ಹೇಳಲಾಗಿದೆ. ಜೊತೆಗೆ, ಕಳೆದ 2 ತಿಂಗಳಿಂದ ಆ ನಂಬರ್ ಸ್ವಿಚ್ ಆಫ್​ ಕೂಡ ಆಗಿದೆಯಂತೆ.

ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?
ದೇವನಹಳ್ಳಿ ಪೊಲೀಸ್​ ಠಾಣೆ
KUSHAL V
| Edited By: ಸಾಧು ಶ್ರೀನಾಥ್​|

Updated on: Nov 30, 2020 | 11:11 AM

Share

ದೇವನಹಳ್ಳಿ: ಇಬ್ಬರು ಖಾಕಿ ಅಧಿಕಾರಿಗಳು ಶೀತಲ ಸಮರದಿಂದ ಸಾರ್ವಜನಿಕರು ಕಷ್ಟ ಅನುಭವಿಸುತ್ತಿರುವ ಘಟನೆ ದೇವನಹಳ್ಳಿ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಕಳೆದ ಒಂದೂವರೆ ವರ್ಷದಿಂದ ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜುರನ್ನು ಕಳೆದ ಎರಡು ತಿಂಗಳ ಹಿಂದೆ ಕೆ.ಜಿ.ಹಳ್ಳಿ ಗಲಾಟೆ ಬಂದೋಬಸ್​ಗೆಂದು ನಿಯೋಜಿಸಲಾಗಿತ್ತು. ಜೊತೆಗೆ, ದೇವನಹಳ್ಳಿ ಠಾಣೆಗೆ ಪ್ರಭಾರ ಇನ್​ಸ್ಪೆಕ್ಟರ್​ ಆಗಿ ಮೊಹಮ್ಮದ್ ರಫೀಕ್​ರನ್ನ ಹಿರಿಯ ಅಧಿಕಾರಿಗಳು ನೇಮಕ ಮಾಡಿದ್ದರು.

ಆದರೆ, ಅಧಿಕಾರ ಬಿಟ್ಟುಕೊಟ್ರೂ ಸಿದ್ದರಾಜು ತಮ್ಮ ಅಧಿಕೃತ ಮೊಬೈಲ್​ ಸಿಮ್ ಕಾರ್ಡ್​ನ ಹಸ್ತಾಂತರಿಸಿಲ್ಲ ಎಂದು ಹೇಳಲಾಗಿದೆ. ಜೊತೆಗೆ, ಕಳೆದ 2 ತಿಂಗಳಿಂದ ಆ ನಂಬರ್ ಸ್ವಿಚ್ ಆಫ್​ ಕೂಡ ಆಗಿದೆಯಂತೆ. ಇತ್ತ, ಸಿಮ್ ಬಗ್ಗೆ ಕೇಳಿದ್ರೆ ನಾನು ಆವತ್ತೇ ಮೊಹಮ್ಮದ್ ರಫೀಕ್​ಗೆ ಕೊಟ್ಟಿದ್ದೀ‌ನಿ ಎಂದು ಇನ್​​ಸ್ಪೆಕ್ಟರ್ ಸಿದ್ದರಾಜು ಹೇಳುತ್ತಿದ್ದಾರೆ. ಆದ್ರೆ ನನಗೆ ಸಿಮ್ ಕೊಟ್ಟೇ ಇಲ್ಲ.. ಅವರ‌ ಬಳಿಯೇಯಿದೆ ಅಂತಾ ಇನ್​ಸ್ಪೆಕ್ಟರ್​ ರಫೀಕ್​ ವಾದ.

ಈ ನಡುವೆ, ಜನ ತಮ್ಮ ಸಂಕಷ್ಟ ಹೇಳಿಕೊಳ್ಳಲು ಠಾಣೆಯ ಅಧಿಕೃತ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ರೆ ನೋ ರೆಸ್ಪಾನ್ಸ್. ಹಾಗಾಗಿ, ನಮ್ಮ ಗೋಳು ಕೇಳೋರು ಯಾರು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳ ಶೀತಲ ಸಮರದ ನಡುವೆ ಸಿಲುಕಿ ನಾವು ಕಷ್ಟ ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ.. ಒಂದೇ ರೂಂನಲ್ಲಿ 2 ಚೇರ್​ ಹಾಕಿ ಕುಳಿತ ಅಧಿಕಾರಿಗಳು!

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ