AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಜನಾ ಸತ್ಸಂಗ ಯಾತ್ರೆ: ಶಿವನಾಮ ಸ್ಮರಿಸುತ್ತಾ ತಾಳ-ಮದ್ದಳೆ ಸದ್ದಿಗೆ ತಕ್ಕಂತೆ ಹೆಜ್ಜೆ

ದಕ್ಷಿಣ ಕನ್ನಡ: ಆಹಾ.. ಎಂಥಾ ಹಿತವೆನಿಸುವ ಹಾಡು. ತಾಳ-ಮದ್ದಳೆ ಸದ್ದ, ತಂದನಾನಾ ತಂದನಾನಾ ಸಾಂಗ್​ಗೆ ತಾಳಕ್ಕೆ ತಕ್ಕಂತೆ ಹೆಜ್ಜೆ. ಹೆಣ್ಣು ಮಕ್ಕಳಿಂದ ಹನುಮನ ಜಪ.. ಭಜನೆ ಸದ್ದು. ಕಳಸ ಹಿಡಿದು ಮಹಿಳೆಯರ ಹೆಜ್ಜೆ. ಎಲ್ಲೆಲ್ಲೂ ಮಂತ್ರ ಪಠಣ, ರಾರಾಜಿಸಿದ ಭಕ್ತಿ-ಭಾವ. ಸಾಮೂಹಿಕ ಭಜನೆಗೆ ಸಾಕ್ಷಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆ ಮೈದಾನ. ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್, ಭಜನಾ ಸತ್ಸಂಗ ಸಮಿತಿ ವತಿಯಿಂದ ಸಾಮೂಹಿಕ ಭಜನಾ ಸತ್ಸಂಗ ಕಾರ್ಯಕ್ರಮ […]

ಭಜನಾ ಸತ್ಸಂಗ ಯಾತ್ರೆ: ಶಿವನಾಮ ಸ್ಮರಿಸುತ್ತಾ ತಾಳ-ಮದ್ದಳೆ ಸದ್ದಿಗೆ ತಕ್ಕಂತೆ ಹೆಜ್ಜೆ
Follow us
ಸಾಧು ಶ್ರೀನಾಥ್​
|

Updated on: Feb 09, 2020 | 3:38 PM

ದಕ್ಷಿಣ ಕನ್ನಡ: ಆಹಾ.. ಎಂಥಾ ಹಿತವೆನಿಸುವ ಹಾಡು. ತಾಳ-ಮದ್ದಳೆ ಸದ್ದ, ತಂದನಾನಾ ತಂದನಾನಾ ಸಾಂಗ್​ಗೆ ತಾಳಕ್ಕೆ ತಕ್ಕಂತೆ ಹೆಜ್ಜೆ. ಹೆಣ್ಣು ಮಕ್ಕಳಿಂದ ಹನುಮನ ಜಪ.. ಭಜನೆ ಸದ್ದು. ಕಳಸ ಹಿಡಿದು ಮಹಿಳೆಯರ ಹೆಜ್ಜೆ. ಎಲ್ಲೆಲ್ಲೂ ಮಂತ್ರ ಪಠಣ, ರಾರಾಜಿಸಿದ ಭಕ್ತಿ-ಭಾವ.

ಸಾಮೂಹಿಕ ಭಜನೆಗೆ ಸಾಕ್ಷಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆ ಮೈದಾನ. ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್, ಭಜನಾ ಸತ್ಸಂಗ ಸಮಿತಿ ವತಿಯಿಂದ ಸಾಮೂಹಿಕ ಭಜನಾ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ರು.

ಭಜನಾ ಸಂಕೀರ್ತನಾ ಯಾತ್ರೆ ಸಂಪನ್ನ: ರಸ್ತೆಯುದ್ದಕ್ಕೂ ಭಜನಾ ಸಂಕೀರ್ತನಾ ಯಾತ್ರೆ ಸಂಪನ್ನಗೊಂಡಿತ್ತು. ಭಜನೆ ಗೀತೆಗಳನ್ನ ಹಾಡುತ್ತಾ, ಶಿವನಾಮ ಸ್ಮರಿಸುತ್ತಾ ಜನರು ಹೆಜ್ಜೆ ಹಾಕಿದ್ರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಳಾದ ಡಾ.ವೀರೇಂದ್ರ ಹೆಗ್ಗಡೆಯವರು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಈ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ರು.

ಇನ್ನು ಭಜನಾ ಸತ್ಸಂಗ ಕಾರ್ಯಕ್ರಮದಲ್ಲಿ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ನಡೀತು. ಈ ಭಜನಾ ಕಾರ್ಯಕ್ರಮಕ್ಕೆ ಬೆಳ್ತಂಗಡಿ, ಕಾರ್ಕಳ, ಸುಳ್ಯ, ಕಾಸರಗೋಡು, ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿದ್ರು. ಕೇರಳದ ಭಜನಾ ತಂಡಗಳು ನೆರೆದಿದ್ದವರನ್ನ ರಂಜಿಸ್ತು. ಮಕ್ಕಳ ನೃತ್ಯ.. ಹೆಣ್ಣು ಮಕ್ಕಳು ವೇದಿಕೆ ಮೇಲೆ ಹೆಜ್ಜೆ ಹಾಕ್ತಿದ್ದನ್ನ ಕಂಡು ಜನರು ಖುಷ್ ಆದ್ರು.

ಒಟ್ನಲ್ಲಿ ಸದಾ ಒಂದಿಲ್ಲೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಜ್ಜೆ ಇಡ್ತಿದೆ. ಇಷ್ಟು ದಿನ ಜಮೀನು ಕೆಲ್ಸ.. ಆಫೀಸು ಅಂಥಾ ಬ್ಯುಸಿಯಾಗಿದ್ದ ಕರಾವಳಿ ಜನರು ಭಜನೆ, ಸಂಕೀರ್ತನೆ ಕೇಳಿ ಸಂತಸಗೊಂಡ್ರು.

Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
"ಮೋದಿ ಹೆಸರು ಹೇಳಲೂ ಹೆದರುವ ಹೇಡಿ ನಮ್ಮ ಪ್ರಧಾನಿ": ಪಾಕ್​ ಸಂಸದ ವ್ಯಂಗ್ಯ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ