Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ನೋಂದಣಿ ವೇಳೆ ‘ಥಂಬ್’ ನೀಡುವಾಗ ಎಚ್ಚರ: ಸರ್ಕಾರಿ ಕಚೇರಿಯಲ್ಲೇ ನಿಮ್ಮ ಬ್ಯಾಂಕ್​​​​ ಖಾತೆಗೆ ಬೀಳಬಹುದು ಕನ್ನ!

ಜನರ ಬ್ಯಾಂಕ್​​ ಖಾತೆಗೆ ಕನ್ನ ಹಾಕಲು ಖದೀಮರು ನಾನಾ ತಂತ್ರ ಉಪಯೋಗಿಸೋದು ಕೇಳಿರುತ್ತೀರಿ. ಆದ್ರೆ, ಆಸ್ತಿ ನೋಂದಣಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಜನರ ಖಾತೆಗೇ ಕನ್ನ ಹಾಕಲಾಗುತ್ತಿದೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ. ಬಯೋಮೆಟ್ರಿಕ್ ಥಂಬ್​ ನೀಡಿದರೆ ಸಾಕು ನಿಮ್ಮ ಬ್ಯಾಂಕ್​​ ಖಾತೆಯಲ್ಲಿರುವ ಹಣ ಡಮಾರ್ ಆಗುತ್ತೆ. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೆಯುತ್ತಿದ್ದು, ಜನ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಅದ್ಯಾಗೆ ಅಂತೀರಾ? ಈ ಸ್ಟೋರಿ ನೋಡಿ..

ಆಸ್ತಿ ನೋಂದಣಿ ವೇಳೆ ‘ಥಂಬ್’ ನೀಡುವಾಗ ಎಚ್ಚರ: ಸರ್ಕಾರಿ ಕಚೇರಿಯಲ್ಲೇ ನಿಮ್ಮ ಬ್ಯಾಂಕ್​​​​ ಖಾತೆಗೆ ಬೀಳಬಹುದು ಕನ್ನ!
ಸಾಂದರ್ಭಿಕ ರಜೆ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on: Sep 24, 2023 | 11:31 AM

ಮಂಗಳೂರು, (ಸೆಪ್ಟೆಂಬರ್ 24): ಹಲವು ಕಾರಣ ಹೇಳಿ ಫೋನ್​ ಮಾಡಿ ಒಟಿಪಿ ಪಡೆದು, ಹಣ ಲಪಟಾಯಿಸುವುದನ್ನು ನೋಡಿರುತ್ತೀರಾ.. ಆದ್ರೆ, ಇಲ್ಲಿ ಫೋನ್ ಬರುವುದಿಲ್ಲ. ಒಟಿಪಿನೂ ಕೊಡಂಗಿಲ್ಲ. ಬಯೋಮೆಟ್ರಿಕ್ ಥಂಬ್​ ನೀಡಿದರೆ ಸಾಕು ನಿಮ್ಮ ಬ್ಯಾಂಕ್​​ ಖಾತೆಯಲ್ಲಿರುವ ಹಣ ಡಮಾರ್ ಆಗುತ್ತೆ. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೆಯುತ್ತಿದ್ದು, ಜನ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಹೌದು..ಮಂಗಳೂರಿನ(Manlauru) ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೆ ಥಂಬ್​ ನೀಡಿದ ಜನರ ಬ್ಯಾಂಕ್​​ ಖಾತೆಯಿಂದ(Bank Account) 10 ರಿಂದ 40 ಸಾವಿರದವರೆಗೂ ಹಣ ವರ್ಗಾವಣೆ ಆಗಿದೆ.

ಅಕ್ಟೋಬರ್ 1 ರಿಂದ ಆಸ್ತಿ ನೊಂದಣಿ ಶುಲ್ಕ ಏರಿಕೆ ಆಗುತ್ತಿದೆ. ಇದರಿಂದ ಜನರು ಮುಗಿಬಿದ್ದು ಆಸ್ತಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಖದೀಮರೂ ಕೂಡ ಹಣ ಮಾಡುವುದಕ್ಕೆ ಸರ್ಕಾರಿ ಕಚೇರಿಯನ್ನೇ ಟಾರ್ಗೆಟ್​​ ಮಾಡ್ಕೊಂಡಿದ್ದಾರೆ. ಆಸ್ತಿ ನೋಂದಣಿಗೆ ಆಧಾರ್​ ಪಡೆಯಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ-2 ಸಾಫ್ಟ್​ವೇರ್​ಗೆ ಥಂಬ್ ನೀಡಬೇಕಾಗುತ್ತದೆ. ಹೀಗೇ ಥಂಬ್ ನೀಡಿದ ಬಳಿಕ ಕಂಪ್ಯೂಟರ್​ನಲ್ಲಿ ಆಧಾರ್ ದಾಖಲೆಗಳು ಪಡೆದು ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಂದುವರೆಯುತ್ತದೆ. ಆದ್ರೆ, ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೆ ಥಂಬ್​ ನೀಡಿದ ಜನರ ಬ್ಯಾಂಕ್​​ ಖಾತೆಯಿಂದ 10 ರಿಂದ 40ಸಾವಿರದವರೆಗೂ ಹಣ ವರ್ಗಾವಣೆ ಆಗಿದೆ. ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆದ್ರೆ, ಪೊಲೀಸರು ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದು, ಏನೂ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಪೊಲೀಸರ ಹೆಸರಿನಲ್ಲಿ ನಕಲಿ ರೈಡ್ ಮಾಡಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್

ಆಸ್ತಿ ನೋಂದಣಿ ಮಾಡಬೇಕಾದ್ರೆ 2 ಬಾರಿ ಥಂಬ್​ ನೀಡಬೇಕಾಗಿದೆ. ಮೊದಲು ಕಾವೇರಿ-2 ಸಾಫ್ಟವೇರ್​ನಲ್ಲಿ. ನಂತರ ಮುದ್ರಾಂಕ ಶುಲ್ಕ ಕಟ್ಟಲು. ಆದ್ರೆ, ಜನರು ಕಾವೇರಿ-2 ಸಾಫ್ಟವೇರ್​ನಲ್ಲಿ ಥಂಬ್ ನೀಡಿದ ತಕ್ಷಣವೇ ಅವರ ಬ್ಯಾಂಕ್​​​ ಖಾತೆಯಿಂದ ಹಣ ವರ್ಗಾವಣೆ ಆಗುತ್ತಿದೆಯಂತೆ. ನಿತ್ಯ ಹತ್ತಾರು ಜನರು ಹಣ ಕಳೆದುಕೊಳ್ಳುತ್ತಿದ್ರೂ ಸಬ್ ರಿಜಿಸ್ಟ್ರಾರ್ ಅಧಿಕಾರಿಯಿಂದಾಗಲಿ, ಪೊಲೀಸರಿಂದಾಗಲಿ ಪರಿಹಾರ ಸಿಕ್ಕಿಲ್ಲ.

ಕಾವೇರಿ 2 ಸಾಫ್ಟ್​ವೇರ್​ ಸಂಪೂರ್ಣ ಕಂಟ್ರೋಲ್​ ಸರ್ಕಾರದ ಕೈಲೇ ಇದ್ದು, ಬೆಂಗಳೂರಿನಿಂದಲೇ ಎಲ್ಲ ನಿಯಂತ್ರಣ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ಸರ್ವರ್​ಗೇ ಖದೀಮರು ಕನ್ನ ಹಾಕಿದ್ದಾರಾ ಅನ್ನೋ ಅನುಮಾನ ಕಾಡಿದ್ದು.. ತಕ್ಷಣ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ