AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಯಶವಂತಪುರ-ಶಿವಮೊಗ್ಗ ರೈಲು ಪ್ರಯಾಣಿಕರೂ ವಿಸ್ಟಾಡೋಮ್​ ಕೋಚ್​ನಲ್ಲಿ ಪ್ರಯಾಣಿಸಬಹುದು: ಡಿ.25ರಿಂದಲೇ ಆರಂಭ

ಬೆಂಗಳೂರನಿಂದ ಹೊರಡುವ ಯಶವಂತಪುರ -ಶಿವಮೊಗ್ಗ ಇಂಟರ್​ಸಿಟಿ ಎಕ್ಸ್​ಪ್ರೆಸ್​ನ ಎರಡು ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಇರುವ ವಿಸ್ಟಾಡೋಮ್​ ಕೋಚ್​ ಅಳವಡಿಸಲು ನಿರ್ಧರಿಸಿದೆ.

ಇನ್ನು ಯಶವಂತಪುರ-ಶಿವಮೊಗ್ಗ ರೈಲು ಪ್ರಯಾಣಿಕರೂ ವಿಸ್ಟಾಡೋಮ್​ ಕೋಚ್​ನಲ್ಲಿ ಪ್ರಯಾಣಿಸಬಹುದು: ಡಿ.25ರಿಂದಲೇ ಆರಂಭ
ವಿಸ್ಟಾಡೋಮ್​ ಕೋಚ್​
Follow us
TV9 Web
| Updated By: Pavitra Bhat Jigalemane

Updated on:Dec 24, 2021 | 4:03 PM

ನೈರುತ್ಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಶವಂತರಪುರದಿಂದ ಶಿವಮೊಗ್ಗಕ್ಕೆ ತೆರಳುವ ಎರಡು ರೈಲಿಗೆ ಎಸಿ ವಿಸ್ಟಾಡೋಮ್​ ಕೋಚ್​ ಅಳವಡಿಸಲು ನಿರ್ಧರಿಸಿದೆ. ಬೆಂಗಳೂರಿನಿಂದ ಹೊರಡುವ ಯಶವಂತಪುರ -ಶಿವಮೊಗ್ಗ ಇಂಟರ್​ಸಿಟಿ ಎಕ್ಸ್​ಪ್ರೆಸ್​ನ ಎರಡು ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಇರುವ ವಿಸ್ಟಾಡೋಮ್​ ಕೋಚ್​ ಅಳವಡಿಸಲು ನಿರ್ಧರಿಸಿದೆ. ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.

16579 ಸಂಖ್ಯೆಯ ಯಶವಂತಪುರದಿಂದ ಶಿವಮೊಗ್ಗಕ್ಕೆ ಹೋಗುವ ರೈಲಿಗೆ ಒಂದು ಎಸಿ ಇರುವ ವಿಸ್ಟಾಡೋಮ್​ ಕೋಚ್​ ಅಳವಡಿಸುತ್ತಿದೆ. ಡಿಸೆಂಬರ್​ 25ರಿಂದ  2022ರ ಮಾರ್ಚ್ 31ರವರೆಗೆ ಈ ವಿಸ್ಟಾಡೋಮ್​ ಕೋಚ್ ಇರುವ ರೈಲು ಯಶವಂತಪುರದಿಂದ ಶಿವಮೊಗ್ಗಕ್ಕೆ ಚಲಿಸಲಿದೆ.

ಅದೇ ರೀತಿ 16580 ಸಂಖ್ಯೆಯ ಒಂದು ವಿಸ್ಟಾಡೋಮ್​ ಕೋಚ್​ ಹೊಂದಿರುವ ರೈಲು ಡಿಸೆಂಬರ್​ 25ರಿಂದ  2022ರ ಮಾರ್ಚ್ 31ರವರೆಗೆ ಶಿವಮೊಗ್ಗದಿಂದ ಯಶವಂತಪುರಕ್ಕೆ ಸಂಚರಿಸಲಿದೆ ಎಂದು ನೈರುತ್ವ ರೈಲ್ವೆ ಇಲಾಖೆ ತಿಳಿಸಿದೆ.

ವಿಸ್ಟಾಡೋಮ್​ ಕೋಚ್ ನಲ್ಲಿ ಸೀಟ್​ಗಳು​ 180 ಡಿಗ್ರಿ ಸುತ್ತಳತೆಯಲ್ಲೂ ತಿರುಗುತ್ತದೆ. ರೈಲಿನಲ್ಲಿ ಕುಳಿತ ಪ್ರಯಾಣಿಕರಿಕೆ ಸುತ್ತಲೂ ಇರುವ ಹಸಿರು ಪರಿಸರ, ವಾತಾವರಣವನ್ನು ಆನಂದಿಸಲು ಅನುಕೂಲವಾಗುವಂತೆ ವ್ಯವಸ್ಥೆ ಇರುತ್ತದೆ. ಪ್ರತೀ ಕೋಚ್​​ 44 ಆಸನಗಳನ್ನು ಹೊಂದಿದ್ದು ವಿಶಾಲವಾದ ಗ್ಲಾಸ್​ನ ಕಿಟಕಿಗಳನ್ನು ಹೊಂದಿರುತ್ತದೆ.

ಈಗಾಗಲೇ ಯಶವಂತಪುರದಿಂದ ಮಂಗಳೂರಿಗೆ ಚಲಿಸುವ ರೈಲಿಗೆ ವಿಸ್ಟಾಡೋಮ್​ ಕೋಚ್​ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು  ಸುಂದರ ಪ್ರಕೃತಿಯನ್ನು ಆಸ್ವಾದಿಸುತ್ತಾ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ:

ಬೆಂಗಳೂರು: ಹೆಬ್ಬಾಳದ ಮಸೀದಿ ಬಳಿ ಸಿಲಿಂಡರ್ ಸ್ಫೋಟ; ಯಾವುದೇ ಪ್ರಾಣಾಪಾಯವಾಗಿಲ್ಲ- ಘಟನೆಯ ವಿಡಿಯೋ ಇಲ್ಲಿದೆ

Published On - 3:59 pm, Fri, 24 December 21

ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ