AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ವಿದ್ಯುತ್​ಗೆ ಕಾಡಾನೆ ಬಲಿ: ಆರೋಪಿಗಳಿಗಾಗಿ ಅರಣ್ಯಾಧಿಕಾರಿಗಳ ಹುಡುಕಾಟ

ಚಾಮರಾಜನಗರ ಜಿಲ್ಲೆಯ ಭಾಗ್ಯಮ್ಮ ಎಂಬುವರ ಜಮೀನಿನಲ್ಲಿ ಆನೆ ಮೃತಪಟ್ಟಿದ್ದು, ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್​ ತಂತಿಯೇ ಕಾಡಾನೆ ಸಾವಿಗೆ ಕಾರಣ ಎನ್ನುವುದು ತಿಳಿದು ಬಂದಿದೆ.

ಅಕ್ರಮ ವಿದ್ಯುತ್​ಗೆ ಕಾಡಾನೆ ಬಲಿ: ಆರೋಪಿಗಳಿಗಾಗಿ ಅರಣ್ಯಾಧಿಕಾರಿಗಳ ಹುಡುಕಾಟ
ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ಕಾಡಾನೆ
preethi shettigar
| Edited By: |

Updated on: Jan 31, 2021 | 1:55 PM

Share

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಅಂಡಿಪಾಳ್ಯ ಬಳಿಯ ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯಲ್ಲಿ ವಿದ್ಯುತ್​ ತಂತಿ ತುಳಿದು ಸುಮಾರು 30 ವರ್ಷದ ಕಾಡಾನೆ ಸಾವಿಗೀಡಾಗಿದೆ.

ಚಾಮರಾಜನಗರ ಜಿಲ್ಲೆಯ ಭಾಗ್ಯಮ್ಮ ಎಂಬುವರ ಜಮೀನಿನಲ್ಲಿ ಆನೆ ಮೃತಪಟ್ಟಿದ್ದು, ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್​ ತಂತಿಯೇ ಕಾಡಾನೆ ಸಾವಿಗೆ ಕಾರಣ ಎನ್ನುವುದು ತಿಳಿದು ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ.

ಮೃತಪಟ್ಟ ಕಾಡಾನೆ

ಕರ್ನಾಟಕ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಆನೆಗಳ ಅನುಮಾನಸ್ಪದ ಸಾವು..

Follow Us