AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು

ಮಹಾಮಾರಿ ಹಿನ್ನೆಲೆ ಲಾಕ್ಡೌನ್ ಹೇರಿದ್ದರೂ ನಿಯಮ ಉಲ್ಲಂಘಿಸಿ ಕೆಲ ಪ್ರವಾಸಿಗರು ಮಡಿಕೇರಿ ಪ್ರವೇಶಿಸಿ ಝೂಮ್ ಹೋಂಸ್ಟೇನಲ್ಲಿ ತಂಗಿದ್ದರು. ಮಾಹಿತಿ ತಿಳಿದ ಪೊಲೀಸರು ಹೋಂಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ 10 ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಲಾಕ್​ಡೌನ್  ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು
ಲಾಕ್ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು
TV9 Web
| Edited By: |

Updated on:Jun 28, 2021 | 8:33 AM

Share

ಮಡಿಕೇರಿ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕೊಡಗು ಜಿಲ್ಲಾಡಳಿತ ಹರಸಾಹಸ ಪಡ್ತಿದೆ. ಈ ನಡುವೆ ಹೊರಗಿನಿಂದ ಜಿಲ್ಲೆಗೆ ಬರುವವರ ಸಂಖ್ಯೆ ಮಾತ್ರ ದಿನೇದಿನೆ ಹೆಚ್ಚಾಗ್ತಿದೆ. ಪ್ರವಾಸಿ ತಾಣಗಳು ಬಂದ್ ಆಗಿದ್ರೂ ಕೂಡಾ ಕೊಡಗಿನಲ್ಲಿ ಪ್ರವಾಸಿಗರ ಓಡಾಟ ಮಾತ್ರ ನಿಂತಿಲ್ಲ. ಇದು ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆನೋವು ತಂದಿದೆ. ಕೊರೊನಾ ಲಾಕ್ಡೌನ್ ಉಲ್ಲಂಘಿಸಿ ಬೆಂಗಳೂರಿನಿಂದ ಮಡಿಕೇರಿಗೆ ಮೋಜು ಮಸ್ತಿ ಮಾಡಲು ಬಂದಿದ್ದ ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಾಗಿದೆ. ಮಡಿಕೇರಿ‌ನಗರ ಪೊಲೀಸರು 10 ಪ್ರವಾಸಿಗರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಆಶ್ರಯ ನೀಡಿದ್ದ ಝೂಮ್ ಹೋಂಸ್ಟೇ ಸೀಲ್ ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಜುಲೈ 5ರವರೆಗೆ ಲಾಕ್‍ಡೌನ್ ಇದೆ. ಎಲ್ಲೂ ಕೂಡ ಪ್ರವಾಸಿ ತಾಣಗಳು ಓಪನ್ ಇಲ್ಲ. ಹೀಗಿದ್ರೂ ಬೇರೆ ಜಿಲ್ಲೆಗಳು ಅನ್‍ಲಾಕ್ ಆಗಿರುವ ಕಾರಣ ಕೊಡಗು ಜಿಲ್ಲೆ ಕೂಡಾ ಆಗಿರಬಹುದು ಅಂದುಕೊಂಡು ಕೊಡಗಿಗೆ ಪ್ರವಾಸಿಗರು ಬರುತ್ತಿದ್ದಾರೆ. ಮಹಾಮಾರಿ ಹಿನ್ನೆಲೆ ಲಾಕ್ಡೌನ್ ಹೇರಿದ್ದರೂ ನಿಯಮ ಉಲ್ಲಂಘಿಸಿ ಕೆಲ ಪ್ರವಾಸಿಗರು ಮಡಿಕೇರಿ ಪ್ರವೇಶಿಸಿ ಝೂಮ್ ಹೋಂಸ್ಟೇನಲ್ಲಿ ತಂಗಿದ್ದರು. ಮಾಹಿತಿ ತಿಳಿದ ಪೊಲೀಸರು ಹೋಂಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ 10 ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಜೊತೆಗೆ ಝೂಮ್ ಹೋಂ ಸ್ಟೇ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಾಗಿದ್ದು ಹೋಂ ಸ್ಟೇ ಸೀಲ್ ಡೌನ್ ಮಾಡಲಾಗಿದೆ.

ಇನ್ನು ಮೂರು ವಾಹನಗಳಲ್ಲಿ 13 ಪ್ರವಾಸಿಗರು ಮಾಂದಲಪಟ್ಟಿಗೆ ತೆರಳುತ್ತಿದ್ದರು ಈ ವೇಳೆ ಪ್ರವಾಸಿಗರಿಗೆ ಮಡಿಕೇರಿ ಗ್ರಾಮಾಂತರ ಠಾಣೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಪ್ರವಾಸಿಗರನ್ನ ಠಾಣೆಗೆ ಕರೆ ತಂದಿದ್ದಾರೆ. ಮಹಾಮಾರಿ ಕೊರೊನಾ ಎರಡನೇ ಅಲೆ ಹೆಚ್ಚಿನ ಅನಾಹುತ ತಂದೊಡ್ಡಿದೆ. ಹೆಚ್ಚಿನ ಸಾವು-ನೋವುಗಳು ಕೂಡ ಸಂಭವಿಸಿದೆ. ಇಂತಹ ಸಮಯದಲ್ಲಿ ಪ್ರವಾಸಿಗರು ಈ ರೀತಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿದೆ.

ಮುಖ್ಯವಾಗಿ ಕೊಡಗಿಗೆ ಪ್ರವಾಸಿಗರು, ಹೊರ ಭಾಗದ ಜನ ಆರಾಮಾಗಿ ಎಂಟ್ರಿ ಕೊಡೋದಕ್ಕೆ ಕಾರಣ ಚೆಕ್‍ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಇಲ್ಲದಿರೋದು. ಸಂಪಾಜೆ ಹಾಗೂ ಕುಶಾಲನಗರದ ಕೊಪ್ಪ ಚೆಕ್‍ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಆಗುತ್ತಿಲ್ಲ. ಹೀಗಾಗಿ ಹೊರ ಜಿಲ್ಲೆ, ಹೊರ ರಾಜ್ಯದ ಜನ ಜಿಲ್ಲೆಯೊಳಗೆ ಎಂಟ್ರಿಕೊಟ್ಟ ಬಳಿಕ ಪೇಚಿಗೆ ಸಿಲುಕುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕೂಡ ಕಡಿಮೆಯಾಗ್ತಿಲ್ಲ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕೂಡ ಶೇ.9, ಶೇ10 ಹೀಗೆ ಇದೆ. ಹೀಗಾಗಿ ಕೊಡಗನ್ನ ಅನ್‍ಲಾಕ್ ಮಾಡೋದಕ್ಕೆ ಆಗ್ತಿಲ್ಲ. ಹೀಗಿರುವಾಗ ಹೊರ ಜಿಲ್ಲೆ, ಹೊರರಾಜ್ಯದಿಂದ ಜನ ಬಂದ್ರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.

ಇದನ್ನೂ ಓದಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ ಸೇರಿದ ಬಿಜೆಪಿ ಕೌನ್ಸಿಲರ್

Published On - 2:56 pm, Sun, 27 June 21