AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್​ಡಿ ದೇವೇಗೌಡ

ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮತ್ತೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಜೆಡಿಎಸ್ ಎಲ್ಲಿದೆ ಅಂತ ಕೇಳುತ್ತಾರೆ ಎಷ್ಟು ಅಹಂ ನೋಡಿ ಇವರಿಗೆ. ಆ ಅಧಿಕಾರದ ಅಹಂನ್ನು ಇಳಿಸುತ್ತೇನೆ ಎಂದು ವಾಗ್ದಾಳಿ ಮಾಡಿದ್ದಾರೆ.

ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್​ಡಿ ದೇವೇಗೌಡ
ಹೆಚ್​​.ಡಿ.ದೇವೇಗೌಡ, ಸಿದ್ದರಾಮಯ್ಯ
ಮಂಜುನಾಥ ಕೆಬಿ
| Edited By: |

Updated on: Mar 31, 2024 | 5:46 PM

Share

ಹಾಸನ, ಮಾರ್ಚ್​ 31: ಸಿಎಂ ಸಿದ್ದರಾಮಯ್ಯ ಇವತ್ತು ಬಹಳ ಟ್ವೀಟ್ ಮಾಡಿದ್ದಾರೆ. ಎಲ್ಲಿದೆ ಜೆಡಿಎಸ್ ಅಂತ ಹೇಳುತ್ತಾರೆ. ಈ ಸಂತೆ ಮೈದಾನದಲ್ಲಿ ಸೇರಿರುವ ಪುಣ್ಯಾತ್ಮರು ನೀವು ಯಾವ ಪಕ್ಷ ಹಾಗಾದ್ರೆ. ಎಷ್ಟು ಅಹಂ ನೋಡಿ ಅವರಿಗೆ. ಅಧಿಕಾರದ ಅಹಂನ್ನು ಇಳಿಸುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (hd devegowda) ಮತ್ತೆ ಗುಡುಗಿದ್ದಾರೆ. ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಕುಳಿತಿದ್ದೇನೆ ಆದರೆ ಬುದ್ದಿ ಕೆಲಸ ಮಾಡುತ್ತೆ. ಯಾರಿಗೂ ಜಗ್ಗಲ್ಲ. ಇವರು ಏನೇನು ಮಾಡಿದ್ದಾರೆ ಒಂದೊಂದು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ.

ಏ.4 ಹಾಸನದಲ್ಲಿ ಅರವತ್ತು, ಎಪ್ಪತ್ತು ಸಾವಿರ ಜನ ಸೇರುತ್ತಾರೆ. ಅಲ್ಲಿ ಹೇಳುತ್ತೇನೆ. ಅವರು ಏ.5 ಕ್ಕೆ ಹಾಸನಕ್ಕೆ ಬರುತ್ತಾರಂತೆ ಬರಲಿ. ಲೋಕಸಭಾ ಚುನಾವಣೆ ಆದಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಅನ್ನೋದನ್ನ ಕಾದುನೋಡೋಣ. ಈ ಭಾರಿ ಜನ ತೀರ್ಮಾನ ಮಾಡುತ್ತಾರೆ ಎಂದರು.

ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ

2019 ಮಾರ್ಚ್ 13 ರಂದು ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದೆ. ಆದರೆ ನನ್ನನ್ನು ಸೋಲಿಸಿ ಅವಮಾನ ಮಾಡಬೇಕು ಅಂತ ಮಾಡಿದ್ದರು. ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ. ಆದರೆ ನೀವು ಆ ಕಪ್ಪುಚುಕ್ಕೆ ಇಟ್ಟಿದ್ದೀರಲ್ಲ ಸಿದ್ದರಾಮಯ್ಯ ಅವರೇ. ನನಗೆ 91 ವಯಸ್ಸು ಸಿದ್ದರಾಮಯ್ಯ ಅವರೇ ನೆನಪಿನಲ್ಲಿ ಇಟ್ಕೊಳಿ. ನಾನು ಮೋದಿ ಸೇರಿರುವುದು ನಿಜ. ಪ್ರಧಾನಮಂತ್ರಿ ಸ್ಥಾನದಿಂದ ಏಕೆ ನನ್ನನ್ನು ತೆಗೆದಿರಿ.

ಇದನ್ನೂ ಓದಿ: ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ: ಕಾಂಗ್ರೆಸ್​ ವಿರುದ್ಧ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಾಗ್ದಾಳಿ

ಪಿ.ಚಿದಂಬರಂ ಹೇಳ್ತಾರೆ ನಮ್ಮ ಅಕೌಂಟ್ ಸೀಜ್ ಮಾಡಿದ್ದಾರೆ ನಮ್ಮ ಹತ್ರ ದುಡ್ಡಿಲ್ಲ ಅಂತ. ನನ್ನ ಅರವತ್ತು ವರ್ಷದಲ್ಲಿ ರಾಜಕೀಯ ಜೀವನ ನೋಡಿದ್ದೇನೆ. ಇಡೀ ಬೆಂಗಳೂರು ಒಬ್ಬನ ಕೈಯಲ್ಲಿದೆ. ಬಿಡಿಎ, ಕಾರ್ಪೊರೇಷನ್, ಪ್ಲಾನಿಂಗ್ ಕಮಿಷನ್, ಒಬ್ಬನ ಕೈಯಲ್ಲಿದೆ. ಅಷ್ಟೇ ಅಲ್ಲಾ ಇಡೀ ನೀರಾವರಿ ಅವರ ಕೈಯಲ್ಲಿ ಇದೆ. ಎಲ್ಲಿದೆ ಕಾಂಗ್ರೆಸ್, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡ್, ಕೇರಳ, ಆಂಧ್ರಪ್ರದೇಶದಲ್ಲಿ ಇದೆಯಾ? ಕರ್ನಾಟಕ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್‌ ಇದೆ ಎಂದರು.

ಗರ್ವದ ಮಾತು ಆಡಬೇಡಿ ಎಂದ ದೇವೇಗೌಡ 

ಬೆಂಗಳೂರನಲ್ಲಿರುವ ಸಂಪತ್ತು, ನೀರಾವರಿ ಇಲಾಖೆಯ ಹಣವನ್ನು ಎಲ್ಲಾ ಕಡೆ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ. ರಾಜಸ್ತಾನದಲ್ಲಿ ಎಲೆಕ್ಷನ್ ಕಮಿಷನ್​​ನವರು ಹಣ ಹಿಡಿದರು ಎಂದು ಲೇವಡಿ ಮಾಡಿದ್ದಾರೆ. ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಆಗಿ ಮೂರೇ ದಿನಕ್ಕೆ ಬಂದರು ಅಂತಾರೆ. ಕುಮಾರಸ್ವಾಮಿನಾ ಈ‌ ಸಾರಿ ಮುಗಿಸುತ್ತಿವಿ ಅಂತೀರಾ. ಜೆಡಿಎಸ್ ತೆಗಿತೀನಿ ಅಂತಾರೆ. ನಾನು ಬದುಕಿದ್ದೇನೆ, ಈ ಕ್ಷೇತ್ರ ಮಾತ್ರವಲ್ಲ ನಿನ್ನೆ ತುಮಕೂರಿನಲ್ಲಿ ಇದನ್ನೇ ಹೇಳಿದ್ದೇನೆ. ಈ ಗರ್ವದ ಮಾತನ್ನು ಆಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಕಾಫಿನಾಡಿನಲ್ಲಿ ವರುಣನ ಅಬ್ಬರ
ಕಾಫಿನಾಡಿನಲ್ಲಿ ವರುಣನ ಅಬ್ಬರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!