ನಿಷೇಧಿತ ಪ್ಲಾಸ್ಟಿಕ್ ತಯಾರು ಮಾಡುತ್ತಿದ್ದ ಇಂಡಸ್ಟ್ರಿ ಮೇಲೆ ದಾಳಿ; ಅಪಾರ ಪ್ರಮಾಣದ ಪ್ಲಾಸ್ಟಿಕ್ ವಶ
ಎರಡೂ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ತಯಾರು ಮಾಡುವುದಲ್ಲದೇ, ಅದನ್ನ ಸಣ್ಣ ಪುಟ್ಟ ವ್ಯಾಪರಿಗಳಿಗೆ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿತ್ತು. ಹೀಗಾಗಿ ಇದರ ಖಚಿತ ಮಾಹಿತಿ ಪಡೆದಿದ್ದ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ್, ಎರಡು ಉದ್ಯಮಗಳ ಮೇಲೆ ದಾಳಿ ನಡೆಸಿ ಅಪಾರ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಲ್ಲದೇ ದಂಡ ಕೂಡ ವಿಧಿಸಿದ್ದಾರೆ.

ಹುಬ್ಬಳ್ಳಿ: ಮನುಷ್ಯನ ಜೀವಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ತಡೆಗೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಎಗ್ಗಿಲ್ಲದೇ ತಯಾರುಗತ್ತಲೆ ಇದೆ.ಇನ್ನು ನಿಷೇಧಿತ ಪ್ಲಾಸ್ಟಿಕ್ ತಡೆಗೆ ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆ ಸಾಕಷ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಕದ್ದು ಮುಚ್ಚಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರ ಖಚಿತ ಮಾಹಿತಿ ಆಧಾರದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಸುರೇಶ ಇಟ್ನಾಳ್ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು.
ಹುಬ್ಬಳ್ಳಿಯ ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್ನ ಶ್ರೀ ಜಗದೀಶ್ ಇಂಡಸ್ಟ್ರೀಸ್ ಹಾಗೂ ಧನಲಕ್ಷ್ಮಿ ಎಂಟರ್ ಪ್ರೈಸಸ್ ಫ್ಯಾಕ್ಟರಿ ಮೇಲೆ ದಾಳಿ ಹಾಗೂ ಪರಿಶೀಲನೆ ಮಾಡಿದ ಆಯುಕ್ತರ ತಂಡ ಸುಮಾರು 1048 ಕೆ.ಜಿ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ಒಟ್ಟು 40,000 ರೂಪಾಯಿಗಳ ದಂಡ ವಿಧಿಸಸಿತು.
ಎರಡೂ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ತಯಾರು ಮಾಡುವುದಲ್ಲದೇ, ಅದನ್ನ ಸಣ್ಣ ಪುಟ್ಟ ವ್ಯಾಪರಿಗಳಿಗೆ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿತ್ತು. ಹೀಗಾಗಿ ಇದರ ಖಚಿತ ಮಾಹಿತಿ ಪಡೆದಿದ್ದ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ್, ಎರಡು ಉದ್ಯಮಗಳ ಮೇಲೆ ದಾಳಿ ನಡೆಸಿ ಅಪಾರ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಲ್ಲದೇ ದಂಡ ಕೂಡ ವಿಧಿಸಿದ್ದಾರೆ.
ಈಗಾಗಲೇ ಹುಬ್ಬಳ್ಳಿ-ಧಾರವಾಡ ಪಾಲಿಕೆ, ಸರ್ಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್ ತಯಾರು ಮಾಡುವುದಾಗಲಿ ಅಥವಾ ಅದನ್ನ ಮಾರಾಟ ಮಾಡುವುದಾಗಲಿ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುದಾಗಿ ಎಲ್ಲಾ ವ್ಯಾಪಾರಸ್ಥರಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಅಲ್ಲದೆ ಅವಳಿ ನಗರದ ವ್ಯಾಪ್ತಿಯಲ್ಲಿ ನಿಷೆಧಿತ ಪ್ಲಾಸ್ಟಿಕ್ ಸಂಪೂರ್ಣ ಬಂದ್ ಆಗಬೇಕು ಎನ್ನೋ ಛಲ ತೊಟ್ಟಿದೆ. ಹೀಗಾಗಿ ಪಾಲಿಕೆಯ ಅಧಿಕಾರಿಗಳ ತಂಡ ತಮ್ಮ ವ್ತಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು, ಹೀಗಾಗೇ ಇವರೆಡು ಉದ್ಯಮಗಳು ಸರ್ಕಾರ ಹಾಗೂ ಪಾಲಿಕೆ ಸೂಚನೆ ಮೀರಿ ನಿಷೇಧಿತ ಪ್ಲಾಸ್ಟಿಕ್ ತಯಾರಿಕೆ ಮಾಡೋದನ್ನ ಪಾಲಿಕೆ ಗಮನಕ್ಕೆ ತರಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸಧ್ಯ ಆ ಎರಡೂ ಇಂಡಸ್ಟ್ರಿಸ್ ಮೇಲೆ ಕೇಸ್ ಹಾಕೋ ಚಿಂತನೆ ಮಾಡಲಾಗುತ್ತಿದೆಯಂತೆ. ಪರಿಸರಕ್ಕೆ ಹಾನಿಕಾರ ಹಾಗೂ ಸರ್ಕಾರದ ನಿಯಮ ಗಾಳಿಗೆ ತೂರಿದ ಹಿನ್ನಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಸುರೇಶ ಇಟ್ನಾಳ್ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ
ಇನ್ನು ಕಾರ್ಯಾಚರಣೆ ವೇಳೆಯಲ್ಲಿ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ್ ಯರಂಗಳಿ, ಪರಿಸರ ಅಭಿಯಾತರ ಶ್ರೀಧರ್ ಟಿ.ಎನ್, ಮಲ್ಲಿಕಾರ್ಜುನ.ಬಿ.ಎಮ್, ಯುವರಾಜ್ ಕೆ.ಆರ್, ಕುಮಾರಿ ಜ್ಯೋತಿ ಬಿ.ಎಚ್, ಆರೋಗ್ಯ ನೀರಿಕ್ಷಕರಾದ ಮಹಾಂತೇಶ ನಿಡವಣಿ, ಸುನಿಲ್ ಕಾಡದೇವರಮಠ, ಮಲ್ಲಿಕಾರ್ಜುನ ಕುದರಿ ಹಾಗೂ ಪಾಲಿಕೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಾವು ಈಗಾಗಲೇ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಮಾರವಾಟನ್ನ ಬ್ಯಾನ್ ಮಾಡಿದ್ದೆವೆ.ಅಲ್ಲದೆ ಹುಬ್ಬಳ್ಳಿ- ಧಾರವಾಡ ಅವಳಿ ಮಹಾನಗರ ಪಾಲಿಕೆಯಲ್ಲಿ ಯಾರು ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ. ಅದಾಗಿಯೂ ಯಾರಾದರು ಉತ್ಪಾದನೆ, ಮಾರಾಟ ಮಾಡಿದ್ರೆ ಖಂಡಿತ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೆವೆ. ಪರಿಸರ ಸ್ನೇಹಿ ವಾತವರಣ ನಿರ್ಮಾಣ ಮಾಡೋದು ನಮ್ಮ ಗುರಿಯಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ್ ಇಟ್ನಾಳ್ ಹೇಳಿದ್ದಾರೆ.
(ವರದಿ: ದತ್ತಾತ್ರೇಯ ಪಾಟೀಲ್ -9980914136)
ಇದನ್ನೂ ಓದಿ:
ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ: ಐವರು ಯುವಕರು, ನಾಲ್ವರು ಯುವತಿಯರು ಅರೆಸ್ಟ್
ಗ್ರಾಮ ಲೆಕ್ಕಾಧಿಕಾರಿ ಭ್ರಷ್ಟಾಚಾರ;10 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಸಿಬಿ ಬಲೆಗೆ
(Hubli-Dharwad Municipal Corporation Attacks on the industry that preparing banned plastic)



