AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Kannada Digital Exclusive | ಹೊರರಾಜ್ಯದ ಕೋರ್ಟಲ್ಲಿ ಹೇಳಿಕೆ ದಾಖಲಿಸಲು ಸುಪ್ರೀಂಗೆ ಸಿಡಿ ಸಂತ್ರಸ್ತೆ ಮನವಿ ಪತ್ರ

Exclusive | ರಮೇಶ್​ ಜಾರಕಿಹೊಳಿ ಅವರ ಸೆಕ್ಸ್​ ಸಿಡಿ ಕೇಸಿನಲ್ಲಿ ಹೊಸ ತಿರುವು ಸಿಕ್ಕಿದೆ. ಸಂತ್ರಸ್ತೆ ಈಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಪತ್ರದಲ್ಲಿ ಸಂತ್ರಸ್ತ ಯುವತಿಯು ರಾಜ್ಯ ಸರ್ಕಾರ, ಎಸ್ಐಟಿ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.

Tv9 Kannada Digital Exclusive | ಹೊರರಾಜ್ಯದ ಕೋರ್ಟಲ್ಲಿ ಹೇಳಿಕೆ ದಾಖಲಿಸಲು ಸುಪ್ರೀಂಗೆ ಸಿಡಿ ಸಂತ್ರಸ್ತೆ ಮನವಿ ಪತ್ರ
ಸುಪ್ರೀಂ ಕೋರ್ಟ್​
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 29, 2021 | 9:04 PM

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಕಂತುಕಂತುಗಳಲ್ಲಿ ತನ್ನ ಮುಂದಿನ ನಡೆ ಬಗ್ಗೆ ವಿಡಿಯೊ ತುಣುಕು ಬಿಡುಗಡೆ ಮಾಡುತ್ತಿದ್ದಾರೆ. ಈ ಮಧ್ಯೆ ದೇಶದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಆಕೆ ಬರೆದಿದ್ದಾರೆ ಎನ್ನುವ ಪತ್ರದ ವಿವರ ಟಿವಿ9 ಡಿಜಿಟಲ್​ಗೆ ಲಭ್ಯವಾಗಿದೆ. ಈ ಪತ್ರದಲ್ಲಿ ಸಂತ್ರಸ್ತ ಯುವತಿಯು ರಾಜ್ಯ ಸರ್ಕಾರ, ಎಸ್ಐಟಿ ಮತ್ತು ರಮೇಶ್ ಜಾರಕಿಹೊಳಿ ನನ್ನನ್ನು ಕೊಲ್ಲಬಹುದು ಎಂದು ಗುರುತರ ಆರೋಪ ಮಾಡಿದ್ದಾರೆ.

ಮಾರ್ಚ್ 28 ರಂದು ಬರೆದಿದ್ದಾರೆ ಎನ್ನುವ ಈ ಪತ್ರದ ಪ್ರಾರಂಭದಲ್ಲಿಯೇ ಅವರ ತಮ್ಮನ್ನು ‘ರೇಪ್ ವಿಕ್ಟಿಮ್’ (ಅತ್ಯಾಚಾರ ಸಂತ್ರಸ್ತೆ) ಎಂದು ಕರೆದುಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿರುವ ಕೇಸು ಸಂಖ್ಯೆ ಎಫ್ಐಆರ್ 30/2021 ಪ್ರಕಾರ ರಮೇಶ ಜಾರಕಿಹೊಳಿ ಈ ರೇಪ್ ಕೇಸಿನ ಆರೋಪಿ. ಜಾರಕಿಹೊಳಿ ಬಹಳ ಪ್ರಭಾವಶಾಲಿ. ಇವರು ನನ್ನನ್ನು ಮುಗಿಸಲು ಯಾವ ಹಂತಕ್ಕೂ ಹೋಗಬಹುದು. ರಮೇಶ್ ಜಾರಕಿಹೊಳಿ ಅವರು ನನ್ನನ್ನು ಮತ್ತು ನನ್ನ ತಂದೆ ತಾಯಿಯನ್ನು ಮುಗಿಸಲೂಬಹುದು. ನಾನೆಷ್ಟೇ ಕೋರಿಕೊಂಡರೂ ಎಸ್ಐಟಿ ನನಗಾಗಲೀ ಅಥವಾ ನನ್ನ ತಂದೆ ತಾಯಿಗಾಗಲೀ ರಕ್ಷಣೆ ನೀಡಿಲ್ಲ ಎಂದು ಸಂತ್ರಸ್ತ ಯುವತಿ ಪತ್ರದಲ್ಲಿ ಹೇಳಿದ್ದಾರೆ.

ಮಾಧ್ಯಮದ ಮೂಲಕ ನಾನು ತಿಳಿದುಕೊಂಡಿದ್ದೇನೆಂದರೆ ರಮೇಶ್ ಜಾರಕಿಹೊಳಿ ಇಂದು (ಮಾರ್ಚ್​ 28) ಮತ್ತೆ ನನ್ನನ್ನು ಹೆದರಿಸಿದ್ದಾರೆ. ರಾಜಕೀಯವಾಗಿ ತುಂಬಾ ಪ್ರಭಾವಿಯಾಗಿರುವ ಅವರು ಯಾವ ಹಂತಕ್ಕೂ ಹೋಗಬಹುದಾಗಿದೆ. ಯಾಕೆಂದರೆ ರಮೇಶ್ ಜಾರಕಿಹೊಳಿ ಅವರಿಗೆ ಅಪರಾಧದ ಹಿನ್ನೆಲೆಯಿದೆ. ಅವರು ನನ್ನನ್ನು ಯಾವತ್ತು ಬೇಕಾದರೂ, ಎಲ್ಲಿ ಬೇಕಾದರೂ ಕೊಲ್ಲಿಸಬಹುದಾಗಿದೆ. ಎಸ್ಐಟಿ ಮತ್ತು ರಾಜ್ಯ ಸರ್ಕಾರ ರಮೇಶ್ ಜಾರಕಿಹೊಳಿಮಾತನ್ನೇ ಕೇಳುತ್ತಿದೆ ಎಂದು ದೂರಿದ್ದಾರೆ.

ಎಸ್ಐಟಿ, ರಾಜ್ಯ ಸರ್ಕಾರ ಮತ್ತು ರಮೇಶ್ ಜಾರಕಿಹೊಳಿ ಸೇರಿಕೊಂಡು ಯಾವ ಸಮಯದಲ್ಲಾದರೂ, ಎಲ್ಲಿ ಬೇಕಾದರೂ ನನ್ನನ್ನು ಕೊಲ್ಲಿಸಬಹುದಾಗಿದೆ. ನಾನು, ಯಾವ ನಿರ್ಬಂಧ ಮತ್ತು ಒತ್ತಡವಿಲ್ಲದೇ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ನನ್ನ ಕುಟುಂಬವನ್ನು ರಮೇಶ್ ಜಾರಕಿಹೊಳಿ ತಮ್ಮ ಕೈ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಮತ್ತು ಅವರು ನನ್ನ ಕುಟುಂಬಕ್ಕೆ ತುಂಬಾ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Cd-Supreme-Court-Letter

ಸುಪ್ರೀಂಕೋರ್ಟ್​ಗೆ ಸಂತ್ರಸ್ತ ಯುವತಿ ಬರೆದಿರುವ ಪತ್ರ

ಇಲ್ಲಿದೆ ಹೊಸ ಟ್ವಿಸ್ಟ್ ಈ ಮೇಲಿನ ಅಂಶಗಳನ್ನು ಗಮನಿಸಿಕೊಂಡು ತಾವು ನನ್ನ ಪತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಈ ಕೂಡಲೇ ನನಗೆ ಭದ್ರತೆ ಒದಗಿಸಲು ತಾವು ಆದೇಶಿಸಬೇಕು. ಈ ಕೇಸಿನ ತನಿಖೆ ಮೇಲ್ವಿಚಾರಣೆ ತಮ್ಮ ನೇತೃತ್ವದಲ್ಲಿ ನಡೆಯಬೇಕು. ಕರ್ನಾಟಕದ ಹೊರಗೆ ಬೇರೆ ರಾಜ್ಯದ ನ್ಯಾಯಾಲಯದ ಮುಂದೆ ನನ್ನ ಹೇಳಿಕೆ ನೀಡಲು ಅನುಮತಿ ನೀಡುವ ನಿರ್ದೇಶನ ನೀಡಬೇಕು ಹಾಗೂ ಆ ಮೂಲಕ ನನಗೆ ನ್ಯಾಯ ಒದಗಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

Cd-Supreme-Court-Letter

ಸಂತ್ರಸ್ತ ಯುವತಿ ಬರೆದಿದ್ದಾರೆ ಎನ್ನಲಾದ ಪತ್ರ

ಇದನ್ನೂ ಓದಿ: ಎಸ್​ಐಟಿಗೆ ಸಡ್ಡು ಹೊಡೆದ CD ಲೇಡಿ.. ಬಿಡುಗಡೆಯಾಯ್ತು ಮತ್ತೊಂದು ವಿಡಿಯೋ! ಪೊಲೀಸ್ ಕಮಿಷನರ್ ವಿರುದ್ಧ ಭಾರಿ ಆರೋಪ

ಇದನ್ನೂ ಓದಿ:  ರಮೇಶ್ ಜಾರಕಿಹೊಳಿ CD ಪ್ರಕರಣ: ವಿಡಿಯೋದಲ್ಲಿದ್ದ ವಾಯ್ಸ್ ಸ್ಯಾಂಪಲ್ FSLಗೆ ಶಿಫ್ಟ್

Published On - 8:47 pm, Mon, 29 March 21

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್