AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi News: ಸರ್ಕಾರಿ ಆಸ್ಪತ್ರೆ ಜವಾನನ ಮಗಳಿಗೆ 14 ಚಿನ್ನದ ಪದಕ; ಅಪ್ಪನ ಕೀರ್ತಿ ಹೆಚ್ಚಿಸಿದ ಯುವತಿ

ಗುಲಬರ್ಗಾ ವಿವಿಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ರುಕ್ಮಿಣಿ ಹಣಮಂತರಾಯ್ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದು, ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ.

Kalaburagi News: ಸರ್ಕಾರಿ ಆಸ್ಪತ್ರೆ ಜವಾನನ ಮಗಳಿಗೆ 14 ಚಿನ್ನದ ಪದಕ; ಅಪ್ಪನ ಕೀರ್ತಿ ಹೆಚ್ಚಿಸಿದ ಯುವತಿ
ಹದಿನಾಲ್ಕು ಚಿನ್ನದ ಪದಕ ಪಡೆದ ರುಕ್ಮಿಣಿ ತನ್ನ ಪೋಷಕರೊಂದಿಗೆ
Follow us
ಸಂಜಯ್ಯಾ ಚಿಕ್ಕಮಠ
| Updated By: ಆಯೇಷಾ ಬಾನು

Updated on:Jun 19, 2023 | 1:48 PM

ಕಲಬುರಗಿ: ಸಾಧನೆ ಮಾಡೋ ಮನಸು ಇದ್ದರೆ ಬಡತನ ಅಡ್ಡಿಯಾಗಲಾರದು. ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು. ಹೌದು ಸರ್ಕಾರಿ ಆಸ್ಪತ್ರೆಯಲ್ಲಿ(Government Hospital Jawan) ಕಸ ಗೂಡಿಸುವುದು ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡೋ ಜವಾನನ ಮಗಳು ಕಷ್ಟ ಪಟ್ಟು ಓದಿ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದಿದ್ದಾರೆ(14 Gold Medals).

ಕಲಬುರಗಿ ನಗರದಲ್ಲಿರೋ ಗುಲಬರ್ಗಾ ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವ ಕಾರ್ಯಕ್ರಮ ವಿವಿಯ ಅಂಬೇಡ್ಕರ್ ಸಭಾಂಗಣದಲ್ಲಿ ಇಂದು(ಜೂನ್ 19) ನಡೆಯಿತು. ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್, ಉನ್ನಕ ಶಿಕ್ಷಣ ಸಚಿವ ಡಾ.ಸುಧಾಕರ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಚಿನ್ನದ ಪದಕ, ಪಿಎಚ್ ಡಿ ಪದವಿ, ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಲಾಯಿತು.

ಜವಾನನ ಮಗಳಿಗೆ ಹದಿನಾಲ್ಕು ಚಿನ್ನದ ಪದಕ

ಗುಲಬರ್ಗಾ ವಿವಿಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ರುಕ್ಮಿಣಿ ಹಣಮಂತರಾಯ್ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದು, ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷವೆಂದರೇ ಹದಿನಾಲ್ಕು ಚಿನ್ನದ ಪದಕ ಪಡೆದ ರುಕ್ಮಿಣಿ ತಂದೆ ಹಣಮಂತರಾಯ್, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದಾರೆ.

ಕಲಬುರಗಿ ತಾಲೂಕಿನ ಆಲಗೋಡ ಗ್ರಾಮದ ನಿವಾಸಿಯಾಗಿರೋ ಹಣಮಂತರಾಯ್ ಓದಿದ್ದು ಕೇವಲ ಮೂರನೇ ತರಗತಿ ಮಾತ್ರ. ಆದರೆ ಆಸ್ಪತ್ರೆಯಲ್ಲಿ ಮೊದಲು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಹಣಮಂತರಾಯ್, ಕೆಲ ವರ್ಷಗಳ ಹಿಂದಷ್ಟೇ ಖಾಯಂ ನೌಕರರಾಗಿದ್ದಾರೆ. ಇನ್ನು ಹಣಮಂತರಾಯ್ ಅವರಿಗೆ ನಾಲ್ಕು ಮಕ್ಕಳಿದ್ದು, ರುಕ್ಮಿಣಿ ಕಿರಿಯ ಮಗಳಾಗಿದ್ದಾರೆ. ತಾನು ಹೆಚ್ಚು ಓದಲಿಲ್ಲಾ, ಮಗಳು ಚೆನ್ನಾಗಿ ಓದಲಿ ಅಂತ, ಬಡತನವಿದ್ದರು ಕೂಡಾ ಮಗಳಿಗೆ ಚೆನ್ನಾಗಿ ಓದಿಸಿದ್ದಾರೆ.

ಇದನ್ನೂ ಓದಿ: ಮಿಸ್ಸೆಸ್ ಇಂಡಿಯಾ ಕಿರೀಟ ಗೆದ್ದ ಬೆಣ್ಣೆ ನಗರಿ ಬೆಡಗಿ: ಹಳ್ಳಿ ಹುಡುಗಿಯ ಸಾಧನೆ ಎಂಥವರಿಗೂ ಸ್ಫೂರ್ತಿ

14 ಚಿನ್ನದ ಪದಕ ಪಡೆದ ರುಕ್ಮಿಣಿ ಗೆ ಉಪನ್ಯಾಸಕಿಯಾಗೋ ಕನಸು

ಇನ್ನು ಗುಲಬರ್ಗಾ ವಿವಿಯ ಘಟಿಕೋತ್ಸವದಲ್ಲಿ ಹದಿನಾಲ್ಕು ಚಿನ್ನದ ಪದಕ ಪಡೆದ ರುಕ್ಮಿಣಿ ಹಣಮಂತರಾಯ್ ಗೆ ಕಾಲೇಜು ಉಪನ್ಯಾಸಕಿಯಾಗೋ ಕನಸು ಹೊಂದಿದ್ದಾರೆ. ಮುಂದೆ ಚೆನ್ನಾಗಿ ಓದಿ ಪಿಹೆಚ್​ಡಿ ಮಾಡಬೇಕು, ಕಾಲೇಜು ಉಪನ್ಯಾಸಕಿಯಾಗಬೇಕು ಅನ್ನೋ ಆಸೆಯಿದೆ ಅಂತಿದ್ದಾರೆ ರುಕ್ಮಿಣಿ. ಇನ್ನು ಗುಲಬರ್ಗಾ ಸ್ನಾತಕೋತ್ತರ ಕೇಂದ್ರ ದಲ್ಲಿ ಅಧ್ಯಯನ ಮಾಡುವಾಗ ಹೆಚ್ಚಿನ ಸಮಯ ಗ್ರಂಥಾಲಯ ಮತ್ತು ವಿಭಾಗದಲ್ಲಿ ಕಳೆದಿದ್ದೇನೆ. ಬಿಡುವು ಇದ್ದಾಗಲೆಲ್ಲಾ ಓದುತ್ತಿದ್ದೆ ಇದರಿಂದ ಹೆಚ್ಚಿನ ಚಿನ್ನದ ಪದಕ ಪಡೆಯಲು ಸಾಧ್ಯವಾಗಿದೆ. ಇದು ಸಂತಸ ತಂದಿದೆ ಎಂದು ರುಕ್ಮಿಣಿ ಸಂತಸ ಹಂಚಿಕೊಂಡಿದ್ದಾರೆ.

ಅತಿ ಹೆಚ್ಚು ಚಿನ್ನದ ಪದಕ ಪಡೆದು ಸಾಧನೆ ಮಾಡಿರೋ ರುಕ್ಮಿಣಿ, ನನ್ನ ಸಾಧನೆಗೆ ಹೆತ್ತವರ ಸಹಕಾರ, ವಿಭಾಗದ ಉಪನ್ಯಾಸಕರ ಸಹಕಾರವಿದೆ. ಅವರೆಲ್ಲರ ಪ್ರೇರಣೆ, ಮಾರ್ಗದರ್ಶನವೇ ಈ ಸಾಧನೆಗೆ ಕಾರಣವಾಗಿದೆ ಎಂದರು.

ಇನ್ನು ರುಕ್ಮಿಣಿ ತಂದೆ ಹಣಮಂತರಾಯ್ ಮಾತನಾಡಿ, ನಾನು ಓದಿದ್ದು ಮೂರನೇ ತರಗತಿ. ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನಾಗಿದ್ದೇನೆ. ಮಗಳ ಸಾಧನೆ ಖುಷಿ ತಂದಿದೆ ಎಂದು ಖುಷಿ ಪಟ್ಟಿದ್ದಾರೆ.

ಕಲಬುರಗಿಗೆ ಸೇರಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:45 pm, Mon, 19 June 23

ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್