AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2023: ಕಲಬುರಗಿ; ಶೇಂಗಾದಲ್ಲಿ ಅರಳಿದ ಬೃಹತ್​ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗ ದರ್ಶನ

Mahashivratri: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ.

Mahashivratri 2023: ಕಲಬುರಗಿ; ಶೇಂಗಾದಲ್ಲಿ ಅರಳಿದ ಬೃಹತ್​ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗ ದರ್ಶನ
ಶೇಂಗಾದಲ್ಲಿ ಅರಳಿದ ಮೂಡಿದ ಶಿವಲಿಂಗ
TV9 Web
| Edited By: |

Updated on:Feb 18, 2023 | 9:50 AM

Share

ಕಲಬುರಗಿ: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ (Mahashivaratri) ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ. ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾಶಿವರಾತ್ರಿಯಂದು ವಿಭಿನ್ನ ಹಾಗೂ ವಿಷೇಶವಾಗಿ ಆಚರಿಸುತ್ತ ಬಂದಿದೆ. ಅದರಂತೆ ಈ ಬಾರಿಯು ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ.

ಈ ಹಿಂದೆ ತೆಂಗಿನಕಾಯಿ, ತೂಗರಿ, ಮುತ್ತು, ಅಡಿಕೆ ಹೀಗೆ ನಾನಾ ರೀತಿಯ ಶಿವಲಿಂಗ ನಿರ್ಮಾಣ ಮಾಡುವ ಮುಖಾಂತರ ಆಶ್ರಮ ಮನೆಮಾತಾಗಿದೆ. ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಶೇಂಗಾವನ್ನು ಬಳಸಿ ಸ್ವತಃ ಆಶ್ರಮವಾಸಿಗಳೇ ಆಕರ್ಷಕ ಶಿವಲಿಂಗ ನಿರ್ಮಿಸಿ ಈ ವರ್ಷದ ಶಿವರಾತ್ರಿಯನ್ನು ಅವಿಸ್ಮರಣೀಯವಾಗಿಸಿದೆ. 8 ಕ್ವಿಂಟಲ್ ಶೇಂಗಾದ ಕಾಳು ಬಳಸಿ ಅರಸಿಣ, ಕುಂಕುಮದ ಬಣ್ಣ ಬಳಿದು ತಯಾರಿಸಲಾದ 25 ಅಡಿ ಎತ್ತರದ ಕಂಗೊಳಿಸುತ್ತಿರುವ ಶಿವಲಿಂಗ ನೋಡುಗರ ಭಕ್ತಿಭಾವ ಉಕ್ಕಿಸುವಂತಿದೆ.

ಸಿರಿಧ್ಯಾನ ಸೇರಿ 12 ಜೋತಿರ್ಲಿಂಗ

ಶೇಂಗಾದ ಶಿವಲಿಂಗದ ಜೊತೆಗೆ ಆಶ್ರಮದ ಪ್ರಾಂಗಣದಲ್ಲಿ ನ್ಯಾಣ್ಯ, ಕಲ್ಲು ಸಕ್ಕರೆ, ಗೊಂಡಂಬಿ, ಸಿರಿಧಾನ್ಯಗಳು, ಹೀಗೆ ವಿಭಿನ್ನವಾಗಿರುವ ಚಿಕ್ಕಗಾತ್ರದ ಶಿವಲಿಂಗಗಳನ್ನು ನಿರ್ಮಾಣ ಮಾಡಲಾಗಿದೆ.

10 ದಿನ ದರ್ಶನಕ್ಕೆ ಅವಕಾಶ

ಶಿವರಾತ್ರಿಯ‌ ಹಿನ್ನಲೆ ನಿರ್ಮಾಣ ‌ಮಾಡಲಾದ ಶೇಂಗಾ ಶಿವಲಿಂಗದ ದರ್ಶನಕ್ಕೆ ಫೆ.18ರಿಂದ ಹತ್ತು ದಿನಗಳಕಾಲ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Sat, 18 February 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!