AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಜಿಲ್ಲೆಗಳು, 27 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ?

ಬೆಂಗಳೂರಿನಲ್ಲಿ ಲೋಕಾಯುಕ್ತರು ಏಕಕಾಲದಲ್ಲಿ 7 ಜಿಲ್ಲೆಗಳಲ್ಲಿ 28 ಕಡೆ ದಾಳಿ ನಡೆಸಿ 7 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 18 ಕೋಟಿಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ತಮ್ಮ ಆಸ್ತಿಗಳಿಗೆ ಸಮರ್ಪಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

7 ಜಿಲ್ಲೆಗಳು, 27 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ?
7 ಜಿಲ್ಲೆಗಳು, 27 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ?
TV9 Web
| Edited By: |

Updated on: Jan 31, 2025 | 10:12 PM

Share

ಬೆಂಗಳೂರು, ಜನವರಿ 31: ಇಂದು ಬೆಳಂಬೆಳಗ್ಗೆ ಬೆಚ್ಚಗೆ ಮನೆಯಲ್ಲಿ ಮಲಗಿದ್ದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ (Lokayukta raid) ಪೊಲೀಸರು ಶಾಕ್ ನೀಡಿದ್ದರು. ಕರ್ನಾಟಕದ 7 ಜಿಲ್ಲೆಗಳಲ್ಲಿ ಏಕಕಾಲದಲ್ಲಿ 28 ಕಡೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ನಿರಂತರ ಭ್ರಷ್ಟಾಚಾರದ ದೂರು, ಆದಾಯಕ್ಕೂ ಮೀರಿದ ಅಸಮತೋಲನ ಆಸ್ತಿ ಗಳಿಕೆ ಆರೋಪದ ಹೊತ್ತಿದ್ದ 7 ಸರ್ಕಾರಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಹಾಗಾದರೆ ಲೋಕಾ ರೇಡ್ ವೇಳೆ ಬಯಲಾದ ಭ್ರಷ್ಟ ಅಧಿಕಾರಿಗಳ ಆಸ್ತಿ-ಪಾಸ್ತಿಗಳ ಮೌಲ್ಯ ಎಷ್ಟು? ಸ್ಥಿರಾಸ್ತಿ ಮತ್ತು ಚರಾಸ್ತಿಗಳು ಪಕ್ಕಾ ಲೆಕ್ಕ ಇಲ್ಲಿದೆ.

7 ಜಿಲ್ಲೆ, 27 ಸ್ಥಳಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನ. ಅಸಮತೋಲನ, ಅಕ್ರಮ ಸಂಪತ್ತು ಗಳಿಸಿರುವ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಚಳಿ ಬಿಡಿಸುತ್ತಿರುತ್ತಾರೆ. ಅದೇ ರೀತಿ ಇಂದು ಬೆಂಗಳೂರು ನಗರದ 2 ಕಡೆ, ಬೆಳಗಾವಿ-2, ಬಾಗಲಕೋಟೆ-1, ಚಿತ್ರದುರ್ಗ-1, ರಾಯಚೂರು-1 ಸೇರಿ 7 ಸರ್ಕಾರಿ ಅಧಿಕಾರಿಗಳ ಮೇಲೆ ಏಕಕಾಲಕ್ಕೆ 27 ಕಡೆ ದಾಳಿ‌ ಮಾಡಿ ಭ್ರಷ್ಟರ ಬೆವರಿಳಿಸಿದ್ದಾರೆ.

ಲೋಕಾಯುಕ್ತ ದಾಳಿ ನಂ.1) ಮಾಧವ್ ರಾವ್, ಬಿಬಿಎಂಪಿ ಹೆಬ್ಬಾಳ ಉಪ ವಿಭಾಗ, ಸಹಾಯಕ ಕಾರ್ಯಪಾಲಕ ಇಂಜಿನಿಯರ್​​

ಬೆಂಗಳೂರಿನ 5 ಸ್ಥಳಗಳಲ್ಲಿ ಶೋಧ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು, ಅಧಿಕಾರಿ ಸ್ಥಿರಾಸ್ತಿ ಅಂದಾಜು ಮೌಲ್ಯ 7 ನಿವೇಶನಗಳು, 2 ವಾಸದ ಮನೆಗಳು, 48.27 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು, ಒಟ್ಟು ಮೌಲ್ಯ 7 ಕೋಟಿ 52 ಲಕ್ಷ ಸ್ಥಿರಾಸ್ತಿ. 97 ಸಾವಿರ 200 ನಗದು, 55 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ 50 ಲಕ್ಷ ಬೆಲೆಬಾಳುವ ಐಶಾರಾಮಿ ವಾಹನಗಳು. ಒಟ್ಟಾರೆ ಚರಾಸ್ಥಿ ಮೌಲ್ಯ 1 ಕೋಟಿ 5 ಲಕ್ಷ 97 ಸಾವಿರದ 200 ಅಲ್ಲದೇ ಒಟ್ಟು ಆಸ್ತಿ ಮೌಲ್ಯ 8 ಕೋಟಿ 57 ಲಕ್ಷ 97 ಸಾವಿರದ 200 ಪತ್ತೆಯಾಗಿದೆ.

ಲೋಕಾಯುಕ್ತ ದಾಳಿ ನಂ.2) ಟಿ.ಕೆ.ರಮೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ

ಅಧಿಕಾರಿ ಸ್ಥಿರಾಸ್ತಿ 3 ನಿವೇಶನಗಳು, 1 ವಾಸದ ಮನೆ ಒಟ್ಟು ಸ್ಥಿರಾಸ್ತಿ ಮೌಲ್ಯ 1 ಕೋಟಿ 23 ಲಕ್ಷ 73 ಸಾವಿರದ 500, ಹಾಗೂ ಚರಾಸ್ಥಿ 20 ಸಾವಿರದ 200 ರೂಪಾಯಿ ನಗದು, 3 ಲಕ್ಷ 58 ಸಾವಿರದ 200 ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ಬೆಲೆಬಾಳುವ ಐಶಾರಾಮಿ ವಾಹನಗಳು. 6 ಲಕ್ಷ 55 ಸಾವಿರ ಮೌಲ್ಯದ ಗೃಹಪಯೋಗಿ ವಸ್ತುಗಳು ಹಾಗೂ 67 ಲಕ್ಷ 50 ಸಾವಿರ ಮೌಲ್ಯದ ಇತರೆ ಖರ್ಚುಗಳು. ಒಟ್ಟು ಚರಾಸ್ಥಿ ಮೌಲ್ಯ 97 ಲಕ್ಷದ 83 ಸಾವಿರ 418 ರೂಪಾಯಿ. ಒಟ್ಟು ಟಿ.ಕೆ.ರಮೇಶ್ ಆಸ್ತಿ ಮೌಲ್ಯ 2 ಕೋಟಿ 21 ಲಕ್ಷದ 56 ಸಾವಿರದ 918 ರೂಪಾಯಿಗಳು ಪತ್ತೆಯಾಗಿದೆ.

ಲೋಕಾ ದಾಳಿ ನಂ.3) ಕೆ.ಸಿ.ಶಶಿಧರ್, ಮ್ಯಾನೇಜರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ಒಟ್ಟು 4 ಸ್ಥಳಗಳಲ್ಲಿ ಶೋಧ ಕಾರ್ಯ. ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 1 ಕೋಟಿ 21 ಲಕ್ಷದ 20 ಸಾವಿರ 1 ನಿವೇಶನ, 1 ವಾಸದ ಮನೆ, 9.14 ಎಕರೆ ಕೃಷಿ ಜಮೀನು. ಒಟ್ಟು ಚರಾಸ್ತಿ ಮೌಲ್ಯ 57 ಲಕ್ಷದ 5 ಸಾವಿರ 839 ರೂಪಾಯಿ, 58 ಸಾವಿರ ನಗದು ಹಣ, 21 ಲಕ್ಷದ 66 ಸಾವಿರದ 400 ರೂಪಾಯಿ ಮೌಲ್ಯದ ಚಿನ್ನಾಭರಣಗಳು. 34 ಲಕ್ಷದ 81 ಸಾವಿರದ 439 ರೂಪಾಯಿ ಮೌಲ್ಯದ ಐಶಾರಾಮಿ ವಾಹನಗಳು. ಅಲ್ಲದೇ ಎಲ್ಲಾ ಆಸ್ತಿ ಒಟ್ಟು ಮೌಲ್ಯ 1 ಕೋಟಿ 78 ಲಕ್ಷ 25 ಸಾವಿರದ 839 ರೂಪಾಯಿಗಳು ಪತ್ತೆಯಾಗಿದೆ.

ಲೋಕಾ ದಾಳಿ ನಂ.4) ಸಚಿನ್ ಬಸವಂತ್ ಮಂಡೆಡ್ ಅಲಿಯಾಸ್ ಮಂಡೆದಾರ್, ಸಬ್ ರಿಜಿಸ್ಟಾರ್, ಬೆಳಗಾವಿ ಉತ್ತರ, ಬೆಳಗಾವಿ

ಬೆಳಗಾವಿ ಜಿಲ್ಲೆಯ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ಮಾಡಲಾಗಿದೆ. ಅಧಿಕಾರಿ ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 58 ಲಕ್ಷ. 1 ನಿವೇಶನ, 1 ನಿರ್ಮಾಣ ಹಂತದ ವಾಸದ ಮನೆ. ಮತ್ತು ಚರಾಸ್ತಿ ಮೌಲ್ಯ 1 ಕೋಟಿ 92 ಲಕ್ಷ 12 ಸಾವಿರದ 559 ರೂಪಾಯಿ, 1 ಲಕ್ಷ 35 ಸಾವಿರ ನಗದು, 87 ಲಕ್ಷದ 27 ಸಾವಿರದ 559 ಬೆಲೆಬಾಳುವ ಚಿನ್ನಾಭರಣಗಳು ಮತ್ತು 2 ಲಕ್ಷ 50 ಸಾವಿರ ಮೌಲ್ಯದ ಐಶಾರಾಮಿ ಕಾರುಗಳು. 1 ಕೋಟಿ 1 ಲಕ್ಷ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ, ಮ್ಯೂಚುಯಲ್‌ ಫಂಡ್ ಮತ್ತು ಈಕ್ವಿಟಿ ಶೇರ್ಸ್ ಎಲ್ಲಾ ಸೇರಿ ಒಟ್ಟು ಮೌಲ್ಯ 1 ಕೋಟಿ 92 ಲಕ್ಷದ 12 ಸಾವಿರದ 559 ರೂಪಾಯಿ. ಒಟ್ಟು ಆಸ್ತಿ ಮೌಲ್ಯ 2 ಕೋಟಿ 50 ಲಕ್ಷ 12 ಸಾವಿರದ 559 ರೂಪಾಯಿ ಪತ್ತೆಯಾಗಿದೆ.

ಲೋಕಾ ದಾಳಿ ನಂ.5) ಸಂಜಯ್ ಅಣ್ಣಪ್ಪ ದುರ್ಗಣ್ಣವರ್, ಹೆಲ್ತ್ ಇನ್ಸ್ ಪೆಕ್ಟರ್, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ

ಬೆಳಗಾವಿ ಜಿಲ್ಲೆಯ 3 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ ನಡೆಸಿದ್ದು, ಒಟ್ಟು ಸ್ಥಿರಾಸ್ತಿ ಮೌಲ್ಯ 50 ಲಕ್ಷ 77 ಸಾವಿರ. 4 ನಿವೇಶನ, 1 ವಾಸದ ಮನೆ, 1 ಎಕರೆ ಕೃಷಿ ಜಮೀನು. ಮತ್ತು ಚರಾಸ್ತಿ ಮೌಲ್ಯ 23 ಲಕ್ಷದ 30 ಸಾವಿರದ 514 ರೂಪಾಯಿ. ಮನೆಯಲ್ಲಿ ಸಿಕ್ಕ 2 ಸಾವಿರ 190 ರೂಪಾಯಿ ನಗದು ಹಣ, 9 ಲಕ್ಷ 92 ಸಾವಿರದ 324 ಬೆಲಬಾಳುವ ಚಿನ್ನಾಭರಣಗಳು. 4 ಲಕ್ಷ 50 ಸಾವಿರ ಮೌಲ್ಯದ ವಾಹನಗಳು ಹಾಗೂ 8 ಲಕ್ಷ 86 ಸಾವಿರ ಇತರೆ ಮತ್ತು ಗೃಹೋಪಯೋಗಿ ವಸ್ತುಗಳು. ಅಧಿಕಾರಿಯ ಒಟ್ಟು ಆಸ್ತಿ ಮೌಲ್ಯ – 74 ಲಕ್ಷದ 7 ಸಾವಿರದ 514.

ಲೋಕಾ ದಾಳಿ ನಂ.6) ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ, ಪಿಡಿಓ, ಹುಲಗೇರಿ ಗ್ರಾ.ಪಂ. ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಒಟ್ಟು 3 ಸ್ಥಳಗಳಲ್ಲಿ ಕಾರ್ಯಚರಣೆ ಮಾಡಲಾಗಿದೆ. ಅಧಿಕಾರಿಯ ಸ್ಥಿರಾಸ್ತಿ ಅಂದಾಜು ಮೌಲ್ಯ 1 ಕೋಟಿ 18 ಲಕ್ಷದ 70 ಸಾವಿರ. ಅಧಿಕಾರಿಯ ಹೆಸರಿನಲ್ಲಿ 1 ನಿವೇಶನ, 1 ವಾಸದ ಮನೆ ಇದ್ದು, ಚರಾಸ್ತಿ ಮೌಲ್ಯ 24 ಲಕ್ಣದ 75 ಸಾವಿರದ 630 ರೂಪಾಯಿ. 1 ಲಕ್ಷ 97 ಸಾವಿರದ 130 ನಗದು, 14 ಲಕ್ಷ 28 ಸಾವಿರದ 500 ಮೌಲ್ಯದ ಚಿನ್ನಾಭರಣಗಳು ಹಾಗೂ 8 ಲಕ್ಷ 50 ಸಾವಿರ ಮೌಲ್ಯದ ವಾಹನಗಳು. ಅಧಿಕಾರಿಯ ಎಲ್ಲಾ ಆಸ್ತಿ ಒಟ್ಟು 1 ಕೋಟಿ 43 ಲಕ್ಷದ 45 ಸಾವಿರದ 630 ರೂಪಾಯಿಗಳು ಪತ್ತೆಯಾಗಿದೆ.

ಲೋಕಾಯುಕ್ತ ದಾಳಿ ನಂ.7)ನರಸಿಂಗ ರಾವ್ ಗುಜ್ಜಾರ್, ಅಸಿಸ್ಟಿಂಟ್ ಅಕೌಂಟೆಂಟ್, ಜಿಲ್ಲಾ ಪಂಚಾಯತ್ ಕಚೇರಿ, ರಾಯಚೂರು ಜಿಲ್ಲೆ

ರಾಯಚೂರು ಜಿಲ್ಲೆಯ 2 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ ಮಾಡಲಾಗಿದೆ. ಅಧಿಕಾರಿಯ ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 78 ಲಕ್ಷ. ಅಧಿಕಾರಿ ಹೆಸರಿನಲ್ಲಿ 5 ನಿವೇಶನಗಳು, 2 ವಾಸದ ಮನೆಗಳು ಪತ್ತೆಯಾಗಿದ್ದು, ಚರಾಸ್ತಿ ಮೌಲ್ಯ 42 ಲಕ್ಷ 48 ಸಾವಿರದ 182 ರೂಪಾಯಿಗಳು. 38 ಸಾವಿರದ 182 ರೂಪಾಯಿ ನಗದು ಹಣ, 40 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣಗಳು ಹಾಗೂ 1 ಲಕ್ಷ 70 ಸಾವಿರ ಮೌಲ್ಯದ ವಾಹನಗಳು ಪತ್ತೆ. ಅಧಿಕಾರಿಯ ಒಟ್ಟು ಆಸ್ತಿ ಮೌಲ್ಯ 1 ಕೋಟಿ 20 ಲಕ್ಷ 48 ಸಾವಿರದ 182 ರೂಪಾಯಿಗಳು ಪತ್ತೆಯಾಗಿದೆ.

ಸದ್ಯ ರಾಜ್ಯದ 7 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ ವೇಳೆ ಆದಾಯಕ್ಕೂ ಮೀರಿದ ಅಸಮತೋಲನ ಆಸ್ತಿ ಹೊಂದಿರುವ ಆರೋಪದಲ್ಲಿ 18 ಕೋಟಿಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಆಸ್ತಿಗೆ ಸಂಬಂಧಪಟ್ಟಂತ ಸಮರ್ಪಕ ದಾಖಲೆಗಳನ್ನು ಭ್ರಷ್ಟ ಅಧಿಕಾರಿಗಳು ಒದಗಿಸಬೇಕಾಗುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

ವರದಿ: ಪ್ರದೀಪ್ ಜೊತೆ ಶಿವಪ್ರಸಾದ್ ಟಿವಿನೈನ್ ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ