ಕಾರವಾರ, ಆಗಸ್ಟ್ 07: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಒಂದೆಡೆ ಮಳೆಯಿಂದ ಹಾನಿಯಾದರೇ ಮತ್ತೊಂದೆಡೆ ಭೂ ಕುಸಿತದ ತೀವ್ರತೆ ಹೆಚ್ಚಾಗಿದೆ. ಹೀಗಿರುವಾಗಲೇ ಕಾರವಾರ-ಗೋವಾ (Karwar-Goa) ರಾಷ್ಟ್ರೀಯ ಹೆದ್ದಾರಿ ಸೇತುವೆ ಕುಸಿದು (Bridge collapse) ನಾಮಾವಶೇಷವಾಗಿದೆ. ಹಳೆ ಸೇತುವೆ ಕುಸಿದಿದ್ದು ಹೊಸ ಸೇತುವೆ ಮೇಲೆ ದ್ವಿಮುಖ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಹಾಗಾಗಿ ಸೇತುವೆ ಸಾಮರ್ಥ್ಯದ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತ NHAI ಅಧಿಕಾರಿಗಳು ಆದೇಶಿಸಿದ್ದರೂ ಹೊಸ ಸೇತುವೆ ಸಾಮರ್ಥ್ಯದ ವರದಿ ನೀಡಲು ವಿಳಂಬ ಮಾಡಲಾಗುತ್ತಿದೆ.
ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವುಮಾಡುವ ಬಗ್ಗೆ ಸೇತುವೆ ಸಾಮರ್ಥ್ಯದ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತ ಆದೇಶಿಸಿದೆ. ಆದರೆ ಕಳೆದ 18 ಗಂಟೆಯಿಂದ ಹೊಸ ಸೇತುವೆ ಸಾಮರ್ಥ್ಯದ ವರದಿಗೆ ಹಿಂದೇಟು ಹಾಕುತ್ತಿದೆ. ಭಾರಿ ವಾಹನ ಸಂಚಾರಕ್ಕೆ ಸೇತುವೆ ಸಮರ್ಥವಾಗಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಲು NHAI ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾಳಿ ನದಿ ಹಳೆ ಸೇತುವೆ ಕುಸಿತ; ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧ
ತಾವೇ ನಿರ್ಮಿಸಿದ ಸೇತುವೆ ಸಾಮರ್ಥ್ಯದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುಮಾನ ಮೂಡಿದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸದ್ಯ ಭಾರಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಎನ್ಹೆಚ್ಎಐ ಸರ್ವೆ ನಡೆಸುತ್ತಿದೆ. ಹೀಗಾಗಿ ಸ್ಥಳದಲ್ಲೇ ಅಧಿಕಾರಿಗಳು ಮೊಕ್ಕಾ ಹೂಡಿದ್ದಾರೆ.
ಇದನ್ನೂ ಓದಿ: ಕಾರವಾರ ಸೇತುವೆ ಕುಸಿತ: ಕಾಳಿ ನದಿಗೆ ಬಿದ್ದು ಬದುಕಿ ಬಂದ ರೋಚಕ ಅನುಭವ ವಿವರಿಸಿದ ಲಾರಿ ಚಾಲಕ ಬಾಲ ಮುರುಗನ್
ಲಘು ವಾಹನಗಳಿಗೆ ಅವಕಾಶ ನೀಡಬಹುದೆಂದು ಮಧ್ಯಾಹ್ನ NHAI ವರದಿ ನೀಡಿತ್ತು. ಆದರೆ ಭಾರಿ ವಾಹನಗಳಿಗೆ ಅನುವು ನೀಡುವ ಬಗ್ಗೆ ಇನ್ನೂ ಸರ್ವೆ ಮುಂದುವರೆದಿದೆ. ಪೊಲೀಸರ ಉಪಸ್ಥಿತಿಯಲ್ಲಿ ಅವಕಾಶ ನೀಡಬಹುದೆಂದು ಎನ್ಹೆಚ್ಎಐ ಅಭಿಪ್ರಾಯ ಪಟ್ಟಿದ್ದು ಸೇತುವೆ ಡಿಸೈನರ್ ತಜ್ಞ ಸೋಮಶೇಖರ ಶಾಸ್ತ್ರಿ ಸಲಹೆಯಂತೆ ಅವಕಾಶ ನೀಡಲು ಮುಂದಾಗಿದೆ. ಪೊಲೀಸರ ಕಣ್ಗಾವಲಿನಲ್ಲಿ ಇಂದು ರಾತ್ರಿ ಭಾರಿ ವಾಹನ ಸಂಚಾರ ಸಾಧ್ಯತೆ ಇದೆ. 2013ರಲ್ಲಿ ಕಾರವಾರದಿಂದ ಗೋವಾಗೆ ಸಂಪರ್ಕ ಕಲ್ಪಿಸಲು ಹೊಸ ಸೇತುವೆ ನಿರ್ಮಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.