AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ: ಖುಷಿಯಲ್ಲಿದ್ದ ರೈತರಿಗೆ ಶಾಕ್, ಕಾಫಿ ದರ ದಿಢೀರ್ ಕುಸಿತ

ಕಳೆದ ಮೇ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ದಾಖಲೆ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಸಿಕ್ಕಿ ಮಾರಾಟವಾಗಿತ್ತು. ಕಾಪಿ ದರ ಗಗನಕ್ಕೆ ಏರಿತ್ತು. ಆದರೆ ಈ ತಿಂಗಳು ಕಾಫಿ ಬೆಲೆ ದಿಢೀರನೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ಕಾಫಿ ಬೆಳೆಗಾರರೆಲ್ಲಾ ಮತ್ತಷ್ಟು ದರ ಏರಿಕೆಯಾಗಬಹುದೆಂಬ ನಿರೀಕ್ಷೆಯಿಂದ ತಮ್ಮ ಸಾವಿರಾರು ಟನ್ ಕಾಫಿಯನ್ನ ಮಾರಾಟ ಮಾಡದೆ ಕೂಡಿಟ್ಟಿದ್ದರು. ಆದರೆ ಈಗ ಲೆಕ್ಕಾಚಾರ ತಲೆ ಕೆಳಗಾಗಿದೆ.

ಮಡಿಕೇರಿ: ಖುಷಿಯಲ್ಲಿದ್ದ ರೈತರಿಗೆ ಶಾಕ್, ಕಾಫಿ ದರ ದಿಢೀರ್ ಕುಸಿತ
ಕಾಫಿ
Gopal AS
| Updated By: ಆಯೇಷಾ ಬಾನು|

Updated on: May 15, 2024 | 8:55 AM

Share

ಕೊಡಗು , ಮೇ.15: ಕಾಫಿ ಕಣಜ ಕೊಡಗು ಜಿಲ್ಲೆಯ ಕಾಫಿ (Coffee) ಬೆಳೆಗಾರರ ಮುಖದಲ್ಲಿ ಎಷ್ಟೋ ವರ್ಷಗಳ ಬಳಿಕ ಮಂದಹಾಸ ಮೂಡಿತ್ತು. ನಿರೀಕ್ಷೆಗೂ ಮೀರಿ ಕಾಫಿ ದರ ಗಗನಕ್ಕೇರಿತ್ತು. ಆದರೆ ಇದೀಗ ಏಕಾಏಕಿ ದರ ಕುಸಿತವಾಗುತ್ತಿದೆ. ಇದು ಕಾಫಿ ಕಣಜ ಕೊಡಗು ಜಿಲ್ಲೆಯನ್ನ ಆತಂಕಕ್ಕೆ ದೂಡಿದೆ.

ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದವರೆಗೂ ಖುಷಿಯೋ ಖುಷಿ ಇತ್ತು. ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ರೀತಿ ಕಾಫಿ ಬೆಲೆ ಗಗನಕ್ಕೆ ಏರಿತು. ಪ್ರತಿ ವರ್ಷ 50 ಕೆಜಿ ಕಾಫಿ ಚೀಲಕ್ಕೆ ಅಬ್ಬಬ್ಬಾ ಅಂದ್ರೆ 3 ಸಾವಿರ ರೂ ಆಸುಪಾಸಿನಲ್ಲಿ ಬೆಲೆ ಇರ್ತಾ ಇತ್ತು. ಆದರೆ ಈ ಬಾರಿ ಭರ್ತಿ 11 ಸಾವಿರ ರೂ ವರೆಗೆ ದರ ದಾಖಲಿಸಿತ್ತು. 300% ಅಧಿಕ ದರ ದಾಖಲಿಸಿ ಕೊಡಗಿನ ಸಣ್ಣ ಪುಟ್ಟ ಕಾಫಿ ಬೆಳೆಗಾರರೆಲ್ಲಾ ಇನ್ನಿಲ್ಲದ ಖುಷಿ ಪಟ್ಟಿದ್ದರು. ಆದರೆ ಏಪ್ರಿಲ್ ಅಂತ್ಯದವರೆಗೂ ಏರುಗತಿಯಲ್ಲಿದ್ದ ಕಾಫಿ ದರ ಮೇ ಶುರುವಾಗುತ್ತಲೇ ಇಳಿಕೆಯಾಗಲಾರಂಭಿಸಿದೆ. ಯಾವ ಕಾರಣಕ್ಕಾಗಿ ದರ ಕುಸಿತವಾಗುತ್ತಿದೆ ಎಂಬ ಅರಿವೇ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆ, ಕಾಫಿ ಬೆಳೆಗಾರರಲ್ಲಿ ಹರ್ಷೋಲ್ಲಾಸ

ಜಿಲ್ಲೆಯಲ್ಲಿ ಕಾಫಿ ಬೆಳೆಯ ಬೆಲೆ ಏರಿಕೆಯಾಗುತ್ತಿದ್ದಂತೆ ದೊಡ್ಡ ದೊಡ್ಡ ಕಾಫಿ ಬೆಳೆಗಾರರೆಲ್ಲಾ ಮತ್ತಷ್ಟು ದರ ಏರಿಕೆಯಾಗಬಹುದೆಂಬ ನಿರೀಕ್ಷೆಯಿಂದ ತಮ್ಮ ಸಾವಿರಾರು ಟನ್ ಕಾಫಿಯನ್ನ ಮಾರಾಟ ಮಾಡದೆ ಕೂಡಿಟ್ಟಿದ್ದರು. ಆದರೆ ಇದೀಗ ಏಕಾ ಏಕಿ ಅನಿರೀಕ್ಷಿತವಾಗಿ ಕಾಫಿ ಮಾರುಕಟ್ಟೆ ಇಳಿಕೆಯತ್ತ ಸಾಗಿರುವುದು ಇವರೆಲ್ಲರ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಕುಸಿಯಬಹುದು ಎನ್ನುವ ಆತಂಕವೂ ಇದೆ.

ಕಳೆದ ಮೂರು ವರ್ಷಗಳ ಕಾಲ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆ ನೆಲಕಚ್ಚಿತ್ತು. ಆದರೆ ಈ ಬಾರಿ ಕಾಫಿ ಬೆಳೆ ಕೊಡಗಿನ ರೈತರ ಕೈ ಹಿಡಿದಿದೆ ಎಂದೇ ಎಲ್ಲರು ಭಾವಿಸಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಅನಿಶ್ಚಿತತೆಯಿಂದಾಗಿ ಕೊಡಗಿನ ಕಾಫಿ ಬೆಳೆಗಾರರು ಅತಂತ್ರವಾಗುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ