AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ಬದಲು ಡಿಟರ್ಜೆಂಟ್ ಸೋಪ್: ಗ್ರಾಹಕನಿಗೆ 74,000 ರೂ. ನೀಡುವಂತೆ ಫ್ಲಿಪ್‌ಕಾರ್ಟ್​ಗೆ​ ಕೋರ್ಟ್ ಸೂಚನೆ

ಐಫೋನ್ ಬದಲು ಡಿಟರ್ಜೆಂಟ್ ಸೋಪ್ ಕಳುಹಿಸಿದ್ದ ಫ್ಲಿಪ್‌ಕಾರ್ಟ್​ ವಿರುದ್ಧ ಕೊಪ್ಪಳದ ವಿದ್ಯಾರ್ಥಿಯೋರ್ವ ಸತತ ಮೂರು ವರ್ಷಗಳ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾನೆ.

ಐಫೋನ್ ಬದಲು ಡಿಟರ್ಜೆಂಟ್ ಸೋಪ್: ಗ್ರಾಹಕನಿಗೆ 74,000 ರೂ. ನೀಡುವಂತೆ ಫ್ಲಿಪ್‌ಕಾರ್ಟ್​ಗೆ​ ಕೋರ್ಟ್ ಸೂಚನೆ
ರಮೇಶ್ ಬಿ. ಜವಳಗೇರಾ
|

Updated on: Mar 23, 2023 | 8:51 AM

Share

ಕೊಪ್ಪಳ: ಐಫೋನ್ 11 ( iPhone 11)ಬದಲು ಡಿಟರ್ಜೆಂಟ್ ಸೋಪ್ ಕಳುಹಿಸಿ ವಂಚಿಸಿದ್ದ ಫ್ಲಿಪ್‌ಕಾರ್ಟ್​ಗೆ 74,000 ರೂ. ನೀಡುವಂತೆ ಕರ್ನಾಟಕ ಗ್ರಾಹಕರ ನ್ಯಾಯಾಲಯ ಸೂಚಿಸಿದೆ. ಕೊಪ್ಪಳ(Koppal) ಜಿಲ್ಲೆಯ ಹರ್ಷ ಎನ್ನುವ ವಿದ್ಯಾರ್ಥಿ 2021ರ ಜನವರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂಪಾಯಿ ಮೌಲ್ಯದ iPhone 11 ಆರ್ಡರ್ ಮಾಡಿದ್ದ. ಆದರೆ, ಬಾಕ್ಸ್​ನಲ್ಲಿ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ಡಿಟರ್ಜೆಂಟ್ ಸೋಪ್ ಬಂದಿತ್ತು. ಬಳಿಕ ಹರ್ಷ ಸತತ ಕಾನೂನು ಹೋರಾಟ ನಡೆಸಿದ್ದ. ಅಂತಿಮವಾಗಿ ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ಹರ್ಷನಿಗೆ 74,000 ರೂ. ನೀಡುವಂತೆ ಗ್ರಾಹಕರ ನ್ಯಾಯಾಲಯವು ಫ್ಲಿಪ್‌ಕಾರ್ಟ್​ಗೆ ಆದೇಶಿಸಿದೆ. ಮಾರ್ಚ್ 17ರಂದು ನ್ಯಾಯಾಲಯವು 48,999 ರೂ (ಮೊಬೈಲ್ ಫೋನ್ ವೆಚ್ಚ) ಮರುಪಾವತಿಗೆ ಆದೇಶ ನೀಡಿದೆ. ಮತ್ತು ವಂಚನೆ ಮಾಡಿದ್ದಕ್ಕಾಗಿ 10,000 ರೂ. ಹಾಗೂ ದೂರು ದಾಖಲಿಸಲು ತಗುಲಿದ ವೆಚ್ಚಕ್ಕಾಗಿ 15,000 ರೂ. ಪರಿಹಾರ ನೀಡುವಂತೆ ಫ್ಲಿಪ್‌ಕಾರ್ಟ್​ಗೆ ಸೂಚಿಸಿದೆ.

ಕೊಪ್ಪಳ ಜಿಲ್ಲೆಯ ಹರ್ಷ ಎನ್ನುವ ವಿದ್ಯಾರ್ಥಿ 2021ರ ಜನವರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂಪಾಯಿ ಮೌಲ್ಯದ iPhone 11 ಆರ್ಡರ್ ಮಾಡಿದ್ದ. ಆದರೆ, ಬಾಕ್ಸ್​ನಲ್ಲಿ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ಡಿಟರ್ಜೆಂಟ್ ಸೋಪ್ ಬಂದಿತ್ತು. ಇದರಿಂದ ಅಚ್ಚರಿಗೊಂಡ ಯುವಕ ಫ್ಲಿಪ್‌ಕಾರ್ಟ್ ಟೋಲ್​ ಫ್ರೀ ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ದೂರು ನೀಡಿದ್ದ. ಅವರು ಸಹ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲದಿದ್ದರಿಂದ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದ. ಕಳೆದ ವರ್ಷ ಜುಲೈನಲ್ಲಿ ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂರನೇ ವ್ಯಕ್ತಿಯ ಮಾರಾಟಗಾರ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜರ್ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ಇದೀಗ ಅಂತಿಮವಾಗಿ ಗ್ರಾಹಕ ನ್ಯಾಯಾಲವು ಫೋನಿನ ಹಣದ ಜೊತೆಗೆ ದೂರು ಸಲ್ಲಿಕೆಗೆ ತಗುಲಿದ ಖರ್ಚು ವೆಚ್ಚಗಳು ಸೇರಿದಂತೆ ಒಟ್ಟು 74,000 ರೂ. ಪಾವತಿಸಲು ಹೇಳಿದೆ. ಇದರಿಂದ ವಿದ್ಯಾರ್ಥಿಗೆ ಸತತ ಮೂರು ವರ್ಷಗಳ ಬಳಿಕ ಕಾನೂನು ಹೋರಾಟದಲ್ಲಿ ಗೆಲುವು ಸಿಕ್ಕಂತಾಗಿದೆ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ