ಕೊಪ್ಪಳ: ಜಿಲ್ಲಾ ಒಳಾಂಗಣ ಕ್ರೀಡಾಂಗಣ ಯೋಜನೆ ಕಾಮಗಾರಿ ಬಗ್ಗೆ ಹಾಲಪ್ಪ ಆಚಾರ್ ಅಸಮಾಧಾನ

Koppala News: ಭೂಮಿ ಪೂಜೆಗೂ ಮೊದಲೇ ಪಿಲ್ಲರ್​ ಹಾಕಲು ಬುನಾದಿ ತೆಗೆಯಲಾಗಿದೆ. ಆದರೆ, ಗುತ್ತಿಗೆದಾರರು ಬುನಾದಿಗೆ ಕೇವಲ 3 ರಿಂದ 4 ಅಡಿ ಹಳ್ಳ ತೆಗೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಲಪ್ಪ ಆಚಾರ್​, ಇದು ಸರಿಯಲ್ಲ, ನನಗೆ ಸರಿಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಕೊಪ್ಪಳ: ಜಿಲ್ಲಾ ಒಳಾಂಗಣ ಕ್ರೀಡಾಂಗಣ ಯೋಜನೆ ಕಾಮಗಾರಿ ಬಗ್ಗೆ ಹಾಲಪ್ಪ ಆಚಾರ್ ಅಸಮಾಧಾನ
ಹಾಲಪ್ಪ ಆಚಾರ್ (ಸಂಗ್ರಹ ಚಿತ್ರ)
Edited By:

Updated on: Sep 05, 2021 | 9:33 PM

ಕೊಪ್ಪಳ: ಇಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ನಿರ್ಮಾಣ ಆಗುತ್ತಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಗುಣಮಟ್ಟದ ಕುರಿತು ಗಣಿ ಸಚಿವ ಹಾಲಪ್ಪ ಆಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ತೆಗೆದಿರುವ ಬುನಾದಿ ನನಗೆ ತೃಪ್ತಿಯಿಲ್ಲ ಎಂದು ಹಾಲಪ್ಪ ಆಚಾರ್ ಹೇಳಿದ್ದಾರೆ. ಕಾರ್ಯಕ್ರಮದ ವೇದಿಕೆ ಮೇಲೆಯೇ ಗುಣಮಟ್ಟದ ಬಗ್ಗೆ ಆಕ್ಷೇಪ ಹೊರಹಾಕಿದ್ದಾರೆ.

4.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಭೂಮಿ ಪೂಜೆಗೂ ಮೊದಲೇ ಪಿಲ್ಲರ್​ ಹಾಕಲು ಬುನಾದಿ ತೆಗೆಯಲಾಗಿದೆ. ಆದರೆ, ಗುತ್ತಿಗೆದಾರರು ಬುನಾದಿಗೆ ಕೇವಲ 3 ರಿಂದ 4 ಅಡಿ ಹಳ್ಳ ತೆಗೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಲಪ್ಪ ಆಚಾರ್​, ಇದು ಸರಿಯಲ್ಲ, ನನಗೆ ಸರಿಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರ ಕೆಲಸಕ್ಕೆ ಸಚಿವರಿಂದ ಅಸಮಾಧಾನ ಹೊರಹಾಕಿದ್ದಾರೆ. ಏನಾದರೂ ದುರಂತ ಸಂಭವಿಸಿದರೆ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಚಾಮರಾಜನಗರ: ಐಎಎಸ್ ಅಧಿಕಾರಿಗಳ ಬಗ್ಗೆ ಎಸ್​ಟಿ ಸೋಮಶೇಖರ್
ಐಎಎಸ್​ ಅಧಿಕಾರಿಗಳ ವಿರುದ್ಧ ದೂರು ಹೇಳಿದರೆ ಅವರು ಸತ್ಯವಂತರಂತೆ ವರ್ತಿಸುತ್ತಾರೆ ಎಂದು ಚಾಮರಾಜನಗರದಲ್ಲಿ ಸಚಿವ ಎಸ್​.ಟಿ. ಸೋಮಶೇಖರ್​ ಹೇಳಿಕೆ ನೀಡಿದ್ದಾರೆ. ರೈತರ ಸಾಲಮನ್ನಾ ಬಗ್ಗೆ ಪರಿಶೀಲಿಸಲು ಅಧಿಕಾರಿ ನೇಮಿಸಿದೆ. ರಾಜ್ಯ ಸರ್ಕಾರ ಮನೀಶ್ ಮೌದ್ಗಿಲ್​ರನ್ನು ನೇಮಕ ಮಾಡಿದೆ. ಆದರೆ, 53 ಸಾವಿರ ರೈತರ ಗ್ರೀನ್​ ಲಿಸ್ಟ್​ ಕೊಟ್ಟಿಲ್ಲ. ಒಂದೂವರೆ ವರ್ಷದಿಂದ ಹೇಳುತ್ತಿದ್ದರೂ ಪರಿಶೀಲನೆ ಮಾಡಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಸಾ.ರಾ. ಮಹೇಶ್,​ ಸಭಾಂಗಣ ವಿಚಾರವಾಗಿ ತರಾತುರಿ ಆದೇಶ ನೀಡಿದ್ದಾರೆ. ಈ ಬಗ್ಗೆ ಸಾ.ರಾ.ಮಹೇಶ್ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ ಎಂದು ಎಸ್.ಟಿ. ಸೋಮಶೇಖರ್​ ಹೇಳಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಹೇಳಿದ ಮೇಲೆ ಮತ್ತೆ ಹೇಳಿಕೆ ನೀಡುವುದು ಸರಿಯಲ್ಲ: ಈಶ್ವರಪ್ಪ ಹೇಳಿಕೆಗೆ ಸೋಮಶೇಖರ್, ಕಾರಜೋಳ ಪ್ರತಿಕ್ರಿಯೆ

ಇದನ್ನೂ ಓದಿ: ಸಂತ್ರಸ್ತೆ ತನಿಖೆಗೆ ಸಹಕಾರ ನೀಡುತ್ತಿಲ್ಲ, ಆಕೆಯನ್ನು ಭೇಟಿ ಮಾಡದಂತೆ ಪೋಷಕರು ಪತ್ರ ನೀಡಿದ್ದಾರೆ -ಎಸ್.ಟಿ.ಸೋಮಶೇಖರ್

Loading...
Unable to load recommendations.
Follow Us